RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ, ಇದು ಕೇವಲ ಡಿ ಕೆ ಶಿ ಹಬ್ಬಿಸಿರುವ ಸುದ್ದಿ : ಶಾಸಕ ಲಖನ್

ಗೋಕಾಕ:ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ, ಇದು ಕೇವಲ ಡಿ ಕೆ ಶಿ ಹಬ್ಬಿಸಿರುವ ಸುದ್ದಿ : ಶಾಸಕ ಲಖನ್ 

ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ, ಇದು ಕೇವಲ ಡಿ ಕೆ ಶಿ ಹಬ್ಬಿಸಿರುವ ಸುದ್ದಿ : ಶಾಸಕ ಲಖನ್

ಗೋಕಾಕ ಅ 30 : ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುತ್ತಿಲ್ಲ, ಇದು ಕೇವಲ ಡಿ ಕೆ ಶಿವಕುಮಾರ್ ಅವರ ಬಣದಿಂದ ಹಬ್ಬಿಸಿರುವ ಸುದ್ದಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ರಾಜ್ಯದಲ್ಲಿ ಇತ್ತೀಚಿನ ಬೆಳವಣಿಗೆ ಕುರಿತು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಸೋಮವಾರದಂದು ನಗರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ 5 ವರ್ಷ ಸ್ಥಿರವಾಗಿರುತ್ತದೆ, ಯಾವುದೇ ಆಪರೇಷನ್ ಇಲ್ಲ ಎಲ್ಲವೂ ಊಹಾಪೋಹ ಅಷ್ಟೇ ಅನುದಾನದ ಸಲುವಾಗಿ ಇದು ಹೈಕಮಾಂಡ್ ಗಮನ ಸೆಳೆಯಲು ಡಿಕೆಶಿ ಟೀಂ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯಿಂದ ಆಪರೇಷನ್‌ ಕಮಲ ನಡಿತಾ ಇಲ್ಲ. ಡಿಕೆ ಶಿವಕುಮಾರ್ ಬೆಂಬಲಿತ ಶಾಸಕರಿಂದ ಹೈಕಮಾಂಡ್ ಗಮನ ಸೆಳೆಯಲು ಆಪರೇಷನ್‌ ಕಮಲದ ಹೇಳಿಕೆ ನೀಡುತ್ತಿದ್ದಾರೆ ಡಿಕೆಶಿಗೆ ಲಖನ್ ಟಾಂಗ್ ನೀಡಿದರು.
ಸತೀಶ್ ಜಾರಕಿಹೊಳಿ ಕಾರ್ಯಕ್ಕೆ ಸಹೋದರ ಲಖನ ಜಾರಕಿಹೊಳಿ ಶ್ಲಾಘನೆ : ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಕಾರ್ಯಕ್ಕೆ ಲಖನ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಲೋಕೋಪಯೋಗಿ ಇಲಾಖೆಯಲ್ಲಿ ಯಾವುದೇ ಕಮೀಷನ್ ಇಲ್ಲದೇ ಕಾರ್ಯ ನಡೆಯುತ್ತಿವೆ, ಸಿದ್ದರಾಮಯ್ಯ ನಂತರದಲ್ಲಿ ಸತೀಶ್ ಜಾರಕಿಹೊಳಿ ಅವರೇ ಅತ್ಯುತ್ತಮ ನಾಯಕರು, ಈ ಸರಕಾರ ಬರುವಲ್ಲಿ ಸತೀಶ್ ಜಾರಕಿಹೊಳಿ ಅವರ ಪಾತ್ರ ಕೂಡ ಮಹತ್ವವಾಗಿದೆ ಎಂದು ಸಹೋದರ ಸತೀಶ್ ಜಾರಕಿಹೊಳಿ ಅವರ ಕಾರ್ಯವೈಖರಿಯನ್ನು ಹೋಗಳಿದ್ದಾರೆ.

Related posts: