ಗೋಕಾಕ:ಆಡಳಿತ ವ್ಯವಸ್ಥೆ ಯಾವ ದಿಕ್ಕಿನೆಡೆಗೆ ನಡೆಯುತ್ತಿದೆ ಎಂದು ಸಾರ್ವಜನಿಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು : ಜೆಡಿಎಸ್ ಮುಖಂಡ ಅಶೋಕ ಪೂಜಾರಿ
ಆಡಳಿತ ವ್ಯವಸ್ಥೆ ಯಾವ ದಿಕ್ಕಿನೆಡೆಗೆ ನಡೆಯುತ್ತಿದೆ ಎಂದು ಸಾರ್ವಜನಿಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು : ಜೆಡಿಎಸ್ ಮುಖಂಡ ಅಶೋಕ ಪೂಜಾರಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ 20 :
ಸಾರ್ವಜನಿಕ ಆರೋಗ್ಯದ ಹಿತದೃಷ್ಠಿಯಿಂದ ನಾನು ದಿ: 06 ರಿಂದಲೇ ನನ್ನಸ್ಟಕ್ಕೆ ನಾನೇ ಸ್ವಯಂ ಪ್ರೇರಿತ ಗೃಹ ಬಂಧನ (ಸೇಲ್ಪ ಹೋಮ್ ಕ್ವಾರಂಟೇನ್) ಕ್ಕೆ ಒಳಪಟ್ಟಿದ್ದು, ಇಂದಿಗೆ 14 ದಿವಸಗಳ ಅವಧಿ ಮುಗಿದಿದೆ. ಈ ಅವಧಿಯಲ್ಲಿ ಮದುವೆ, ಅಂತ್ಯ ಸಂಸ್ಕಾರ ಹಾಗೂ ಇನ್ನುಳಿದ ಯಾವುದೇ ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಿಂದ ದೂರ ಉಳಿದಿದ್ದು, ಈ ಕುರಿತು ಸಾರ್ವಜನಿಕರಲ್ಲಿ ವಿಷಾಧಿಸುತ್ತೇನೆ ಎಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಈ ನನ್ನ ಸ್ವಯಂ ಪ್ರೇರಿತ ಕ್ವಾರಂಟೇನ್ ಅವಧಿಯಲ್ಲಿ ಅನೇಕ ಮಹತ್ತರ ಘಟನೆಗಳು ಜರುಗಿವೆ. ಆದರೆ ವಿಶೇಷವಾಗಿ ಗೋಕಾಕ ತಾಲೂಕಿನ ಆಡಳಿತಾತ್ಮಕ ವ್ಯವಸ್ಥೆಗೆ ಪೂರಕವಾಗಿ ಸಾರ್ವಜನಿಕರ ಅನಿಸಿಕೆಗಳನ್ನು ಆಲಿಸುವ ದೃಷ್ಠಿಯಿಂದ ಕರೆದ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣಾ ಸಭೆಗಳಿಗೆ ತಾಲೂಕಾಡಳಿತ ವ್ಯವಸ್ಥೆ ಪಕ್ಷಾತೀತವಾಗಿ ಎಲ್ಲ ಮುಖಂಡರುಗಳನ್ನು ಆಹ್ವಾನಿಸದೇ ಇರುವದು. ಕೋವಿಡ್ ನಿಯಂತ್ರಣಕ್ಕೆ ತಮ್ಮನ್ನೇ ತಾವು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ವೈಧ್ಯರು ಹಾಗೂ ವೈಧ್ಯಕೀಯ ಸಿಬ್ಬಂದಿ ಸೇವೆ ಅತ್ಯಂತ ಅವಶ್ಯಕ ಇರುವಾಗ ಜರುಗಿದ ಡಾ|| ಎಸ್. ಎಮ್. ಹೊಸಮನಿ ಅವರ ವೈಧ್ಯಕೀಯ ಸೇವೆಯ ಸಂದರ್ಭದಲ್ಲಿ ಜರುಗಿದ ಘಟನೆಯ ಪಿರ್ಯಾದಿ ಹಾಗೂ ಪ್ರತಿ ಪಿರ್ಯಾದಿಯ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಯವರು ಪಿರ್ಯಾದಿಯಲ್ಲಿ ಆರೋಪಿತ ವ್ಯಕ್ತಿಗಳ ಕುರಿತು ಘಟನೆಯಲ್ಲಿರುವ ವ್ಯಕ್ತಿಗಳ ಕುರಿತು ಕ್ಲಿನ್ ಚಿಟ್ ಹೇಳಿಕೆ ನೀಡಿರುವದು ಹಾಗೂ ವೈಧ್ಯರ ಸಂಘದ ಸದಸ್ಯರುಗಳ ಮೇಲೆ ಆರೋಪ ಮಾಡಿ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಮಾತನಾಡಿರುವದು ಪೋಲೀಸ್ ಇಲಾಖೆಯ ಪ್ರಾಮಾಣಿಕ ಮತ್ತು ನಿಸ್ಪಕ್ಷಪಾತವಾದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗಿದ್ದು, ಸೂಕ್ಷ್ಮವಾಗಿ ಪೋಲೀಸ್ ತನಿಖಾಧಿಕಾರಿಗಳಿಗೆ ತಮ್ಮ ಅಧಿಕಾರದ ಬಲದಿಂದ ಈ ಪ್ರಕರಣದಲ್ಲಿ ಹಿಗೆಯೇ ವರದಿ ಸಲ್ಲಿಸಿ ಎಂದು ಸೂಕ್ಷ್ಮವಾಗಿ ನಿರ್ದೇಶನ ನೀಡಿದಂತಾಗುತ್ತಿದ್ದು, ಇದು ಅತ್ಯಂತ ಕಳವಳಕಾರಿ ಘಟನೆಯಾಗಿದೆ. ಇಂತಹ ಸಂದರ್ಭದಲ್ಲಿ ತಾಲೂಕಿನ ಆಡಳಿತ ವ್ಯವಸ್ಥೆ ಯಾವ ದಿಕ್ಕಿನೆಡೆಗೆ ನಡೆಯುತ್ತಿದೆ ಎಂದು ಸಾರ್ವಜನಿಕರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಗೋಕಾಕ ವಿಧಾನಸಭಾ ಕ್ಷೇತ್ರದ ಕಳೆದ ನಾಲ್ಕು ಚುನಾವಣೆಗಳ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದ ತಮಗೆ ಭ್ರಮನಿರಸನವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳು ಮತ್ತು ನೀತಿ ಪೂರಕವಾದ ರಾಜಕಾರಣಕ್ಕಿಂತಲೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದ ರಾಜಕೀಯ ಈ ಹೊತ್ತಿನ ವ್ಯವಸ್ಥೆಗೆ ಅನಿವಾರ್ಯವೇ? ಎಂಬ ಜಿಗುಪ್ಸೆಯ ಭಾವನೆ ಬರುತ್ತಿದೆ ಎಂದು ವಿಷಾದದಿಂದ ಹೇಳಿದ್ದಾರೆ.
ಆದರೆ ಮುಂದಿನ ದಿನಗಳಲ್ಲಿ ನಾನು ಗೋಕಾಕ ವಿಧಾನಸಭಾ ಕ್ಷೇತ್ರದ ಚುನಾವಣೆ ಕುರಿತು ಆಸಕ್ತನಾಗಿಲ್ಲ. ಆದರೆ ಗೋಕಾಕ ತಾಲೂಕಿನಲ್ಲಿ ಜನಸಾಮಾನ್ಯರ ಬೇಕು ಬೇಡಿಕೆಗಳಿಗೆ ಸ್ಪಂಧಿಸುವುದರ ಜೊತೆಗೆ ಇಂತಹ ಕಾರ್ಯಗಳಿಗೆ ಪೂರಕವಾಗಿ ಕಾರ್ಯ ಮಾಡಲು ಪ್ರಭಲ ರಾಜಕೀಯ ಸಂಘಟನೆಯನ್ನು ಕಟ್ಟುವುದರ ಜೊತೆಗೆ ಪ್ರಸಂಗ ಬಂದರೆ ಹೋರಾಟಗಳ ಮೂಲಕ ನ್ಯಾಯ ದೊರಕಿಸಿ ಕೊಡಲು ಅನಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.