RNI NO. KARKAN/2006/27779|Monday, June 16, 2025
You are here: Home » breaking news » ಮೂಡಲಗಿ:ವಿಶಿಷ್ಠ ಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರು ಕೈಜೋಡಿಸಬೇಕು: ಡಿಡಿಪಿಐ ಎಮ್ ಜಿ ದಾಸರ

ಮೂಡಲಗಿ:ವಿಶಿಷ್ಠ ಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರು ಕೈಜೋಡಿಸಬೇಕು: ಡಿಡಿಪಿಐ ಎಮ್ ಜಿ ದಾಸರ 

ವಿಶಿಷ್ಠ ಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರು ಕೈಜೋಡಿಸಬೇಕು: ಡಿಡಿಪಿಐ ಎಮ್ ಜಿ ದಾಸರ

ಮೂಡಲಗಿ ನ 29 : ವಿಶಿಷ್ಠ ಚೇತನ ಮಕ್ಕಳಿಗೆ ಅನುಕಂಪದ ಬದಲಾಗಿ ಸಹಕಾರ ಮನೊಬಾವದಿಂದ ಅವರ ಸೇವಾ ಕಾರ್ಯ ಮಾಡಬೇಕು. ಮಗುವಿನ ನ್ಯೂನ್ಯತೆಗಳನ್ನು ಗುರುತಿಸಿ ಅಗತ್ಯ ಸಾಧನ ಸಲಕರಣೆಗಳನ್ನು ಒದಗಿಸುವ ಮೂಲಕ ವಿಶಿಷ್ಠ ಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಹೊಂದಲು ಕೈಜೋಡಿಸಬೇಕು ಎಂದು ಡಿಡಿಪಿಐ ಎಮ್ ಜಿ ದಾಸರ ನುಡಿದರು.
ಅವರು ಗುರುವಾರದಂದು ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡ ಸಮಗ್ರ ಶಿಕ್ಷಣ ಅಭಿಯಾನದ ವೈದ್ಯಕೀಯ ಮೌಲ್ಯಾಂಕನ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿಶಿಷ್ಠ ಚೇತನರಿಗೆ ಸರಕಾರವು ಮಾಶಾಸನ, ಶಿಷ್ಯ ವೇತನ, ಪ್ರಯಾಣ ಹಾಗೂ ಇನ್ನಿತರ ಉಚಿತ ಸೇವೆಯನ್ನು ನೀಡುತ್ತಿದ್ದು ಅದರ ಸದ್ಬಳಕೆಯಾಕಬೇಕು. ಮಕ್ಕಳಲ್ಲಿ ನ್ಯೂನ್ಯತೆಯುಂಟಾಗಲು ಪ್ರಮುಖವಾಗಿ ರಕ್ತ ಸಂಬಂಧಗಳಲ್ಲಿ ಮದುವೆ, ಗರ್ಭಿನಿಯರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಕೊರತೆಯಿಂದಾದ ವಿಶಿಷ್ಠ ಚೇತನರು ಜನಿಸುತ್ತಾರೆ. ಪೌಷ್ಠಿಕ ಆಹಾರದ ಜೊತೆಯಲ್ಲಿ ವ್ಯಾಯಾಮ ಹಾಗೂ ಮಾನಸಿಕವಾಗಿ ಬೆಂಬಲ ನೀಡುವ ಮೂಲಕ ಮಕ್ಕಳ ಸರ್ವತೊಮುಖ ಬೆಳವಣಿಗೆಯಲ್ಲಿ ಸಹಕಾರಿಯಾಗಬೇಕು. ವಿಕಲ ಚೇತನ ಮಕ್ಕಳು ಇಂದಿನ ಪೋಷಕರಿಗೆ ಬೆಸರಾಗದೆ ಇವರ ದೊರೆಯುವ ಸೌಲಭ್ಯದಿಂದ ಆಸರೆಯಾಗುವ ಪರಿಸ್ಥಿತಿ ನಿರ್ಮಾನವಾಗುತ್ತಿದೆ ಎಂದು ಹೇಳಿದರು.
ಮೂಡಲಗಿ ನಗರದ ವೈದ್ಯಕೀಯ ಸಂಘದವರು ವಲಯ ವ್ಯಾಪ್ತಿಯ ಎಲ್ಲ ವಿಶಿಷ್ಠ ಚೇತನ ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಬಗ್ಗೆ ವಾಗ್ದಾನ ಮಾಡಿದ್ದು ಅವರ ಕಾರ್ಯ ಶ್ಲಾಘನೀಯವಾಗಿದೆ. ವಲಯ ವ್ಯಾಪ್ತಿಯ ಎಲ್ಲ ವಿಶಿಷ್ಠ ಚೇತ£ ಮಕ್ಕಳಿಗೆ ಗುರುತಿನ ಚೀಟಿ ನೀಡುವ ಮೂಲಕ ಈ ವಿಶಿಷ್ಠ ಕಾರ್ಯವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಮೊದಲ ಸಲ ಮೂಡಲಗಿ ವಲಯದಲ್ಲಿ ಆಗುತ್ತಿದೆ. ಶಿಕ್ಷಕರ ಪಾಲಕರ ವೈದ್ಯರ ಸಹಕಾರದ ಮೇರೆಗೆ ಅನುಕಂಪದ ಜೊತೆಗೆ ಸಹಕಾರದಿಂದ ಅವರ ನ್ಯೂನ್ಯತೆಗಳಿಗೆ ಸರಿಯಾದ ಚಿಕಿತ್ಸೆ ಕೊಡಿಸಿ ಅವರನ್ನು ಈ ಸಮಾಜದಲ್ಲಿ ಅಸಾಮಾನ್ಯರನ್ನು ಸಾಮಾನ್ಯರಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಳ್ಳೂರ ಜಿ.ಪಂ ಸದಸ್ಯೆ ವಾಸಂತಿ ತೇರದಾಳ ಮಾತನಾಡಿ, ವಿಶಿಷ್ಠ ಚೇತನ ಮಕ್ಕಳಿಗೆ ಸರಕಾರ ಸಾಕಷ್ಟು ಯೋಜನೆಗಳನ್ನು ಹಣ ವ್ಯಯ ಮಾಡುತ್ತಿದ್ದು ಅದರ ಸದುಪಯೊಗ ಪಡೆದುಕೊಳ್ಳುವ ಮೂಲಕ ಮಕ್ಕಳ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ಯಶಸ್ವಿಯಾಗಲು ಮುಖ್ಯವಾಹಿನಿಗೆ ಬರಲು ಎಲ್ಲರು ಸಹಕರಿಸಬೇಕೆಂದರು.
ನಗರದ ವೈದ್ಯ ಹಾಗೂ ಮಾಜಿ ಪುರಸಭೆ ಸದಸ್ಯ ಡಾ. ಎಸ್.ಎಸ್ ಪಾಟೀಲ, ಡಾ ಎಮ್ ಎನ್ ಮುಗಳಖೋಡ ವಲಯ ವ್ಯಾಪ್ತಿಯ ಎಲ್ಲ ವಿಶಿಷ್ಠ ಚೇತನ ಮಕ್ಕಳಿಗೆ ಉಚಿತ ವೈದ್ಯಕೀಯ ಸೇವೆ ನೀಡುವದಾಗಿ ವಾಗ್ದಾನ ಮಡಿದರು. ಮಕ್ಕಳಿಗೆ ನ್ಯೂನ್ಯತೆ ಹಾಗೂ ಸುದಾರಣೆ ಕ್ರಮಗಳ ಕುರಿತು ವಿವರಿಸಿದರು.
ಬಿ.ಇ.ಒ ಎ.ಸಿ ಮನ್ನಿಕೇರಿ ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ವಲಯದಲ್ಲಿ 917 ಮಕ್ಕಳು ವಿಶಿಷ್ಠ ಚೇತನರಿದ್ದು, ಪ್ರತಿ ವರ್ಷ ವೈದ್ಯಕೀಯ ಪರೀಕ್ಷೆ ಮಾಡಿಸಿ ಸರಕಾರದಿಂದ ಸೌಲಭ್ಯ ಒದಗಿಸುತ್ತಿದೆ.
ಸ್ಥಳೀಯ ಸಿದ್ದ ಸಂಸ್ಥಾನ ಮಠದ ಪೀಠಾಧಿಕಾರಿ ಶ್ರಿ ಶ್ರೀಪಾದಬೋಧ ಸ್ವಾಮೀಜಿ ಸಾನಿದ್ಯವಹಿಸಿ ಆಶಿರ್ವಚನ ನೀಡಿದರು.
ಶಿಬಿರದ ವೈದ್ಯರಾದ ಡಾ. ಸವಿತಾ ಬಿ.ಎಚ್, ಡಾ ನಿಂಗಪ್ಪ ಎಸ್.ಎ, ಡಾ ಕಲ್ಮೇಶ ಕಾಂಬಳೆ ಚಿಕಿತ್ಸೆ ನೀಡಿದರು.
ಸಮಾರಂಭದಲ್ಲಿ ಹಣಮಂತ ತೇರದಾಳ, ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಇ.ಸಿ.ಒ ಟಿ ಕರಿಬಸವರಾಜು, ಬಿ.ಆರ್ ಪಿಗಳಾದ ಕೆ.ಎಲ್.ಮೀಶಿ, ಎ.ಬಿ ಚವಡನ್ನವರ, ಬಿ.ಎಮ್ ನಂದಿ, ಪಿ.ಜಿ ಪಾಟೀಲ, ಶಿಕ್ಷಕ ಸಂಘಟನೆಯ ಬಿ.ಆರ್ ತರಕಾರ, ಎಲ್ ಎಮ್ ಬಡಕಲ್, ಮಾಲತೇಶ ಸಣ್ಣಕ್ಕಿ, ಸರಸ್ವತಿ ಗುಡ್ಲಮನಿ, ರಾಜೇಂದ್ರ ಮಹೇದ್ರಕರ, ಎಮ್ ಎಸ್ ಕೊಣ್ಣೂರ ವಲಯ ವ್ಯಾಪ್ತಿಯ ಶಿಕ್ಷಕರು ಹಾಗೂ ಪಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎ.ಪಿ ಪರಸನ್ನವರ ನಿರೂಪಿಸಿದರು. ವಾಯ್.ಬಿ ಪಾಟೀಲ ಸ್ವಾಗತಿಸಿ, ವಾಯ್ ಆರ್ ಮುಕ್ಕನ್ನವರ ವಂದಿಸಿದರು.

Related posts: