RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯಿಂದ 40.50 ಕೋಟಿ ರೂ. ಬಿಡುಗಡೆ

ಗೋಕಾಕ:ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯಿಂದ 40.50 ಕೋಟಿ ರೂ. ಬಿಡುಗಡೆ 

ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯಿಂದ 40.50 ಕೋಟಿ ರೂ. ಬಿಡುಗಡೆ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 1 :

 
ಲೋಕೋಪಯೋಗಿ ಇಲಾಖೆಯಿಂದ ಅರಭಾವಿ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಒಟ್ಟು 40.50 ಕೋಟಿ ರೂ.ಗಳು ಬಿಡುಗಡೆಯಾಗಿದೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರದಂದು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಎಲ್ಲ ಕಾಮಗಾರಿಗಳಿಗಾಗಿ ಟೆಂಡರ್ ಕರೆಯಲಾಗಿದೆ ಎಂದು ಹೇಳಿದ್ದಾರೆ.
ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಎಸ್‍ಎಚ್‍ಡಿಪಿ)ಅಡಿಯಲ್ಲಿ ಜಾಂಬೋಟಿ-ರಬಕವಿ(ಎಸ್‍ಎಚ್-54) ರಸ್ತೆ ಕಿ.ಮೀ. 96.60 ದಿಂದ 106.75 ರವರೆಗೆ ಅರಭಾವಿ ಕ್ಷೇತ್ರದ ಬೆಟಗೇರಿ-ಗೋಸಬಾಳ-ಕೌಜಲಗಿವರೆಗಿನ 10.15 ಕಿ.ಮೀ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಪಡಿಸುವ ಕಾಮಗಾರಿ ನಡೆಯಲಿದೆ. ಮೂಡಲಗಿ-ಸುಣಧೋಳಿ(ಎಂಡಿಆರ್) ರಸ್ತೆ ಕಿ.ಮೀ. 0.00 ದಿಂದ 7.90 ರ ವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಯರಗಟ್ಟಿ-ಬಬಲೇಶ್ವರ ರಸ್ತೆ ಕಾಮಗಾರಿಯಲ್ಲಿ ಯಾದವಾಡದಿಂದ ತಾಲೂಕಾ ಹದ್ದಿವರೆಗೆ ಕಿ.ಮೀ. 33.65 ದಿಂದ 34.95 ಹಾಗೂ 39.51 ದಿಂದ 42.41 ವರೆಗೆ ಒಟ್ಟು 4.20 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಒಟ್ಟು 23.50 ಕೋಟಿ ರೂ.ಗಳ ಅನುದಾನಕ್ಕೆ ಸರ್ಕಾರ ಮಂಜೂರಾತಿ ನೀಡಿದೆ.
2018-19ನೇ ಸಾಲಿನ ಲೆಕ್ಕಶೀರ್ಷಿಕೆ 5054 ರ ಅಫೆಂಡಿಕ್ಸ್ ಇ ಯೋಜನೆಯಡಿ 4.95 ಕೋಟಿ ರೂ. ವೆಚ್ಚದಲ್ಲಿ ಬದಾಮಿ-ಗೊಡಚಿ-ಗೋಕಾಕ ಫಾಲ್ಸ್(ರಾ.ಹೆ-134) ರಸ್ತೆ ಕಿ.ಮೀ 94.00 ರಿಂದ 96.40 ಹಾಗೂ 99.00 ರಿಂದ 100.00 ಕಿ.ಮೀ ವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. 3 ಕೋಟಿ ರೂ. ವೆಚ್ಚದಲ್ಲಿ ಜಾಂಬೋಟಿ-ರಬಕವಿ(ರಾ.ಹೆ-54) ರಸ್ತೆ ಕಿ.ಮೀ 117.30 ರಿಂದ 123.28 ರವರೆಗೆ ರಸ್ತೆ ಅಗಲೀಕರಣ ಮತ್ತು ಸುಧಾರಣೆ ಮಾಡುವುದು. 4.80 ಕೋಟಿ ರೂ. ವೆಚ್ಚದಲ್ಲಿ ತಿಗಡಿ-ಸುಣಧೋಳಿ-ಭೈರನಟ್ಟಿ(ಜಿಮುರ) ರಸ್ತೆ ಕಿ.ಮೀ 0.00 ರಿಂದ 6.00 ರವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. 1.25 ಕೋಟಿ ರೂ. ವೆಚ್ಚದ ಮಲ್ಲಾಪೂರ ಪಿಜಿ-ತುಕ್ಕಾನಟ್ಟಿ-ನಾಗನೂರ(ಜಿಮುರ) ರಸ್ತೆ ಕಿ.ಮೀ 14.23 ರಿಂದ 15.00 ರವರೆಗೆ ಹಾಗೂ 19.90 ರಿಂದ 20.30 ರವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. 3 ಕೋಟಿ ರೂ. ವೆಚ್ಚದಲ್ಲಿ ಗೋಸಬಾಳ-ಬಿಲಕುಂದಿ-ಭೈರನಟ್ಟಿ(ಜಿಲ್ಲಾ ಮುಖ್ಯ ರಸ್ತೆ) ರಸ್ತೆ ಕಿ.ಮೀ 11.40 ರಿಂದ 15.40 ರವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. ಈ ಎಲ್ಲ 40.50 ಕೋಟಿ ರೂ. ವೆಚ್ಚದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.

Related posts: