ಗೋಕಾಕ:ವಿದ್ಯಾರ್ಥಿಗಳು ಸಂಸ್ಕಾರಗಳನ್ನುಅಳವಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲ ಗೋಳಿಸಕೋಳಬೇಕು
ವಿದ್ಯಾರ್ಥಿಗಳು ಸಂಸ್ಕಾರಗಳನ್ನು ಅಳವಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲ ಗೋಳಿಸಕೋಳಬೇಕು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 5 :
ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಂಸ್ಕೃತಿ , ಸಂಸ್ಕಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲ ಗೋಳಿಸಿ ಕೋಳ್ಳಿರೆಂದು ಇಲ್ಲಿಯ ಕೆಎಲ್ಇ ಸಂಸ್ಥೆಗಳ ಸ್ಥಳೀಯ ಸಮಿತಿಯ ಸದಸ್ಯ ಬಸನಗೌಡಾ ಪಾಟೀಲ ಹೇಳಿದರು
ಬುಧವಾರದಂದು ನಗರದ ಕೆಎಲ್ಇ ಸಂಸ್ಥೆಯ ಸಿ.ಎಸ್.ಅಂಗಡಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಿಂದ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಕಾ ರವಿಲ್ಲದ ವಿದ್ಯೆ ಅರ್ಪೂಣ, ವಿದ್ಯೆ ಮತ್ತು ಸಂಸ್ಕಾರದಿಂದ ಯಶಸ್ವಿನ ಉತ್ತುಂಗಕ್ಕೆ ಏರಲು ಸಾಧ್ಯ. ಕಠಿಣ ಪರಿಶ್ರಮ ಹಾಗೂ ಶಿಸ್ತಿನಿಂದ ಪ್ರಯತ್ನ ಶೀಲರಾಗಿ ಇನ್ನು ಹೆಚ್ಚಿನ ಸಾಧನೆ ಮಾಡುವಂತೆ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿಗೆ ಮತ್ತು ತಾಲೂಕಿಗೆ
ಪ್ರಥಮ ಹಾಗೂ ಜಿಲ್ಲೆಗೆ 7 ನೇ ಸ್ಥಾನ ಪಡೆದ ಆರತಿ ಐದುಡ್ಡಿ , ಕಾಲೇಜಿಗೆ ಮತ್ತು ತಾಲೂಕಿಗೆ ದ್ವಿತೀಯ ಸ್ಥಾನ ಹಾಗೂ ಜಿಲ್ಲೆಗೆ 10 ನೇ ಸ್ಥಾನ ಪಡೆದ ಲಿಂಗರಾಜ ಬೆಡಸೂರ ಸೇರಿದಂತೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಕೆಎಲ್ಇ ಸ್ಥಳೀಯ ಸಂಸ್ಥೆಗಳ ಸದಸ್ಯ ಡಿ.ಸಿ ಬಿದರಿ, ಆಡಳಿತ ಅಧಿಕಾರಿ ಜಿ.ಎಂ.ಅಂದಾನಿ, ಪ್ರಾಚಾರ್ಯ ಕೆ.ಡಿ ಮೆವುಂಡಿಮಠ ಇದ್ದರು.
ಉಪನ್ಯಾಸಕ ಟಿ.ಪಿ ಬಾನಕಾರೆ ಸ್ವಾಗತಿಸಿದರು. ಚೇತನ ಕಾಳೆ ನಿರೂಪಿಸಿದರು , ಎಂ.ಎ ಪಾಟೀಲ ವಂದಿಸಿದರು.