RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಸೇತುವೆ ಸುತ್ತಮುತ್ತ ತಲೆ ಎತ್ತಿ ನಿಂತಿರುವ ಅನಧಿಕೃತ ಕಟ್ಟಡಗಳಿಗೆ ನಗರಸಭೆ ಸದಸ್ಯ ಕೋತವಾಲ ಕಾರಣ : ಮಾಜಿ ಸಚಿವ ಸತೀಶ ಆರೋಪ

ಗೋಕಾಕ:ಸೇತುವೆ ಸುತ್ತಮುತ್ತ ತಲೆ ಎತ್ತಿ ನಿಂತಿರುವ ಅನಧಿಕೃತ ಕಟ್ಟಡಗಳಿಗೆ ನಗರಸಭೆ ಸದಸ್ಯ ಕೋತವಾಲ ಕಾರಣ : ಮಾಜಿ ಸಚಿವ ಸತೀಶ ಆರೋಪ 

ಸೇತುವೆ ಸುತ್ತಮುತ್ತ ತಲೆ ಎತ್ತಿ ನಿಂತಿರುವ ಅನಧಿಕೃತ ಕಟ್ಟಡಗಳಿಗೆ ನಗರಸಭೆ ಸದಸ್ಯ ಕೋತವಾಲ ಕಾರಣ : ಮಾಜಿ ಸಚಿವ ಸತೀಶ ಆರೋಪ

 
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಅ 22 :

 

 

ಪ್ರವಾಹಕ್ಕೆ ತತ್ತರಿಸಿ ಹೋದ ಗೋಕಾಕ ನಗರದಲ್ಲಿ ಸಂಭವಿಸಿದ ಭಾರೀ ಅನಾಹುತಗಳಿಗೆ ಲೋಳಸೂರ ಸೇತುವೆ ಸುತ್ತಮುತ್ತ ತಲೆ ಎತ್ತಿ ನಿಂತಿರುವ ಅನಧಿಕೃತ ಕಟ್ಟಡಗಳು ಕಾರಣವಾಗಿದ್ದು ಇದಕ್ಕೆ ಗೋಕಾಕ ನಗರಸಭೆ ಹಿರಿಯ ಸದಸ್ಯ ಶೇಖ ಪತ್ತೇವುಲ್ಲಾ ಕೋತ್ವಾಲ (ಕೋತ್ವಾಲ ಗೌಡ) ಅವರೇ ಮೂಲ ಕಾರಣ ಎಂದು ಮಾಜಿ ಸಚಿವ ಶಾಸಕ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳು ಉಕ್ಕಿ ಹರಿದು ಎಂದೂ ಕಂಡರಿಯದ ಮಹಾಪೂರಕ್ಕೆ ಗೋಕಾಕ ನಗರದ ಜನರು ಮನೆ-ಮಠ ಕಳೆದುಕೊಂಡು ಸಂಪೂರ್ಣ ತತ್ತರಿಸಿ ಹೋಗಿದ್ದಾರೆ.
ಈ ಹಿಂದಿನಿಂದಲೂ ಮುಂಜಾಗೃತವಾಗಿ ನಾಕಾ ನಂ. 1 ರಿಂದ ಲೋಳಸೂರ ಸೇತುವೆ ವರೆಗೆ ಕಟ್ಟಡಗಳನ್ನು ನಿರ್ಮಿಸಲು ಹಲವಾರು ವರ್ಷಗಳಿಂದ ವಿರೋಧಿಸುತ್ತಾ ಬಂದಿದ್ದೇವೆ. ಆದರೂ ಹಲವಾರು ಕಟ್ಟಡಗಳು ಅನಧಿಕೃತವಾಗಿ ತಲೆ ಎತ್ತಿ ನಿಂತು ಪ್ರವಾಹಕ್ಕೆ ಕಾರಣವಾಗಿವೆ. ಈ ಕಟ್ಟಡಗಳು ಎತ್ತಿ ನಿಲ್ಲಲು ನಗರಸಭೆ ಸದಸ್ಯ ಕೋತ್ವಾಲ ಗೌಡ ಮೂಲ ಕಾರಣ ಎಂಬ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ಈ ಮೂಲಕ ತರಬಯಸುತ್ತೇವೆ.
ಸುಗಮವಾಗಿ ನದಿಗಳ ನೀರು ಹರಿದು ಹೋಗಲು ಸೇತುವೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಟ್ಟಡಗಳನ್ನು ನಿರ್ಮಿಸಲು ನಿರ್ಭಂದವಿದ್ದರೂ ಸಹ ಸದಸ್ಯನ ಒತ್ತಾಸೆ ಮೇರೆಗೆ ಕಟ್ಟಡಗಳು ನಿರ್ಮಾಣಗೊಂಡಿವೆ. ಆದ್ದರಿಂದ ಗೋಕಾಕ ನಗರ ಇಷ್ಟು ದೊಡ್ಡ ಅನಾಹುತಕ್ಕೆ ತುತ್ತಾಗಲು ಕಾರಣವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

Related posts: