ಗೋಕಾಕ:ಮಕ್ಕಳಿಗೆ ಪಾಲಕರು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ : ಬಿಇಒ ಜಿ.ಬಿ.ಬಳಗಾರ
ಮಕ್ಕಳಿಗೆ ಪಾಲಕರು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ : ಬಿಇಒ ಜಿ.ಬಿ.ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 29 :
ಮನೆಯನ್ನು ಬೆಳಗುವ ನಂದಾದೀಪಗಳಾದ ಮಕ್ಕಳಿಗೆ ಪಾಲಕರು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ಶುಕ್ರವಾರದಂದು ರಾತ್ರಿ ಇಲ್ಲಿಯ ಅಲ್ ಫಲ್ಹಾ ಮೈನಾರಿಟಿ ಎಜುಕೇಶನಲ್ ಚಾರಿಟೇಬಲ್ ಆಂಡ್ಯ್ ವೆಲ್ಫೇರ್ ಸೊಸಾಯಿಟಿಯ ಕ್ರಿಸೆಂಟ್ ಉರ್ದು ಹಾಗೂ ಆಂಗ್ಲ ಮಾಧ್ಯಮ ಶಾಲೆಯ 11ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳಲ್ಲಿ ಆದರ್ಶ ಗುಣಗಳನ್ನು ಬೆಳೆಸಿ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡುವಂತೆ ಹೇಳಿದರು.
ಪಾಲಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ತಮ್ಮ ಮಕ್ಕಳು ಗೌರವಾನ್ವಿತ ವ್ಯಕ್ತಿಗಳಾಗಿಸುವ ಕನಸನ್ನು ನನಸಾಗಿಸಲು ಶ್ರಮಿಸಬೇಕು. ಇಂದಿನ ತಾಂತ್ರಿಕ ಯುಗದ ಜಂಜಾಟದ ಜೀವನದಲ್ಲಿ ಮಕ್ಕಳ ಸಲುವಾಗಿ ಸಮಯವನ್ನು ನೀಡಿ ಅವರ ಶಿಕ್ಷಣದತ್ತ ಗಮನ ಹರಿಸಿ ಅವರ ಬದುಕನ್ನು ಕಟ್ಟಿಕೊಳ್ಳುವಂತ ಮಾರ್ಗದರ್ಶನವನ್ನು ನೀಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎಸ್.ಎ.ಕೊತವಾಲ, ಎ.ಎ.ದೇಸಾಯಿ, ಎ.ಕೆ.ಗೋಕಾಕ, ಕ್ಷೇತ್ರಸಮನ್ವಯ ಅಧಿಕಾರಿ ಎಮ್.ಬಿ.ಪಾಟೀಲ, ಗಣ್ಯರಾದ ಮಹಾಂತೇಶ ತಾವಂಶಿ, ಪರಶುರಾಮ ಭಗತ, ದಾದಾಫೀರ ಶಾಬಾಶಖಾನ, ಶ್ರವಣ ಮನ್ನಿಕೇರಿ, ಡಾ.ಅರುಣ ತುಪ್ಪದ, ಹುಸೇನ ಫನಿಬಂದ, ಮಲ್ಲಿಕ ಪೈಲವಾನ, ಸಂಸ್ಥೆಯ ಗೌರವಾಧ್ಯಕ್ಷ ಗುಲಾಬಸಾಬ ಮಕಾನದಾರ, ಅಧ್ಯಕ್ಷ ನಜೀರಹ್ಮದ ಪೈಲವಾನ, ಪದಾಧಿಕಾರಿಗಳಾದ ಮುನ್ನಾ ನಡುಗಡ್ಡೆವಾಲೆ, ಇಸ್ಮಾಯಿಲ್ ಮೊಕಾಶಿ, ಶಫಿಉಲ್ಲಾ ಅವಟಿ, ಅಬ್ದುಲಖಾದರ ಪೀರಜಾದೆ, ಪೀರಾಜಿ ರಾಜಗೂಳಿ, ಜುಬೇರಹ್ಮದ ಪಟೇಲ್, ಇಮ್ರಾನ ಕಾಲೇಬಾಯಿ, ಮಹ್ಮದಶೇಖ ಮುಲ್ಲಾ, ಅಬ್ದುಲ್ಕರಿಂ ಚಟ್ನಿ ಸೇರಿದಂತೆ ಅನೇಕರು ಇದ್ದರು.