ಗೋಕಾಕ:ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಯುವ ನಾಯಕ್ ಅಮರನಾಥ

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಯುವ ನಾಯಕ್ ಅಮರನಾಥ
ಗೋಕಾಕ ಸೆ 22 : ತಾಲೂಕಿನ ಕೊಣ್ಣೂರ ಪುರಸಭೆ ಹಾಗೂ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ರವಿವಾರದಂದು ಯುವನಾಯಕ ಅಮರನಾಥ ಜಾರಕಿಹೊಳಿ ಭಾಗವಹಿಸಿ ಚಾಲನೆ ನೀಡಿದರು.
ತಾಲ್ಲೂಕಿನ ಕೊಣ್ಣೂರ ಪುರಸಭೆ ವ್ಯಾಪ್ತಿಯ ಗೋಕಾಕಫಾಲ್ಸ್ ಚೌಕಿ ಗೇಟನಿಂದ ಕ್ವಾಟರ್ಸ ವರೆಗೆ 20.ಲಕ್ಷ ರೂ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ, ಗೋಕಾಕ ಫಾಲ್ಸ್ ಧರೆಪ್ಪನ ಹಳ್ಳಕ್ಕೆ 50.ಲಕ್ಷ ರೂ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿ ಹಳೆಯ ಪುರಸಭೆ ಕಟ್ಟಡ ತೆರವುಗೊಳಿಸಿ ಅದೆ ಸ್ಥಳದಲ್ಲಿ 60.ಲಕ್ಷ ರೂ ವೆಚ್ಚದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಗೋಕಾಕ ಫಾಲ್ಸನಲ್ಲಿ 40.ಲಕ್ಷ ರೂ ವೆಚ್ಚದಲ್ಲಿ ಬಸ್ಸು ನಿಲ್ದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಧುಪದಾಳ ಗ್ರಾಮದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ವಿವೇಕ ಯೋಜನೆಯಡಿ 30.ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಎರಡು ಶಾಲಾ ಕೋಠಡಿ ಹಾಗೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕ ಯೋಜನೆಯಡಿ 19.ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಒಂದು ಶಾಲಾ ಕೋಠಡಿಯನ್ನು ಉದ್ಘಾಟಿಸಲಾಯಿತು. ನಗರೊತ್ಥಾನ ಯೋಜನೆಯಡಿ 1.ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಯುವನಾಯಕ ಅಮರನಾಥ ಜಾರಕಿಹೊಳಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೊಣ್ಣೂರ ಪುರಸಭೆ ಅಧ್ಯಕ್ಷ ವಿನೋದ ಕರನಿಂಗ, ಪ್ರಕಾಶ ಕರನಿಂಗ, ಕೊಣ್ಣೂರು ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ, ಮಲ್ಲಾಪುರ ಪಿಜಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶ್ರೀಮತಿ ಎಮ್ ಎಸ್ ಪಾಟೀಲ, ಕುಮಾರ ಕೊಣ್ಣೂರ, ರಾಮಲಿಂಗ ಮಗದುಮ, ಸಚೀನ ಸಮಯ, ಮುಖಂಡರಾದ ಮದಾರಸಾಬ ಜಗದಾಳ, ಡಿ ಎಮ್ ದಳವಾಯಿ, ರಾಮಣ್ಣ ದೇಮನ್ನವರ, ಹನುಮಂತ ಗಾಡಿವಡ್ಡರ, ಲಗಮಣ್ಣಾ ನಾಗನ್ನವರ, ಮಹೇಶ ಪಾಟೀಲ, ಶೇಖರ ರಜಪೂತ ಕಲ್ಲಪ್ಪ ಚೌಗಲಾ, ಧನ್ಯಕುಮಾರ ಮೇಗೆರಿ, ಮಾರುತಿ ಪೂಜೇರಿ ಸೇರಿದಂತೆ ಕೊಣ್ಣೂರ, ಗೋಕಾಕ ಫಾಲ್ಸ್, ಧುಪದಾಳ ಗ್ರಾಮಸ್ಥರು ಇದ್ದರು.