ಗೋಕಾಕ:ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ,ಸ್ಕೂಲ್ ಬ್ಯಾಗ್ ವಿತರಣೆ

ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ,ಸ್ಕೂಲ್ ಬ್ಯಾಗ್ ವಿತರಣೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 28 :
ನೆರೆ ಹಾವಳಿಯಿಂದ ಎಲ್ಲವನ್ನು ಕಳೆದುಕೊಂಡ ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ಕೆಎಎಂಎಸ್ ಅಸೋಸಿಯೇಷನ್ ಬೆಂಗಳೂರಿನಿಂದ ವತಿಯಿಂದ ನಿಡಲಾಗಿದ್ದ, ಸುಮಾರು 7 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ನೋಟ್ ಬುಕ್ಕ ಮತ್ತು ಬ್ಯಾಗಗಳನ್ನು ವಿತರಿಸಲಾಯಿತು
ಬುಧವಾರದಂದು ನಗರದ ಶಫಡ ಮೀಷನ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಕಾಕಿನ 6 ಖಾಸಗಿ ಶಾಲೆಗಳ ಸುಮಾರು 300 ಮಕ್ಕಳಿಗೆ ನೋಟ್ ಬುಕ್ಕ, ಬ್ಯಾಗ ಮತ್ತು ಅಗತ್ಯ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ , ವಣ್ಣೂರ , ಸಂದೀಪ್ ಅನಿಗೋಳ ಸೇರಿದಂತೆ ಇತರರು ಇದ್ದರು .