ಗೋಕಾಕ:ನವರಾತ್ರಿ ಹಬ್ಬವು ದೇಶಿಯ ನೆಲದ ಸಂಸ್ಕ್ರತಿಯ ಪ್ರತಿಕ: ಪ್ರಾ. ಜಯಾನಂದ ಮಾದರ
ನವರಾತ್ರಿ ಹಬ್ಬವು ದೇಶಿಯ ನೆಲದ ಸಂಸ್ಕ್ರತಿಯ ಪ್ರತಿಕ: ಪ್ರಾ. ಜಯಾನಂದ ಮಾದರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 27 :
ಗೋಕಾಕ ದೇಶಿಯ ಜನತೆಯ ದುಡಿಮೆಯ ಪ್ರಾಮಾಣಕತೆಯ ಪ್ರತೀಕವಾಗಿ ನಾಡಹಬ್ಬಗಳ ಉತ್ಸವಗಳು ನಡೆಯುತ್ತವೆ, ನವರಾತ್ರಿ ಹಬ್ಬವು ದೇಶೀಯ ಸಂಸ್ಕ್ರತಿಯನ್ನು ಪ್ರತಿಬಿಂಬಿಸುತ್ತದೆ.ಎಂದು ಕರ್ನಾಟಕ ಲಲಿತಕಲಾ ಅಕಾಡಮಿ ಸದಸ್ಯ ಹಾಗೂ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ ಪ್ರಾ, ಜಯಾನಂದ ಮಾದರ ಹೇಳಿದರು.
ಸೋಮವಾರದಂದು ಸಮೀಪದ ಘಟಫ್ರಭಾ ಶುಗರ್ ಪ್ಯಾಕ್ಟರಿಯ ಬಯಲು ಮಂಟಪದಲ್ಲಿ ಹದಿನೆಂಟು ದಿನಗಳ ಪರ್ಯಂತರ ನಾಡಹಬ್ಬ, ನವರಾತ್ರಿ ಉತ್ಸವ ಕಮೀಟಿಯವರು ಹಮ್ಮಿಕೊಂಡಿದ್ದ ದಸರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇದೇ ಮೊದಲಬಾರಿ ಕಳೆದ ಹದಿನಂಟು ದಿನಗಳಿಂದ ಸಾಮೂಹಿಕ ಶ್ರೀದೇವಿ ಗ್ರಂಥ ಪಾರಾಯಣವನ್ನು. ನಾರಾಯಣ ಜಾಧವ, ಆನಂದ ಸೋರಗಾವಿ, ಆಕಾಶ ಉಪ್ಪಾರ,(ಕೆಂಪಟ್ಟಿ) ಸಂಗೀತಾ ಪಾಟೀಲ, (ಸೂರ್ಯವಂಶಿ) ಗಂಗಾ ಬಡಿಗೇರ, ಶೋಭಾ ಇಳಿಗೇರ,ಗೀತಾ ಅಗಸರ, ಪೂಜಾ ಹಿರೇಮನಿ ಪ್ರೇಮಾ ದಂಡಿನ, (ಕಡಕೋಳ) ಅಂಬಿಕಾ ಪಾಟೀಲ, ಮಹಾನಂದಾ ಉಪ್ಪಾರ,(ಅರಭಾವಿ) ನಿತ್ಯವೂ ಪ್ರಾಥಃಕಾಲ. ಶ್ರೀದೇವಿ ಗದ್ಗುಗೆ ಪೂಜೆ ಹಾಗೂ ಅಭೀಷೇಕ, ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ನಡೆಸಿದರು.
ಸಮಾರೋಪ ಸಮಾರಂಭದಲ್ಲಿ ಪ್ರಾಥಮಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೆಗಳ ಬಹುಮಾನ ವಿತರಿಸಲಾಯಿತು, ದಾದನಟ್ಟಿಯ ಮಲ್ಲಿಕಾರ್ಜುನ ಮುದಕವಿ ಪ್ರವಚನ ನೀಡಿದರು,ಧೂಪದಾಳದ ಶ್ರೀ ಸಿದ್ದಾರೂಢ ಚಿದಂಬರ ಮಠದ ಪೂಜ್ಯ ಶ್ರೀ ಭೀಮಾನಂದ ಸ್ವಾಮಿಜಿ ಆರ್ಶೀವಚನ ನೀಡಿದರು,
ಮಾಲೋಜಿ ಸೂರ್ರವಂಶಿ, ಶಿವಾಜಿ ಜಾಧವ, ಸುರೇಶ ಹಿರೇಹೊಳಿ, ಸಿದ್ದಪ್ಪಾ ಹಿರೇಮನಿ, ವಿಠ್ಠಲ ನಾಯಿಕ, ಮಲ್ಲಿಕಾರ್ಜುನ ಇಳಿಗೇರ, ಉಪಸ್ಥಿತರಿದ್ದರು.