RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಅನೈತಿಕ ಸಂಭಂಧ : ಪ್ರೀಯಕನ ಜೊತೆ ಸೇರಿ ಪತಿಯನ್ನೆ ಧಾರುಣವಾಗಿ ಕೊಲೆಗೈದ ಆರೋಪಿಗಳು ಅಂದರ್

ಗೋಕಾಕ:ಅನೈತಿಕ ಸಂಭಂಧ : ಪ್ರೀಯಕನ ಜೊತೆ ಸೇರಿ ಪತಿಯನ್ನೆ ಧಾರುಣವಾಗಿ ಕೊಲೆಗೈದ ಆರೋಪಿಗಳು ಅಂದರ್ 

ಅನೈತಿಕ ಸಂಭಂಧ : ಪ್ರೀಯಕನ ಜೊತೆ ಸೇರಿ ಪತಿಯನ್ನೆ ಧಾರುಣವಾಗಿ ಕೊಲೆಗೈದ ಆರೋಪಿಗಳು ಅಂದರ್

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 7 :

 

 
ಅನೈತಿಕ ಸಂಭಂಧ ಹಿನ್ನಲೆ ಪ್ರೀಯಕನ ಜೊತೆ ಸೇರಿ ಪತಿಯನ್ನೆ ಧಾರುಣವಾಗಿ ಕೊಲೆಗೈದ ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ ಪೋಲಿಸರು ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನಲೆ: ಮಾರ್ಚ 24 ರಂದು ನಗರದ ಸಮೀಪದ ಮಾಣಿಕವಾಡಿ ಗ್ರಾಮದ ಅಪ್ಪಣ್ಣ ಸಂಭಾಜಿ ಸನದಿ (40) ಮೃತ ದುರ್ದೈವಿಯಾಗಿದ್ದು. ಅಪ್ಪಣ್ಣ ಪತ್ನಿ ಯಲ್ಲವ್ವ ಅಪ್ಪಣ್ಣ ಸನದಿ (31) ಹಾಗೂ ತಾಲೂಕಿನ ಮೆಳವಂಕಿ ಗ್ರಾಮದ ಆಕೆಯ ಪ್ರೀಯಕರ ವೀರುಪಾಕ್ಷಿ ಚಂದ್ರಯ್ಯ ಮಠಪತಿ ಕಳೆದ ಕೆಲವು ವರ್ಷಗಳಿಂದ ಇಬ್ಬರ ನಡುವೆಯೂ ಅನೈತಿಕ ಸಂಭಂಧ ಹೊಂದಿದ್ದು, ಯಲ್ಲವ್ವ ಹಾಗೂ ವೀರುಪಾಕ್ಷ ಇಬ್ಬರೂ ನಗರದ ಖಾಸಗಿ ಕಂಪಣಿಯ ಶೋರೂಮನಲ್ಲಿ ಕಾರ್ಯನಿರ್ವಹಿಸತ್ತಿದ್ದರು. ಯಲ್ಲವ್ವ ಹಾಗೂ ವೀರುಪಾಕ್ಷ ನಡುವಿನ ಅನೈತಿಕ ಸಂಭಂದ ಪತಿ ಅಪ್ಪಣ್ಣನಿಗೆ ತಿಳಿದು ಪತ್ನಿ ಯಲ್ಲವ್ವನ ಮೇಲೆ ಹೊಡಿಬಡಿ ಮಾಡುತ್ತಿದ್ದನ್ನು ಮನಗಂಡ ಯಲ್ಲವ್ವ ಹಾಗೂ ವೀರುಪಾಕ್ಷಿ ಅಪ್ಪಣ್ಣನನ್ನು ಕೊಲೈಗೈಯ್ಯಲು ತೀರ್ಮಾನಿಸಿ, ಮಾರ್ಚ 24 ರಂದು ತಾಲೂಕಿನ ಬಿಲಕುಂದಿ ಗ್ರಾಮದ ದುಂಡಪ್ಪ ಸಿದ್ದಪ್ಪ ಕಪರಟ್ಟಿ ಅವರ ಹೊಲಕ್ಕೆ ಅಪ್ಪಣ್ಣನ್ನು ಕರೆದೊಯ್ದ ವೀರುಪಾಕ್ಷಿ ಹಾಗೂ ಯಲ್ಲವ್ವ ಅಪ್ಪಣ್ಣನ ಮರ್ಮಾಂಗಕ್ಕೆ ಒದ್ದು, ಕತ್ತು ಹಿಸುಕಿ ಕೊಲೈಗಿದು. ಕೊಲೆಯ ಸಾಕ್ಷಿ ನಾಶಪಡಿಸಿ, ಪ್ರಕರಣ ದಾರಿತಪ್ಪಿಸಲು ಬಿಲಕುಂದಿ ಗ್ರಾಮದಿಂದ ಮೋಟಾರು ಸೈಕಲ್ ಮೇಲೆ ತೆಗೆದುಕೊಂಡು ನಗರದ ಸಮೀಪದ ಶೆಟ್ಟೆವನ ತೋಟದ ಘಟಪ್ರಭಾ ನದಿಯಲ್ಲಿ ಮೃತ ಅಪ್ಪಣ್ಣನ ಬಟ್ಟೆ ಬಿಚ್ಚಿ ಎಸೆದಿದ್ದರು. ಅಲ್ಲದೇ ಈ ಕೊಲೆಯ ಬಗ್ಗೆ ಎಲ್ಲಾದರೂ ಬಾಯ್ಬಿಟ್ಟಲ್ಲಿ ನಿನ್ನನ್ನು ಸಹ ಕೊಲೆ ಮಾಡುವದಾಗಿ ರವಿಗೆ ಬೇದರಿಕೆಯೊಡ್ಡಿದ್ದಾರೆ.
ಮಾರ್ಚ 24ರಂದು ರಾತ್ರಿ ಯಲ್ಲವ್ವ ನಗರಠಾಣೆಯಲ್ಲಿ ಅಪ್ಪಣ್ಣ ಕಾಣೆಯಾಗಿರುವದಾಗಿ ದೂರು ನೀಡಿದ್ದಳು, ನಂತರ ದಿ.26 ರಂದು ಘಟಪ್ರಭಾ ನದಿಯಲ್ಲಿ ಮೃತ ಅಪ್ಪಣ್ಣನ ಶವ ನೀರಿನಲ್ಲಿ ತೆಲುತ್ತಿರುವದನ್ನು ಗಮಿನಸಿದ ಪೋಲಿಸರು ಶವವನ್ನು ಹೊರಕ್ಕೆ ತೆಗೆದು ಸರಕಾರಿ ಆಸ್ಪತ್ರೆಯಲ್ಲಿ ಪಂಚನಾಮೆ ಮಾಡಿ ಶವವನ್ನು ಪತ್ನಿಗೆ ಹಸ್ತಾಂತರಿಸಿದ್ದರು. ಮೃತ ಅಪ್ಪಣ್ಣನ ತನಿಖೆ ನಡೆಸಿದ್ದ ಪೋಲಿಸರಿಗೆ ಯಲ್ಲವ್ವ ಹಾಗೂ ವೀರುಪಾಕ್ಷ ನಡುವಿನ ಅನೈತಿಕ ಸಂಭಂಧದ ಹಿನ್ನಲೆ ಅಪ್ಪಣ್ಣನ ಕೊಲೆ ಮಾಡಿರುವದಾಗಿ ಖಂಡ್ರಟ್ಟಿ ಗ್ರಾಮದ ರವಿ ಬಡಿಗವಾಡ ದೂರು ನೀಡಿದ ಹಿನ್ನಲೆ ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ, ಡಿಎಸ್‍ಪಿ ಪ್ರಭು ಡಿ ಟಿ, ನೇತ್ರತ್ವದಲ್ಲಿ ಸಿಪಿಐ ಗೋಪಾಲ ರಾಠೋಡ, ಶಹರಠಾಣೆ ಪಿಎಸ್‍ಐ ಎ ಟಿ ಅಮ್ಮಿನಭಾಂವಿ ಅವರ ಸಾರಥ್ಯದಲ್ಲಿ ಶಿವಾನಂದ ಕಸ್ತೂರಿ, ಅಶೋಕ ಶಾಂಡಗೆ, ಮಂಜುನಾಥ ದೇಶನೂರ, ಶಿವಾನಂದ ದೇಸಾಯಿ, ಫಕೀರಗೌಡ ಪಾಟೀಲ ಸೇರಿದಂತೆ ಇನ್ನು ಹಲವು ನಗರ ಪೋಲಿಸ್ ಸಿಬ್ಬಂಧಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕರೋನಾ ಮಹಾಮಾರಿ ಹಿನ್ನಲೆ ಸರಕಾರ ಲಾಕ್ ಡೌನ್ ಹೊರಡಿಸಿದ್ದು, ಲಾಕ್ ಡೌನ್ ಕಾರ್ಯದ ನಡುವೆಯೂ ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದನ್ನು ಸಾರ್ವಜನಿಕರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

Related posts: