ಗೋಕಾಕ:ಸಾಕು ಪ್ರಾಣಿಗಳಿಗೆ ಯಾವುದೇ ತರನಾದ ರೋಗಗಳು ಬರದಂತೆ ರೈತರು ಜಾಗೃತಿಯನ್ನು ವಹಿಸಿ: ಡಾ|| ಮೋಹನ ಕಮತ

ಸಾಕು ಪ್ರಾಣಿಗಳಿಗೆ ಯಾವುದೇ ತರನಾದ ರೋಗಗಳು ಬರದಂತೆ ರೈತರು ಜಾಗೃತಿಯನ್ನು ವಹಿಸಿ: ಡಾ|| ಮೋಹನ ಕಮತ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 14 :
ಸಾಕು ಪ್ರಾಣಿಗಳಿಗೆ ಯಾವುದೇ ತರನಾದ ರೋಗಗಳು ಬರದಂತೆ ರೈತರು ಜಾಗೃತಿಯನ್ನು ವಹಿಸಬೇಕೆಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಮೋಹನ ಕಮತ ಹೇಳಿದರು.
ಸೋಮವಾರದಂದು ತಾಲೂಕಿನ ಖನಗಾಂವ ಗ್ರಾಮದ ಪಶು ಚಿಕಿತ್ಸಾಲಯದ ಆವರಣದಲ್ಲಿ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣದ ಅಂಗವಾಗಿ 16ನೇ ಸುತ್ತಿನ ಲಸಿಕಾ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ರೈತರ ಉಪಜೀವನಕ್ಕೆ ಅನುಕೂಲವಾಗಿ ಜಾನುವಾರಗಳ ಆರೈಕೆಯಲ್ಲಿ ಮುರ್ತುವರ್ಜಿಯನ್ನು ವಹಿಸಬೇಕು. ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು. ಇದರ ನಿಮಿತ್ಯ ತಾಲೂಕಿನಾಧ್ಯಾಂತ 13 ತಂಡಗಳನ್ನು ರಚಿಸಿದ್ದು, ನಮ್ಮ ತಂಡದಿಂದ ಲಸಿಕೆಗಳನ್ನು ನೀಡಲಾಗುವುದು ರೈತರ ಇದರ ಪ್ರಯೋಜನೆಯನ್ನು ಪಡೆದುಕೊಂಡು ರೋಗ-ರುಜಿನಗಳ ಬರದಂತೆ ಜಾಗೃತಿಯನ್ನು ವಹಿಸಬೇಕೆಂದು ತಿಳಿಸಿದರು.
ಲಸಿಕಾ ವಿತರಣಾ ಕಾರ್ಯಕ್ರಮಕ್ಕೆ ಖನಗಾಂವ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀದೇವಿ ಪಾಟೀಲ ಅವರು ಗೋ-ಪೂಜೆಯನ್ನು ನೆರವೇರಿಸುವ ಮೂಲಕ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಟಿ.ಆರ್.ಕಾಗಲ, ಮಾಜಿ ಸದಸ್ಯ ನಿಂಗಪ್ಪ ಗಡಜನ್ನವರ, ಶಿವಕ್ಕ ಪೂಜೇರಿ, ಪಶು ವೈದ್ಯಾಧಿಕಾರಿ ಡಾ|| ಪುರಂದರ ಕಾಂಬಳೆ ಸೇರಿದಂತೆ ಅನೇಕರು ಇದ್ದರು.