ಗೋಕಾಕ:ಸಂತ್ರಸ್ತರಿಗೆ ಉಚಿತ ನೇತ್ರ ತಪಾಸಣಾ ಶಿಬಿರ

ಸಂತ್ರಸ್ತರಿಗೆ ಉಚಿತ ನೇತ್ರ ತಪಾಸಣಾ ಶಿಬಿರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸ.3 :
ನೆರೆ ಹಾವಳಿಯಿಂದ ತತ್ತರಿಸಿ ಹೋಗಿರುವ ನೆರೆ ಸಂತ್ರಸ್ತರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತ್ತು
ಇತ್ತೀಚೆಗೆ ತಾಲೂಕಿನ ಮರಡಿಮಠ ಗ್ರಾಮದ ಶ್ರೀ ಕಾಡಸಿದ್ದೇಶ್ವರ ಮಠದ ಆಶ್ರದಲ್ಲಿ ಮಠದ ಆವರಣದಲ್ಲಿ ಗೋಕಾಕಿನ ಬೆಳಕು ಕಣ್ಣಿನ ಆಸ್ಪತ್ರೆಯ ಉಚಿತ ನೇತ್ರ ತಪಾಸಣೆಯನ್ನು ನಡೆಸಿದರು
ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಗ್ರಾಮದ ಸುಮಾರು150 ಜನರು ನೇತ್ರ ತಪಾಸಣೆ ಮಾಡಿ ಕನ್ನಡಕ ವಿತರಿಸಲಾಯಿತು
ಈ ಸಂದರ್ಭದಲ್ಲಿ ಪೂಜ್ಯಶ್ರೀ ಪವಾಡೇಶ್ವರ ಮಹಾಸ್ವಾಮಿಗಳು,ಶ್ರೀ ಬಸವರಾಜ ಸ್ವಾಮಿಗಳು, ಡಾ.ಆನಂದ ಎತ್ತಿನಮನಿ,ಉದಯ ದೇಸಾಯಿ, ರಾಮ ಗುಡ್ಡಾಕಾಯು,ಅಪ್ಪಸಾಹೇಬ ಬಾಡಕರ,ಈಶ್ವರ ಪಾಶ್ಚಾಪೂರ,ಆನಂದ ಶಿಂದಿಹಟ್ಟಿ ಸೇರಿದಂತೆ ಇತರರು ಇದ್ದರು