RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಮತದಾನ ಸಂವಿಧಾನ ಬದ್ಧವಾದ ಹಕ್ಕಾಗಿದೆ: ಶ್ರೀಮತಿ ವಿಮಲ್ ನಂದಗಾಂವ

ಗೋಕಾಕ:ಮತದಾನ ಸಂವಿಧಾನ ಬದ್ಧವಾದ ಹಕ್ಕಾಗಿದೆ: ಶ್ರೀಮತಿ ವಿಮಲ್ ನಂದಗಾಂವ 

ಮತದಾನ ಸಂವಿಧಾನ ಬದ್ಧವಾದ ಹಕ್ಕಾಗಿದೆ: ಶ್ರೀಮತಿ ವಿಮಲ್ ನಂದಗಾಂವ

ಗೋಕಾಕ ಜ 27: ಭಾರತದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಮತದಾನ ಸಂವಿಧಾನ ಬದ್ಧವಾದ ಹಕ್ಕಾಗಿದ್ದು, ಮತದಾರರಿಗೆ ಮತದಾನ ಹಕ್ಕು ಅಮೂಲ್ಯವಾದ್ದು ಎಂದು ಇಲ್ಲಿಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವಿಮಲ್ ನಂದಗಾಂವ ಹೇಳಿದರು.
ಶನಿವಾರದಂದು ನಗರದ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕಾಡಳಿತ, ಶಿಕ್ಷಣ ಇಲಾಖೆ, ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಜರುಗಿದ ತಾಲೂಕು ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನದತ್ತವಾಗಿ ನೀಡಿರುವ ಹಕ್ಕುಗಳಲ್ಲಿ ಪ್ರಜೆಗಳೇ ಸಾರ್ವಭೌಮರಾಗಿದ್ದು, ಮತದಾನದ ಬಗ್ಗೆ ಜಾಗೃತರಾಗಿ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕಿನ ಅವಕಾಶದಿಂದ ವಂಚಿತರಾಗದೇ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು.
ಎ.ಜಿ.ಪಿ ಆಪರ ಸರ್ಕಾರಿ ವಕೀಲ ಎಮ್.ಆರ್.ಭಜಂತ್ರಿ ಹಾಗೂ ಸರ್ಕಾರಿ ಹೊಸ ಮಾಧ್ಯಮಿಕ ಶಾಲೆಯ ಶಿಕ್ಷಕ ಬಿ.ಎಸ್.ಜೋಲಾಪೂರೆ ವಿಶೇಷ ಉಪನ್ಯಾಸವನ್ನು ನೀಡಿ, ಇತ್ತಿಚಿನ ಚುನಾವಣೆಗಳ ಫಲಿತಾಂಶಗಳ ಬಗ್ಗೆ ಅವಲೋಕನ ಮಾಡಿದಾಗ ದಿನದಿಂದ ದಿನಕ್ಕೆ ಮತದಾನದ ಪ್ರಮಾಣ ಕುಸಿತವಾಗುತ್ತಿರುವುದು ದೇಶದ ಪ್ರಗತಿಗೆ ಮಾರಕವಾಗುತ್ತಿದೆ. ಬೇರೆ ರಾಷ್ಟ್ರಗಳಲ್ಲಿ ಮತದಾನ ಕಡ್ಡಾಯವಾಗಿದ್ದು, ಅದರಂತೆ ನಮ್ಮ ದೇಶದಲ್ಲಿಯೂ ಕೂಡಾ ಮತದಾನ ಕಡ್ಡಾಯವಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಮುಖ ಹಾಗೂ ಮೂಲಭೂತ ಹಕ್ಕಗಳಲ್ಲಿ ಒಂದಾಗಿದ್ದು ಪ್ರಜಾಪಭುತ್ವದ ಹಿತವನ್ನು ಕಾಪಾಡುವುದಲ್ಲದೇ ಭವ್ಯ ರಾಷ್ಟ್ರದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ನವಮತದಾರರಿಗೆ ಚುನಾವಣಾ ಗುರುತಿನ ಚೀಟಿಗಳನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲದಾರ ಜಿ.ಎಸ್.ಮಳಗಿ ವಹಿಸಿದ್ದರು.
ವೇದಿಕೆ ಮೇಲೆ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಡಿ.ಎಮ್.ಮಡಿವಾಳರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ.ಚಿನ್ನನವರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಜಿಪಿಯುಸಿಯ ಪ್ರಾಚಾರ್ಯ ಎ.ವಾಯ್.ಹಾದಿಮನಿ, ವಲಯ ಅರಣ್ಯಾಧಿಕಾರಿ ಕೆಂಪಣ್ಣಾ ವಣ್ಣೂರ, ನಗರ ಸಭೆ ಕಚೇರಿ ವ್ಯವಸ್ಥಾಪಕ ಎಮ್.ಎಚ್.ಅತ್ತಾರ, ಸಹಾಯಕ ಕೃಷಿ ನಿರ್ದೇಶಕ ಎ.ಡಿ.ಸವದತ್ತಿ, ಎಸ್.ಕೆ.ಪಾಟೀಲ, ಎಸ್.ಎಮ್.ಮೂರಮ್ಮಕರ, ಎಸ್.ಆರ್.ಹಣಬರ, ವಿ.ಬಿ.ಕಣಿಲದಾರ ಇದ್ದರು. ಕಾರ್ಯಕ್ರಮವನ್ನು ಎ.ಜಿ.ಕೋಳಿ ಸ್ವಾಗತಿಸಿ, ವಂದಿಸಿದರು.

Related posts: