RNI NO. KARKAN/2006/27779|Saturday, June 14, 2025
You are here: Home » breaking news » ಗೋಕಾಕ:ಉಪಚುನಾವಣೆ ಡೇಟ್ ಫಿಕ್ಸ್: ಅ.24 ರಿಂದ ಗೋಕಾಕನಲ್ಲಿ ಹೊಸ ಸಾರಥಿಯ ದರ್ಬಾರ್!

ಗೋಕಾಕ:ಉಪಚುನಾವಣೆ ಡೇಟ್ ಫಿಕ್ಸ್: ಅ.24 ರಿಂದ ಗೋಕಾಕನಲ್ಲಿ ಹೊಸ ಸಾರಥಿಯ ದರ್ಬಾರ್! 

ಉಪಚುನಾವಣೆ ಡೇಟ್ ಫಿಕ್ಸ್: ಅ.24 ರಿಂದ ಗೋಕಾಕನಲ್ಲಿ ಹೊಸ ಸಾರಥಿಯ ದರ್ಬಾರ್!

 

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 21:

 
ಶಾಸಕರ ಅರ್ನಹತೆಯಿಂದ ತೆರುವಾಗಿದ್ದ, ರಾಜ್ಯದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರದಲ್ಲಿ ಉಪ ಚುನಾವಣೆ ಘೋಷಣೆಯಾಗಿದೆ ಅ 21 ಕ್ಕೆ ಮತದಾನ ನಡೆಯಲ್ಲಿದ್ದು, ಅ. 24 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಅರ್ನಹ ಶಾಸಕರು ಚುನಾವಣೆಯಲ್ಲಿ ಸ್ವರ್ಧಿಸುವಂತಿಲ್ಲಾ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ ಅವರು ಹೇಳಿರುವ ಹೇಳಿಕೆಯಿಂದ ಅರ್ನಹ ಶಾಸಕರಲ್ಲಿ ಆತಂಕದ ಛಾಯೆ ಆವರಿಸಿದೆ. ಮಾಜಿ ಸ್ಪೀಕರ್ ರಮೇಶ ಕುಮಾರ ಅವರ ಆದೇಶವನ್ನು ಎತ್ತಿ ಹಿಡಿದಿರುವ ಚುನಾವಣಾ ಆಯೋಗವು ಈ ನಿರ್ಧಾರವನ್ನು ಪ್ರಕಟಿಸಿದೆ
ಬಹು ನಿರೀಕ್ಷಿತ ಗೋಕಾಕ ಕ್ಷೇತ್ರವೂ ಸಹ ಈ ಪಟ್ಟಿಯಲ್ಲಿ ಸೇರಿದ್ದು , ಇಲ್ಲಿಯ ಚುನಾವಣೆ ಕಾವು ಇಡೀ ರಾಜ್ಯದಲ್ಲೇ ಸದ್ದು ಮಾಡಲಿದೆ ಉಪ ಚುನಾವಣೆ ಘೋಷಣೆಗೂ ಮೊದಲೇ ಇಲ್ಲಿ ಜಾರಕಿಹೊಳಿ ಸಹೋದರರ ವಾಕ್ ಸಮರ ಶುರುವಾಗಿದ್ದು ಇದು ಇನ್ನು ತಾರಕ್ಕೆರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
 ಅನರ್ಹಗೊಂಡ ಶಾಸಕರ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಗೋಕಾಕ‌ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದಾರೆ. ಇಂದು‌ ಮತ್ತು ನಾಳೆ‌ ಗೋಕಾಕಿನಲ್ಲಿ ವಾಸ್ತವ್ಯ ಹೂಡಲಿರುವ ಸತೀಶ ಜಾರಕಿಹೊಳಿ ಪಕ್ಷ ಸಂಘಟನೆ, ಪ್ರಮುಖ‌ ಕಾಂಗ್ರೆಸ್ ಮುಖಂಡರ ಜತೆಗೆ ಚರ್ಚೆ ನಡೆಸಲಿದ್ದಾರೆ.

ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಅನರ್ಹತೆಯಿಂದ‌ ಗೋಕಾಕ‌ ಕ್ಷೇತ್ರ ತೆರವಾಗಿದೆ. ಕಳೆದ ಎರಡು ದಶಕಗಳಿಂದ ಗೋಕಾಕ ಕ್ಷೇತ್ರ ಕಾಂಗ್ರೆಸ್ ‌ಭದ್ರಕೋಟೆ ಆಗಿತ್ತು, ಆದರೆ ಇದೀಗ ಈ ಕ್ಷೇತ್ರ ‌ಉಳಿಸಿಕೊಳ್ಳಲು ಕಾಂಗ್ರೆಸ್ ‌ಬಹಳಷ್ಟು ಕಸರತ್ತು ನಡೆಸುತ್ತಿದೆ. ಹೀಗಾಗಿ ಪಕ್ಷ ಸಂಘಟನೆಗೆ ಸತೀಶ ಜಾರಕಿಹೊಳಿ ಅವರು ಒತ್ತು ಕೊಟ್ಟಿದ್ದಾರೆ.

ಲಖನ್ ಜಾರಕಿಹೊಳಿ ಸ್ಪರ್ಧೆ ಬಹುತೇಕ ಖಚಿತ:

ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಉದ್ಯಮಿ ಲಖನ್ ಜಾರಕಿಹೊಳಿ ಸ್ಪರ್ಧೆ ಬಹುತೇಕ ಖಚಿತವಾಗಿದೆ ಎಂದು ತಿಳಿದು ಬಂದಿದೆ.

ರಮೇಶ ಉತ್ತರಾಧಿಕಾರಿಯಾಗಿ ಅಳಿಯ ಅಂಬಿರಾವ್ ಕಣಕ್ಕೆ : ಅರ್ನಹತೆ ಮತ್ತು ಚುನಾವಣೆಗೆ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟನಲ್ಲಿ ಸೋಮವಾರ ಅರ್ಜಿ ವಿಚಾರಣೆ ನಡೆಯಲಿದ್ದು, ಚುನಾವಣೆ ಸ್ವರ್ಧೆಸುವ ಕುರಿತು ಸ್ವಷ್ಟ ಚಿತ್ರಣ ಹೋರ ಬರಲಿದೆ. ಒಂದು ವೇಳೆ ಅರ್ನಹತೆ ಪ್ರಕರಣ ಚುನಾವಣೆಗೆ ಅಡ್ಡಿಯಾದರೆ ರಮೇಶ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಪಾಟೀಲ ಅವರು ಉಪ ಚುನಾವಣೆಗೆ ಸ್ವರ್ಧೆ ಮಾಡುವದು ಪಕ್ಕಾ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಈಗ ಚುನಾವಣೆ ಪಕ್ಷಕ್ಕಿಂತ ಸ್ವ ಪ್ರತಿಷ್ಠೆ ಹೆಚ್ಚಾಗಿದ್ದು , ಜಾರಕಿಹೊಳಿ ಸಹೋದದರ ಮಧ್ಯೆ ಭಾರಿ ಪೈಪೋಟಿ ಸೃಷ್ಠಿಸಿ ಬಿಟ್ಟಿದೆ. ಅರ್ನಹ ಶಾಸಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತಗೆದುಕೊಂಡು ಬಿಜೆಪಿಯಲ್ಲಿ ತಮ್ಮ ಹಿಡಿತವನ್ನು ಸಾದಿಸುವ ತವಕದಲ್ಲಿದ್ದರೆ ಸಹೋದರ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಕಿರಿಯ ಸಹೋದನನ್ನು ಮುಂದೆ ಮಾಡಿಕೊಂಡು ಸಹೋದರನ ವಿರುದ್ಧವೇ ಕಾಂಗ್ರೆಸದಿಂದ ಕಣಕ್ಕಿಳಿಸಲು ತೆರೆ ಮರೆಯಲ್ಲಿ ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ಇನ್ನೊಂದು ತಿಂಗಳು ಕಾದರೆ ಗೋಕಾಕ ಮತಕ್ಷೇತ್ರಕ್ಕೆ ಹೊಸ ಸಾರಥಿಯಾರಾಗಲಿದ್ದಾರೆ? ಎಂಬ ಸ್ವಷ್ಟ ಚಿತ್ರಣ ದೊರೆಯಲಿದೆ

Related posts: