RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಜಗಜ್ಯೋತಿ ಶ್ರೀಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ, ನಿ ಸರ್ವ ಸಾಧಾರಣ ಸಭೆ

ಘಟಪ್ರಭಾ:ಜಗಜ್ಯೋತಿ ಶ್ರೀಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ, ನಿ ಸರ್ವ ಸಾಧಾರಣ ಸಭೆ 

ಜಗಜ್ಯೋತಿ ಶ್ರೀಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ, ನಿ ಸರ್ವ ಸಾಧಾರಣ ಸಭೆ

ಘಟಪ್ರಭಾ ಸೆ 18 : ಇಲ್ಲಿನ ಜಗಜ್ಯೋತಿ ಶ್ರೀಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ, ನಿ. ಧುಪದಾಳ ಇದರ 10ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯು ಮೃತ್ಯಂಜಯ ಸಾಂಸ್ಕಂತಿಕ ಭವನದಲ್ಲಿ ಜರುಗಿತು.
ನಿರ್ದೇಶಕ ಎಸ್.ಡಿ.ಶಿಂದೋಳಿಮಠ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥಾಪಕ ಅಧ್ಯಕ್ಷರಾದ ಬಿ.ಎಸ್.ಉದಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷರಾದ ಸಿ.ಆಯ್.ಅಂಗಡಿ ವರದಿ ವಾಚನ ಮಾಡುತ್ತ ಮಾತನಾಡಿ ಸಂಸ್ಥೆಯು ಪ್ರಸ್ತುತ ವರ್ಷದಲ್ಲಿ 860 ಸದಸ್ಯರನ್ನು ಹೊಂದಿದ್ದು, 14,35700/- ರೂಪಾಯಿ ಶೇರ ಬಂಡವಾಳ ಹೊಂದಿದೆ. 13,59/- ಕೋಟಿ ಠೇವು, 11 ಕೋಟಿ ಸಾಲ ವಿತರಿಸಿದ್ದು, 16 ಕೋಟಿ ಮೇಲ್ಪಟ್ಟು ದುಡಿಯುವ ಬಂಡವಾಳ ಹೊಂದಿದೆ. 31-3-2018 ಕ್ಕೆ ಒಟ್ಟು 25.80/- ಲಕ್ಷಕ್ಕೂ ಮೇಲ್ಪಟ್ಟು ಲಾಭ ಗಳಿಸಿದ್ದು, ಸದಸ್ಯರಿಗೆ 25% ರಷ್ಟು ಲಾಬಾಂಶ ವಿತರಿಸಲಾಗುವದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಆನಂದ ವಾಡೇದ, ಅನ್ನಪ್ಪ ಹುನಗುಂದ, ಮಲ್ಲಿಕಾರ್ಜುನ ಗೌರಾಣಿ, ಆರ್.ಟಿ.ಶಿರಾಳಕರ, ಡಿ.ಪಿ.ಲಕ್ಷೇಟ್ಟಿ, ರೇವಪ್ಪ ಕಂಬಾರ. ಮಾನಿಕ ಬೀಸೆ, ವಿರೇಶ ಶಿವಾಪೂರ, ವಿವೇಕ ಬಾಳನಾಯಿಕ, ಲೆಕ್ಕ ಪರಿಶೋದಕರಾದ ಶಿವಾನಂದ ಕಮತ ಹಾಗೂ ಕಾನೂನು ಸಲಹೆಗಾರರಾದ ಶಿವಾನಂದ ಕಬ್ಬೂರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸದಸ್ಯರ ಮಕ್ಕಳಲ್ಲಿ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಸತ್ಕರಿಸಿ ನಗದು ಬಹುಮಾನ ವಿತರಿಸಲಾಯಿತು.
ರಾಜು ಪಂಚಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts: