ಗೋಕಾಕ:ರಾಜ್ಯ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಕುಮಾರಿ ರಕ್ಷಿತಾ ರಾಜ್ಯಕ್ಕೆ ಪ್ರಥಮ
ರಾಜ್ಯ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಕುಮಾರಿ ರಕ್ಷಿತಾ ರಾಜ್ಯಕ್ಕೆ ಪ್ರಥಮ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 1:
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಗೋಕಾಕ ವಲಯದ ಸ ಪ ಪೂ ಮಹಾವಿದ್ಯಾಲಯದ ಹತ್ತನೇ ವರ್ಗದ ವಿದ್ಯಾರ್ಥಿನಿ ಕುಮಾರಿ ರಕ್ಷಿತಾ ಕುರಬೇಟ ಇವಳು ಪ್ರಥಮ ಸ್ಥಾನ ಪಡೆದು ಶಾಲೆಗೆ,ಗೋಕಾಕ ವಲಯಕ್ಕೆ ಹಾಗೂ ಚಿಕ್ಕೋಡಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.ಅವಳ ಈ ಸಾಧನೆಗೆ ಗೋಕಾಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಜಿ ಬಿ ಬಳಗಾರ ಶಾಲೆಗೆ ಆಗಮಿಸಿ ರಕ್ಷಿತಾಳನ್ನು ಸನ್ಮಾನ ಮಾಡಿ ಅಭಿನಂದನೆಗಳನ್ನು ಹೇಳಿ ಅವಳ ಸಾಧನೆಯನ್ನು ಪ್ರಶಂಸಿದರು.ಈ ಸನ್ಮಾನ ಸಮಾರಂಭದಲ್ಲಿ ಬಿ ಆರ್ ಸಿ ಸಮನ್ವಯಾಧಿಕಾರಿ ಎಮ್ ಬಿ ಪಾಟೀಲ, ಜಿ ಎನ್ ಎಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಜಿ ಆರ್ ಮಾಳಗಿ, ಸ್ಟೆಪ್ಸನ ಸಂಚಾಲಕರಾದ ಜಿ ಬಿ ನೇಸರಗಿ ಮತ್ತು ಸದರಿ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು. ಸದರಿ ವಿದ್ಯಾರ್ಥಿ ನಿಯ ಸಾಧನೆಗೆ ಸಿಬ್ಬಂದಿ ವರ್ಗ ,ಎಸ್ ಡಿ ಎಮ್ ಸಿ ,ಕ್ಷೇತ್ರ ಶಿಕ್ಷಣಾಧಿಕಾರಿಗಳು ,ಉಪನಿರ್ದೇಶಕರು ಹಾಗೂ ಸ್ಥಳೀಯ ಶಾಸಕರು ಅಭಿನಂದನೆಗಳನ್ನು ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.