RNI NO. KARKAN/2006/27779|Monday, June 16, 2025
You are here: Home » breaking news » ಮೂಡಲಗಿ:ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ,ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ : ಶಾಸಕ ಬಾಲಚಂದ್ರ

ಮೂಡಲಗಿ:ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ,ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ : ಶಾಸಕ ಬಾಲಚಂದ್ರ 

ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ,ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ : ಶಾಸಕ ಬಾಲಚಂದ್ರ

ಮೂಡಲಗಿ ಜ 27: ಮೂಡಲಗಿ ಹೊಸ ತಾಲೂಕು ಕೇಂದ್ರವನ್ನಾಗಿ ಸರಕಾರ ಎರಡು ದಿನದ ಹಿಂದೆ ಅಧಿಸೂಚನೆ ಹೊರಡಿಸಿದ್ದು, ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇಲ್ಲಿಯ ಎಸ್.ಎಸ್.ಆರ್ ಕಾಲೇಜು ಮೈದಾನದಲ್ಲಿ ಶನಿವಾರದಂದು ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ಮೂಡಲಗಿ ಸ್ಪೋಟ್ರ್ಸ್ ಅಸೋಸಿಯೇಶನ್, ಯುವ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಜರುಗಿದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಯುವಜನಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೂಡಲಗಿ ಹೊಸ ತಾಲೂಕು ರಚನೆಯಾಗಿರುವದರಿಂದ ಸಮಗ್ರ ಅಭಿವೃದ್ದಿಗೆ ಸರಕಾರದಿಂದ ನೆರವು ದೊರಕಿಸಿಕೊಡಲಾಗುವುದು. ಹೊಸ ತಾಲೂಕಿನ ಶ್ರೇಯೋಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ಮುಂದಿನ ದಿನಗಳಲ್ಲಿ ಮೂಡಲಗಿ ತಾಲೂಕಿಗೆ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.
ಮೂಡಲಗಿ ತಾಲೂಕು ರಚನೆಗಾಗಿ ಶ್ರಮಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಸ್ಥಳಿಯ ಶ್ರೀ ಶ್ರೀಪಾದಬೋಧ ಸ್ವಾಮಿಜಿ ಹಾಗೂ ಮೂಡಲಗಿ ಭಾಗದ ಮಹಾ ಜನತೆಯನ್ನು ಅಭಿನಂದಿಸುವದಾಗಿ ಹೇಳಿದ ಅವರು, ಮೂಡಲಗಿ ತಾಲೂಕು ಕೇಂದ್ರವಾಗುವದು ಬಹು ಕಷ್ಟ ಕೆಲಸವಾಗಿತ್ತು. ಇವರ ಅವಿರತ ಪರಿಶ್ರಮದಿಂದ ಮೂಡಲಗಿ ತಾಲೂಕು ಕೇಂದ್ರವಾಗಿ ಉದಯವಾಯಿತು. ಶೀಘ್ರದಲ್ಲಿಯೇ ತಾಲೂಕಾ ಮಟ್ಟದ ಕಚೇರಿಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು.

ನಾಡಿನ ಕ್ರೀಡೆಗಳನ್ನು ಉಳಿಸಿ ಬೆಳೆಸಿ ಅವುಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದೇಶಿಯ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದ ಅವರು, ಈ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ಇಂದಿನ ಯುವ ಶಕ್ತಿ ಈ ಬಲಿಷ್ಠ ಭಾರತದ ಶಕ್ತಿಯಾಗಿ ಪರಿವರ್ತನೆಗೊಳ್ಳಲಿದೆ ಎಂದರು.
ಅಧ್ಯಕ್ಷತೆಯನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸೋನವಾಲ್ಕರ ವಹಿಸಿದ್ದರು.
ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಅಧ್ಯಕ್ಷೆ ಕಮಲವ್ವಾ ಹಳಬರ, ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ನಿಂಗಪ್ಪ ಪಿರೋಜಿ, ವೀರಣ್ಣಾ ಹೊಸುರ, ಸಂತೋಷ ಸೋನವಾಲ್ಕರ, ರಾಮಣ್ಣಾ ಹಂದಿಗುಂದ, ಬಿ.ಎಚ್.ಸೋನವಾಲ್ಕರ, ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಚಿತ್ತಪ್ಪಾ ಯಾದವ, ಕ್ರೀಡಾ ಇಲಾಖೆಯ ಉಪ ನಿರ್ಧೇಶಕ ಸಿ.ಬಿ.ರಂಗಯ್ಯಾ, ಬಿಇಒ ಎ.ಸಿ.ಗಂಗಾಧರ, ಪುರಸಭೆ ಸದಸ್ಯರು, ಅಧಿಕಾರಿಗಳು ಮತ್ತಿತರು ಉಪಸ್ಥಿತರಿದ್ದರು. ಸಿದ್ದಣ್ಣಾ ದುರದುಂಡಿ ಸ್ವಾಗತಿಸಿದರು.

Related posts: