RNI NO. KARKAN/2006/27779|Monday, June 16, 2025
You are here: Home » breaking news » ಬೆಳಗಾವಿ:ಲಖನ ಜಾರಕಿಹೊಳಿ ಒಬ್ಬ ದ್ರೋಹಿ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ : ರಮೇಶ ಜಾರಕಿಹೊಳಿ ಗಂಭೀರ ಆರೋಪ

ಬೆಳಗಾವಿ:ಲಖನ ಜಾರಕಿಹೊಳಿ ಒಬ್ಬ ದ್ರೋಹಿ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ : ರಮೇಶ ಜಾರಕಿಹೊಳಿ ಗಂಭೀರ ಆರೋಪ 

ಲಖನ ಜಾರಕಿಹೊಳಿ ಒಬ್ಬ ದ್ರೋಹಿ ನನ್ನ  ಬೆನ್ನಿಗೆ ಚೂರಿ ಹಾಕಿದ್ದಾನೆ  : ರಮೇಶ ಜಾರಕಿಹೊಳಿ ಗಂಭೀರ ಆರೋಪ

ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ನ 15  :

ಲಖನ್ ಜಾರಕಿಹೊಳಿ ಒಬ್ಬ ದ್ರೋಹಿ , ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ಮಾಜಿ ಸಚಿವ ರಮೇಶ ಗಂಭೀರವಾಗಿ ಆರೋಪಿಸಿದರು

ಶುಕ್ರವಾರದಂದು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸತೀಶ ಜಾರಕಿಹೊಳಿ ತಮ್ಮ ಪಕ್ಷದ ಪರ ಕೆಲಸ ಮಾಡಿದ್ದಾನೆ ಅದು ಅವನ ಕರ್ತವ್ಯ ಆದರೆ ಲಖನ್ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ ಎಂದು ಕಿರಿಯ ಸಹೋದರ ತನ್ನ ಪ್ರತಿ ಸ್ವರ್ಧಿ ಲಖನ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದ ಅವರು, ಸಿದ್ದರಾಮಯ್ಯ ಯಾವತ್ತೂ ನನಗೆ ರಾಜಕೀಯ ಗುರು ಆಗಿರಲಿಲ್ಲ. ನನ್ನ ರಾಜಕೀಯ ಗುರು ಮೂಲ ಕಾಂಗ್ರೆಸಿಗರಾಗಿದ್ದ ಎಚ್ ವಿಶ್ವನಾಥ  ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ನನಗಿಂತ ಜ್ಯೂನಿಯರ್ ಆಗಿದ್ದವರು.  ಆದರೆ ಸತೀಶ  ಜಾರಕಿಹೊಳಿ ಕುತಂತ್ರದಿಂದ ನನ್ನನ್ನೇ ಪಕ್ಷದಿಂದ ಹೊರಹಾಕಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Related posts: