ಘಟಪ್ರಭಾ:ಹಾಲು, ವೈದ್ಯಕೀಯ ಸೌಲಭ್ಯ,ಔಷಧಿ ಅಂಗಡಿ, ಕಿರಾಣಿ ಅಂಗಡಿಗಳನ್ನು ಹೊರತು ಪಡಿಸಿ ಎಲ್ಲ ಅಂಗಡಿಗಳನ್ನು ಮಾರ್ಚ 31 ವರೆಗೆ ಬಂದ
ಹಾಲು, ವೈದ್ಯಕೀಯ ಸೌಲಭ್ಯ,ಔಷಧಿ ಅಂಗಡಿ, ಕಿರಾಣಿ ಅಂಗಡಿಗಳನ್ನು ಹೊರತು ಪಡಿಸಿ ಎಲ್ಲ ಅಂಗಡಿಗಳನ್ನು ಮಾರ್ಚ 31 ವರೆಗೆ ಬಂದ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮಾ 23 :
ಹಾಲು, ವೈದ್ಯಕೀಯ ಸೌಲಭ್ಯ, ಹಾಗೂ ಔಷಧಿ ಅಂಗಡಿ ಮತ್ತು ಕಿರಾಣಿ ಅಂಗಡಿಗಳನ್ನು ಹೊರತು ಪಡಿಸಿ ಎಲ್ಲ ಅಂಗಡಿಗಳನ್ನು ಮಾರ್ಚ 31 ನಂತರ ಮುಂದಿನ ಆದೇಶ ಬರುವವರೆಗೆ ಬಂದಮಾಡಬೇಕು ಎಂದು ಘಟಪ್ರಭಾ ಪಿಎಸ್ಆಯ್ ಎಚ್.ವಾಯ್ ಬಾಲದಂಡಿ ಹೇಳಿದರು.
ಅವರು ಸೋಮವಾರದಂದು ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಸ್ಥಳೀಯ ಅಂಗಡಿಕಾರರ ಸಭೆಯನ್ನದ್ದೆಶಿಸಿ ಮಾತನಾಡುತ್ತಿದ್ದರು. ಕೋರೊನಾ ವೈರಸ್ ಎಲ್ಲ ಕಡೆಗೆ ಹರಡುತ್ತಿದ್ದು ಅದನ್ನು ತಡೆಗಟ್ಟಲು ಅಂಗಡಿಗಳನ್ನು ಬಂದು ಮಾಡಿ ಸಹಕರಿಬೇಕೆಂದು ಅಂಗಡಿ ಮಾಲಕರಲ್ಲಿ ಮನವಿ ಮಾಡಿದರು. ಯಾರ ಅಂಗÀಡಿಗಳನ್ನು ಬಂದ ಮಾಡಿಸಬೇಕೆಂಬ ದುರುದ್ದೇಶ ನಮ್ಮಲ್ಲಿ ಇಲ್ಲ ಮಹಾಮಾರಿ ಕೆರೋನಾ ರೋಗವನ್ನು ತಡೆಗಟ್ಟಲು ಸರ್ಕಾರ ನೀಡಿದ ಆದೇಶವನ್ನು ನಾವು ಪಾಲಿಸಬೇಕಾಗುತ್ತದೆ ಎಂದರು. ರವಿವಾರದಂದು ಜನತಾ ಕಪ್ರ್ಯುದ ದಿನ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿ ಸಹಕರಿದ್ದಕ್ಕೆ ದನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಧುಪದಾಳ ಗ್ರಾಮ ಲೆಕ್ಕಾಧಿಕರಿ ಎಮ್.ಎಸ್. ಗಟಕರಿ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿ.ಎಸ್ ರಜಪೂತ, ಸಿ.ಆಯ್.ಅಗಂಡಿ, ಗಣೇಶ ಗಾಣಿಗ, ಗುರು ಗೌರಾಣಿ, ಉಸ್ಮಾನ ನಾಶಿಪುಡಿ, ಬಸವರಾಜ ಮಗದುಮ್ಮ ಸೇರಿದಂತೆ ಅನೇಕರು ಇದ್ದರು.