ಗೋಕಾಕ:ಅಯೋಧ್ಯಾ ತೀರ್ಪು ಹಿನ್ನೆಲೆ ನಾಳೆ ಶಾಲೆಗಳಿಗೆ ರಜೆ : ಬಿಇಒ ಜಿ.ಬಿ ಬಳಗಾರ

ಅಯೋಧ್ಯಾ ತೀರ್ಪು ಹಿನ್ನೆಲೆ ನಾಳೆ ಶಾಲೆಗಳಿಗೆ ರಜೆ : ಬಿಇಒ ಜಿ.ಬಿ ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 8 :
ನಾಳೆ ಶನಿವಾರ ಅಯೋಧ್ಯಾ ಅಂತಿಮ ತೀರ್ಪು ಹೊರಬಿಳುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಿಳಿಸಿದ್ದಾರೆ
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು
ಶಿಕ್ಷಣ ಸಚಿವ ಸುರೇಶ ಕುಮಾರ ಹಾಗೂ ಚಿಕ್ಕೋಡಿ ಡಿಡಿಪಿಐ ಮೋಹನ ಕುಮಾರ ಹಂಚಾಟೆ ಅವರ ಆದೇಶದ ಮೇರೆಗೆ ನಾಳೆ ಗೋಕಾಕ ವಲಯದ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಬಳಗಾರ ತಿಳಿಸಿದ್ದಾರೆ