RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಮೇವಿನ ಕೊರತೆ ನೀಗಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ

ಗೋಕಾಕ:ಮೇವಿನ ಕೊರತೆ ನೀಗಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ 

ಮೇವಿನ ಕೊರತೆ ನೀಗಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ

 

 

ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಅ 11 :

 

 
ನಿರಾಶ್ರಿತರ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಾದರೂ ಖರೀದಿಸಿ ಮೇವಿನ ಕೊರತೆಯನ್ನು ನೀಗಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮೀಪದ ಪಟಗುಂದಿ ಗಂಜಿ ಕೇಂದ್ರಕ್ಕೆ ಶನಿವಾರ ರಾತ್ರಿ ಭೇಟಿ ನೀಡಿದ ಅವರು, ಸರ್ಕಾರ ಪ್ರತಿ ಟನ್ ಹಸಿ ಮೇವಿಗೆ ಸಾರಿಗೆ ವೆಚ್ಚ ಸೇರಿ 2300 ರೂ. ನಿಗದಿ ಮಾಡಿದೆ. ಸರ್ಕಾರದ ಬೆಲೆ ಕಡಿಮೆಯಾದ ಹಿನ್ನೆಲೆಯಲ್ಲಿ ರೈತರು ಮೇವು ನೀಡಲು ಮುಂದಾಗುತ್ತಿಲ್ಲ. 2800 ರೂ.ಗಳವರೆಗೆಯಾದರೂ ಮೇವನ್ನು ಖರೀದಿಸಿ ನಿರಾಶ್ರಿತ ಕುಟುಂಬಗಳ ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹ ಬಾಧೆ ಆವರಿಸಿದ್ದರ ಹಿನ್ನೆಲೆಯಲ್ಲಿ ನಮ್ಮ ಕ್ಷೇತ್ರದ ನದಿ ತೀರದ 29 ಗ್ರಾಮಗಳು ಪೂರ್ಣ ಪ್ರಮಾಣದಲ್ಲಿ ನೀರಿನಲ್ಲಿ ಮುಳುಗಿ ಹೋಗಿವೆ. ನಿರಾಶ್ರಿತ ಕುಟುಂಬಗಳನ್ನು ಈಗಾಗಲೇ ಕಾಪಾಡಿದ್ದು, ಅವರನ್ನು ಸುರಕ್ಷಿತ ಕೇಂದ್ರಗಳಲ್ಲಿ ವಾಸಿಸಲು ಗಂಜಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಎಲ್ಲ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ಥರ ಕಣ್ಣೀರನ್ನು ಒರೆಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸಾಕಷ್ಟು ಧೈರ್ಯ ತುಂಬಿದ್ದೇನೆ. ಜೊತೆಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದೇನೆಂದು ಹೇಳಿದರು.
ವೈದ್ಯಾಧಿಕಾರಿಗಳ ಸಭೆ : ಬರುವ ಮಂಗಳವಾರದಂದು ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿರುವ ಸರ್ಕಾರಿ ವೈದ್ಯಾಧಿಕಾರಿಗಳ ಸಭೆಯನ್ನು ನಡೆಸಲು ಉದ್ಧೇಶಿಸಲಾಗಿದೆ. ಈಗಾಗಲೇ ಪ್ರತಿ ಗಂಜಿ ಕೇಂದ್ರಗಳಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ನಿರಾಶ್ರಿತರ ಕುಟುಂಬಗಳ ಆರೋಗ್ಯದ ಸ್ಥಿತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಜಲಾವೃತಗೊಂಡಿರುವ ನದಿ ತೀರದ ಗ್ರಾಮಗಳಲ್ಲಿ ನೀರಿನ ಮಟ್ಟ ಇಳಿದ ನಂತರ ರೋಗಗಳು ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಯ ಅರ್ಭಟಕ್ಕೆ ಶಾಲಾ ಕೊಠಡಿಗಳು ಸಹ ಕುಸಿತಗೊಂಡಿದ್ದು, ಅವುಗಳ ಶಿಥಲೀಕರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗಂಜಿ ಕೇಂದ್ರಗಳಲ್ಲಿರುವ ನಿರಾಶ್ರಿತ ಕುಟುಂಬಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದರು.
ಸೀರೆ ವಿತರಣೆ : ಮೂಡಲಗಿಯ ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿ ಬಳಗದಿಂದ ಪಟಗುಂದಿ ಗ್ರಾಮದಲ್ಲಿರುವ ಗಂಜಿ ಕೇಂದ್ರದ ನಿರಾಶ್ರಿತ ಕುಟುಂಬಗಳಿಗೆ ಸೀರೆ ವಿತರಿಸಿದರು.
ಹನಮಂತ ತೇರದಾಳ, ಮೂಡಲಗಿ ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ತಾಪಂ ಸದಸ್ಯರಾದ ಹನಮಂತ ಡೊಂಬರ, ಶಿವಬಸು ಜುಂಜರವಾಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಬಸವರಾಜ ಕಸ್ತೂರಿ, ಹನಮಂತ ನಾಯಿಕ, ಸಹಕಾರಿ ಮುಖಂಡ ಟಿ.ಬಿ. ಕೆಂಚರಡ್ಡಿ, ಲಕ್ಷ್ಮಣ ಹುಚರಡ್ಡಿ, ಚನಗೌಡ ಪಾಟೀಲ, ಮಹಾದೇವ ಬಿಜಗುಪ್ಪಿ, ಪಾರೇಶ ಹುಕ್ಕೇರಿ, ಜಡೆಪ್ಪ ಮಂಗಿ, ಸಚೀನ ಸೋನವಾಲ್ಕರ, ಪರಸಪ್ಪ ಉಪ್ಪಾರ, ಲಕ್ಕಪ್ಪ ಹುಚರಡ್ಡಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ಕಮಲದಿನ್ನಿ, ಜೋಕಾನಟ್ಟಿ ಹಾಗೂ ಗುಜನಟ್ಟಿ ಗ್ರಾಮಗಳ ಗಂಜಿ ಕೇಂದ್ರಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭೇಟಿ ನೀಡಿದರು.

Related posts: