ಗೋಕಾಕ:ಸತೀಶ ಶುಗರ್ಸ ಅವಾಡ್ರ್ಸ ದಲ್ಲಿ ರಾಜ್ಯ ಮಟ್ಟದ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ : ಸಚಿವ ಸತೀಶ
ಸತೀಶ ಶುಗರ್ಸ ಅವಾಡ್ರ್ಸ ದಲ್ಲಿ ರಾಜ್ಯ ಮಟ್ಟದ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ : ಸಚಿವ ಸತೀಶ
ಗೋಕಾಕ ಜ 21 : ಬರುವ ದಿನಗಳಲ್ಲಿ ಸತೀಶ ಶುಗರ್ಸ ಅರ್ವಾಡ್ಸ ಕಾರ್ಯಕ್ರಮ ಕೇವಲ ಜಿಲ್ಲಾ ಮತ್ತು ತಾಲೂಕಾ ಮಟ್ಟಕ್ಕೆ ಸೀಮಿತವಾಗದೇ ರಾಜ್ಯ ಮಟ್ಟದ ಪ್ರತಿಭೆಗಳು ಕೂಡಾ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲಿಕ್ಕೆ ಅವಕಾಶ ಕಲ್ಪಿಸಲಾಗುವುದು. ಎಂದು ಅರಣ್ಯ ಹಾಗೂ ಪರಿಸರ ಸಚಿವ , ಸತೀಶ ಶುಗರ್ಸ ಅವಾಡ್ರ್ಸ ನ ರೂವಾರಿ ಸತೀಶ ಜಾರಕಿಹೊಳಿ ಹೇಳಿದರು
ಅವರು, ಭಾನುವಾರದಂದು ಸಂಜೆ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನಡೆದ ಸತೀಶ ಶುಗರ್ಸ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಎಷ್ಟೇ ಕಷ್ಟ ಬಂದರೂ ಕೂಡಾ ನಿರಂತರವಾಗಿ ಕಳೆದ 18 ವರ್ಷಗಳಿಂದ ಕಾರ್ಯಕ್ರಮವನ್ನು ನಡೆಸುತ್ತಾ ಬರಲಾಗಿದ್ದು ಇನ್ನು ಮುಂದೆ ಹೆಚ್ಚಿನ ಪ್ರಮಾಣದಲ್ಲಿ ನಿರಂತರವಾಗಿ ಮುಂದುವರೆಸಿಕೊಂಡು ಹೋಗಲು ಜನರ ಸಹಕಾರ ಅತೀ ಅವಶ್ಯವಾಗಿದೆ.
ಸತೀಶ ಶುಗರ್ಸ ಅವಾಡ್ರ್ಸ ಕಾರ್ಯಕ್ರಮ ಕಳೆದ 18 ವರ್ಷಗಳಲ್ಲಿ ನಿರಂತರ ನಡೆಯುತ್ತ ಬಂದಿರುವದಲ್ಲಿ ಸಹಕರಿಸಿದ ಎಸ್.ಎ.ರಾಮಗಾನಟ್ಟಿ, ರಿಯಾಜ ಚೌಗುಲಾ ಹಾಗೂ ಅವರ ಸಂಗಡಿಗರು ನಿಸ್ವಾರ್ಥ ಸೇವೆ ಆಸಕ್ತಿ ಮುಖ್ಯವಾಗಿದೆ. ಅದರಂತೆ ಗೋಕಾಕ ತಾಲೂಕಿನ ಜನತೆ ನಮ್ಮ ಮೇಲೆ ಇಟ್ಟಿರುವ ಪ್ರೀತಿ,ವಿಶ್ವಾಸವೇ ಕಾರಣ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ವೇದಿಕೆ ಮೂಲಕ ಕನ್ನಡ ಟಿ.ವಿ.ಚಾನಲ್, ಚಲನಚಿತ್ರಗಳಲ್ಲಿ ಸಾಕಷ್ಟು ಕಲಾವಿದರು ಆಯ್ಕೆಯಾಗಿದ್ದು ತಮ್ಮ ಪ್ರತಿಭೆಯನ್ನು ನಾಡಿಗೆ ತೋರಿಸಿಕೊಟ್ಟಿದ್ದಾರೆ. ಕಳೆದ 18 ವರ್ಷಗಳಲ್ಲಿ ಒಂದು ಲಕ್ಷ ಪ್ರತಿಭೆಗಳು ಈ ವೇದಿಕೆಯ ಮೂಲಕ ಪ್ರದರ್ಶನ ನೀಡಿದ್ದಾರೆ. ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರಕ್ಕಿಂತ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ.
ಕಳೆದ 18 ವರ್ಷಗಳಿಂದ ಸತೀಶ ಶುಗರ್ಸ ಅವಾಡ್ರ್ಸ ಸಾಂಸ್ಕøತಿಕ ಕಾರ್ಯಕ್ರಮದ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡುವಲ್ಲಿ ಸ್ಥಳೀಯ ಚಿತ್ರ ಕಲಾವಿದರ ಕೈ ಚಳಕವು ದೇಶ ವಿದೇಶಗಳಲ್ಲಿ ಅಂತರ್ಜಾಲದ ಮೂಲಕ ಪ್ರದರ್ಶನಗೊಂಡಿದೆ ಎಂದು ತಿಳಿಸಿದರಲ್ಲದೇ ನಮ್ಮ ಮಕ್ಕಳನ್ನು ಉದ್ಯಮಿ,ರಾಜಕಾರಣಿಯಾಗಿ ಬೆಳೆಸುವುದಿಲ್ಲ. ಅವರನ್ನು ಕೂಡಾ ಸಾಮಾಜಿಕ ಸೇವೆ ಮುಖಾಂತರ ಬೇರೆ ಬೇರೆ ರಂಗಗಳಲ್ಲಿ ಅವರು ಬೆಳೆಯಬೇಕು. ಅವರಿಗೆ ಪ್ರೋತ್ಸಾಹ ನೀಡಿ ಮುಂಬರುವ ದಿನಗಳಲ್ಲಿ ಅವರೇ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಈ ವೇದಿಕೆ ಮೇಲೆ ನಾಡಿನ ಹಲವಾರು ಸಾಹಿತಿಗಳು, ರಾಜಕಾರಣಿಗಳು, ನಟರು, ಬುದ್ದಿಜೀವಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ ಎಂದರು.
ವೇದಿಕೆ ಮೇಲೆ ಪ್ರಿಯಾಂಕಾ ಸತೀಶ ಜಾರಕಿಹೊಳಿ, ರಾಹುಲ ಸತೀಶ ಜಾರಕಿಹೊಳಿ, ಎಸ್.ಎ.ರಾಮಗಾನಟ್ಟಿ, ರಿಯಾಜ ಚೌಗಲಾ, ಇದ್ದರು.