ಗೋಕಾಕ:ವಿದ್ಯಾರ್ಥಿಗಳು ಸೋಲು ಮತ್ತು ಗೆಲುವುವನ್ನು ಸಮಾನವಾಗಿ ಸ್ವೀಕರಿಸಿ : ಎಲ್.ಎನ್.ತೋರನಗಟ್ಟಿ

ವಿದ್ಯಾರ್ಥಿಗಳು ಸೋಲು ಮತ್ತು ಗೆಲುವುವನ್ನು ಸಮಾನವಾಗಿ ಸ್ವೀಕರಿಸಿ : ಎಲ್.ಎನ್.ತೋರನಗಟ್ಟಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 31 :
ವಿದ್ಯಾರ್ಥಿಗಳು ಸೋಲು ಮತ್ತು ಗೆಲುವುವನ್ನು ಸಮಾನವಾಗಿ ಸ್ವೀಕರಿಸಿಬೇಕೆಂದು ದೈಹಿಕ ಪರೀವಿಕ್ಷಕ ಎಲ್.ಎನ್.ತೋರನಗಟ್ಟಿ ಹೇಳಿದರು
ಶನಿವಾರದಂದು ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ ಶಾಲಾ ಆವರಣದಲ್ಲಿ 2ದಿನಗಳ ಕಾಲ ನಡೆಯುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ತಾಲೂಕಾ ಮಟ್ಟದ ಕಬ್ಬಡ್ಡಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವದು ಮುಖ್ಯ ಇಲಾಖೆಯಿಂದ ಏರ್ಪಡಿಸುವ ಕ್ರೀಡಾಕೂಟಗಳಲ್ಲಿ ಕ್ರೀಡಾ ಮನೋಭಾವನೆಯಿಂದ ಭಾಗವಹಿಸಿ ಶಾಲೆಗೆ ಮತ್ತು ತಾಲೂಕಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಕ್ರೀಡಾಕೂಟಕ್ಕೆ ಲಕ್ಷ್ಮೀ ಎಜುಕೇಶನ್ ಟ್ರಸ್ಟಿನ್ ನಿರ್ದೇಶಕ ಸನತ ಭೀಮಶಿ ಜಾರಕಿಹೊಳಿ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಎಸ್.ಎ.ನಾಯಿಕ, ಆರ್.ಬಿ.ಮಾವಿನಗಿಡದ, ಪಿ.ಬಿ.ಮದಗುಣಕಿ, ಎಂ.ಎಲ್.ಪಾಗದ, ಶ್ರೀಮತಿ ಎಚ್.ವ್ಹಿ.ಪಾಗನಿಸ, ಶ್ರೀಮತಿ ಪಿ.ವಿ.ಚಚಡಿ ಸೇರಿದಂತೆ ಅನೇಕರು ಇದ್ದರು.