ಘಟಪ್ರಭಾ:ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ರಿಂದ ಗುದ್ದಲಿ ಪೂಜೆ
ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ರಿಂದ ಗುದ್ದಲಿ ಪೂಜೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜ 30:
ಸಮೀಪದ ಧುಪದಾಳ ಗ್ರಾಮದಲ್ಲಿ ಸುಣ್ಣದ ಭಟ್ಟಿಯಿಂದ ಜನತಾ ಪ್ಲಾಟದವರಗೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 15 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ಗುದ್ದಲಿ ಪೂಜೆ ನೆರವೇರಿಸಿ ಗುರುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎಮ್.ದಳವಾಯಿ, ಜಿ.ಪಂ ಸದಸ್ಯೆ ಮೀನಾಕ್ಷಿ ಜೋಡಟ್ಟಿ, ತಾ.ಪಂ ಸದಸ್ಯ ಲಗಮಣ್ಣಾ ನಾಗನ್ನವರ, ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ, ಸದಸ್ಯರಾದ ವಿನಯ ಜಾಧವ, ರಾಜಶೇಖರ ರಜಪೂತ, ಬಾಹುಬಲಿ ಕಡಹಟ್ಟಿ, ಕಲ್ಲಪ್ಪ ಸನದಿ, ನಾಗರಾಜ ನಾಯಿಕ, ಬಶೀರ ಬನಜವಾಡ, ಮುಖಂಡರಾದ ಮಹೇಶಗೌಡಾ ಪಾಟೀಲ, ಪರಶುರಾಮ ಗಾಡಿವಡ್ಡರ, ಜಿನ್ನಪ್ಪ ಕಮತಿ, ಮೆಹಬೂಬಖಾನ ಕಡಲಗಿ, ಭೀಮಶಿ ದೇಮನ್ನವರ, ಶಿವಾನಂದ ಚೌಕಶಿ, ಶೀತಲ ದೇಮನ್ನವರ, ಸುಧೀರ ಜೋಡಟ್ಟಿ ಸೇರಿದಂತೆ ಗ್ರಾ.ಪಂ ಸದಸ್ಯರು ಹಿರಿಯರು ಉಪಸ್ಥಿತರಿದ್ದರು.