ಗೋಕಾಕ:ಬಂಜೆತನ ನಿವಾರಣೆ ಕುರಿತು ವಿಶೇಷ ಉಪನ್ಯಾಸ
ಬಂಜೆತನ ನಿವಾರಣೆ ಕುರಿತು ವಿಶೇಷ ಉಪನ್ಯಾಸ
ಗೋಕಾಕ ಸೆ 29 : ಪ್ರತಿಯೊಬ್ಬ ಮಹಿಳೆ ಮಕ್ಕಳಿಗಾಗಿ ಹಂಬಲಿಸುತ್ತಾಳೆ ಆದರೆ ಕೆಲ ಮಹಿಳೆಯರಲ್ಲಿ ವೈದ್ಯಕೀಯ ಕಾರಣದಿಂದ ಅದು ಸಾಧ್ಯವಾಗದಿರಬಹುದು ಆದರೆ ಬದಲಾದ ವೈದ್ಯ ವಿಜ್ಞಾನದಿಂದ ಅವರೂ ಕೂಡ ಮಕ್ಕಳ ಭಾಗ್ಯ ಕಾಣಬಹುದಾಗಿದೆ ಎಂದು ಖ್ಯಾತ ಸ್ತ್ರೀರೋಗ ತಜ್ಞೆ ಡಾ|| ಜ್ಯೋತಿ ವಿಶ್ವನಾಥ ಶಿಂಧೋಳಿಮಠ ಹೇಳಿದರು.
ನಗರದ ಆಯ್ಎಮ್ಆಯ್ ಹಾಲ್ನಲ್ಲಿ ಏರ್ಪಡಿಸಿದ ಬಂಜೆತನ ನಿವಾರಣೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತನಾಡಿದ ಅವರು ಬಂಜೆತನವೆನ್ನುವುದು ಶಾಪವಲ್ಲ, ಅವರಿಗೂ ಮಕ್ಕಳ ಭಾಗ್ಯ ಉಂಟು, ವೈಜ್ಞಾನಿಕ ಪ್ರಯೋಗಗಳ ಮೂಲಕ ಮಕ್ಕಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸ್ಥಳೀಯ ವಿಶ್ವಜ್ಯೋತಿ ನರ್ಸಿಂಗ್ ಹೊಂನಲ್ಲಿ ಅತ್ಯಾಧುನಿಕ ಟೆಸ್ಟ ಟ್ಯೂಬ್ ಬೇಬಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು ಪ್ರತಿ ತಿಂಗಳು 2ನೇ ಗುರುವಾರ ನುರಿತ ವೈದ್ಯರಿಂದ ಬಂಜೆತನದ ಉಚಿತ ತಪಾಸಣೆ ಮಾಡಿ ಪರಿಹಾರ ಕೂಡಾ ಸೂಚಿಸಲಾಗುವುದು ಇದರ ಲಾಭವನ್ನು ಬಂಜೆತನದಿಂದ ನೊಂದವರು ಪಡೆಯಬಹುದಾಗಿದೆ ಎಂದು ತಿಳಿಸಿದರಲ್ಲದೇ ಬಂಜೆತನದಿಂದ ಬಳಲುವವರು ಆಯ್ವಿಎಫ್ ಚಿಕಿತ್ಸೆಯ ಮೂಲಕ ಮಕ್ಕಳ ಭಾಗ್ಯ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಯ್ಎಮ್ಆಯ್ ಅಧ್ಯಕ್ಷ ಡಾ|| ರಾಜಕುಮಾರ ಕೊಪ್ಪ ಕಾರ್ಯದರ್ಶಿ ಡಾ|| ಮಿಲಿಂದ ಜಾಧವ ಹಾಗೂ ನಗರದ ಖ್ಯಾತ ವೈದ್ಯರುಗಳು ಉಪಸ್ಥಿತರಿದ್ದರು.