ಗೋಕಾಕ:ಕೊರೋನಾ ಹಿನ್ನೆಲೆ : ಪ್ರತಿವರ್ಷ ಶ್ರಾವಣ ಮಾಸದ ಪ್ರಯುಕ್ತ ನಡೆಯುತ್ತಿದ್ದ ಪ್ರವಚನ ಹಾಗೂ ರುದ್ರಾಭಿಷೇಕ ರದ್ದು
ಕೊರೋನಾ ಹಿನ್ನೆಲೆ : ಪ್ರತಿವರ್ಷ ಶ್ರಾವಣ ಮಾಸದ ಪ್ರಯುಕ್ತ ನಡೆಯುತ್ತಿದ್ದ ಪ್ರವಚನ ಹಾಗೂ ರುದ್ರಾಭಿಷೇಕ ರದ್ದು
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜು 20 :
ಮಹಾಮಾರಿ ಕರೊನಾ ವೈರಸ್ ವ್ಯಾಪಕವಾಗಿ ದಿನದಿಂದ ದಿನಕ್ಕೆ ಹರಡುತ್ತಿರುವ ಹಿನ್ನಲೆಯಲ್ಲಿ ಗೋಕಾಕ ತಾಲೂಕಿನ ಮಮದಾಪೂರ ಗ್ರಾಮದ ಶ್ರೀ ಏಳುಕೋಣೆ ಬಸವಣ್ಣನ ದೇವಾಸ್ಥಾನದಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಪ್ರಯುಕ್ತ ನಡೆಯುತ್ತಿದ್ದ ಪ್ರವಚನ ಹಾಗೂ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಂಗಳವಾರ ಜುಲೈ.21 ರಿಂದ ಆಗಷ್ಟ್.21 ರವರೆಗೆ ಒಂದು ತಿಂಗಳಗಳ ಕಾಲ ರದ್ದುಗೊಳಿಸಲಾಗಿದೆ. ಭಕ್ತರು ಸಹಕರಿಸಬೇಕು ಎಂದು ಸ್ಥಳೀಯ ಶ್ರೀ ಏಳುಕೋಣೆ ಬಸವಣ್ಣನ ದೇವಾಸ್ಥಾನ ಸಮಿತಿ ಪದಾಧಿಕಾರಿಗಳು, ಕಾರ್ಯಕ್ರಮ ಆಯೋಜಕರು, ಹಿರಿಯ ನಾಗರಿಕರು ತಿಳಿಸಿದ್ದಾರೆ.