ಗೋಕಾಕ:ಜಾತಿ ಗಣತಿ ಬಿಡುಗೊಡೆಗೊಳಿಸುವಂತೆ ಆಗ್ರಹಿಸಿ ಸಚಿವ ಜಾರಕಿಹೊಳಿಗೆ ಮನವಿ

ಜಾತಿ ಗಣತಿ ಬಿಡುಗೊಡೆಗೊಳಿಸುವಂತೆ ಆಗ್ರಹಿಸಿ ಸಚಿವ ಜಾರಕಿಹೊಳಿಗೆ ಮನವಿ
ಗೋಕಾಕ ಅ 11: ಕರ್ನಾಟಕ ಸರ್ಕಾರ ನಡೆಸಿರುವ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಬಿಡುಗಡೆಗೊಳಿಸಿ, ರಾಜ್ಯದ ಜನಸಂಖ್ಯೆಯಲ್ಲಿ ಶೇ. 85%ರಷ್ಟಿರ ಅಲ್ಪಸಂಖ್ಯಾತ-ಹಿಂದುಳಿದ-ದಲಿತ (ಅಹಿಂದ) ವರ್ಗಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಇಲ್ಲಿನ ಅಹಿಂದ ಚೇತನ ಸಂಘಟನೆಯ ಸದಸ್ಯರು ಬುಧವಾರದಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದರು.
2016ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು 180 ಕೋಟಿಗಳನ್ನು ವ್ಯಯಿಸಿ ನಡೆಸಿದ್ದಾರೆ ಸಮೀಕ್ಷೆ ನಡೆದು 5 ವರ್ಷಗಳಾಗುತ್ತಿದೆ . ಸಚಿವ ಸಂಪುಟದ ತಮ್ಮ, ತಮ್ಮ ಜಾತಿಗಳ ಬಗ್ಗೆ ಮಾಹಿತಿಗಳನ್ನು ನೀಡಿಸಿರುತ್ತಾರೆ. ಆದರೆ ಸಮೀಕ್ಷೆ ನಡೆಸಿ 5 ವರ್ಷಗಳು ಕಳೆದರೂ ಇದುವರೆಗು ಸರಕಾರಗಳು ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ, ಜಾತಿ ಗಣತಿ ಬಿಡುಗಡೆಗೊಳಿಸಬೇಕೆಂದು ಸರ್ಕಾರಗಳನ್ನು ಒತ್ತಾಯಿಸುವ ಸಮಯದಲ್ಲಿ ಕೆಲವರು ವರದಿಯನ್ನು ಬಿಡುಗಡೆ ಮಾಡಬಾರದೆಂದು ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಥವಾ ಜಾತಿ ಗಣತಿಯ ಬಿಡುಗಡೆಗೊಳಿಸುವುದರಿಂದ ಜಾತಿಗಳ ಜನಸಂಖ್ಯೆ,ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ರಾಜ್ಯದ ಜನರು ತಿಳಿಯಬೇಕಿದೆ. ಮುಖ್ಯವಾಗಿ ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ 224 ವಿಧಾನಸಭಾ ಕ್ಷೇತ್ರಗಲ್ಲಿಯು ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 85 ರಷ್ಟು ಅಲ್ಪಸಂಖ್ಯಾತ – ಹಿಂದುಳಿದ – ದಲಿತ ಸಮುದಾಯಗಳಿವೆ ಈ ಸಮುದಾಯಗಳಿಗೆ ಸಿಗಬೇಕಾಗಿರುವ ಹಕ್ಕುಗಳು, ರಾಜಕೀಯ ಸ್ಥಾನಮಾನಗಳು ಸಿಗುತ್ತಿಲ್ಲ. ಈಗಲಾದರು ಅಹಿಂದ ವರ್ಗಗಳಿಗೆ ನ್ಯಾಯ ಸಿಗಬೇಕಾದರೆ,ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆಯನ್ನುಸರ್ಕಾರವು ಅಂಗೀಕರಿಸಿ, ಸಾರ್ವಜನಿಕವಾಗಿ ಬಿಡುಗಡೆಗೊಳಿಸಬೇಕು.
ಸಮೀಕ್ಷೆ ಕದ್ದುಮುಚ್ಚಿ ಮಾಡಿರಲಿಲ್ಲ ಹಾಗೂ ಸಮೀಕ್ಷೆಯನ್ನು ಸರ್ಕಾರಿ ಇಲಾಖೆಯವರು ಮಾಡಿರುವಂತದ್ದು,
ಗಣತಿದಾರರಲ್ಲಿ ಎಲ್ಲಾ ಜಾತಿಯವರು ತೊಡಗಿಸಿಕೊಂಡಿದ್ದರು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅಥವಾ ಜಾತಿ ಗಣತಿ ಬಿಡುಗಡೆ ಗೊಳಿಸಬೇಕಾದುದು ಸರಕಾರದ ಕರ್ತವ್ಯ.ಅಲ್ಪಸಂಖ್ಯಾತ – ಹಿಂದುಳಿದ – ದಲಿತ ಸಮುದಾಯಗಳಾದ ನಮಗೆ, ನಮ್ಮ ಸ್ಥಿತಿಗತಿಗಳ ಬಗ್ಗೆ, ಜನಸಂಖ್ಯೆಯ ಬಗ್ಗೆ, ನಂಬಿಕೆಯಿದೆ. ಜನರ ತೆರಿಗೆ ಹಣದಿಂದ ಸಮೀಕ್ಷೆ ಮಾಡಲಾಗಿದೆ. ಆ ಹಣ ವ್ಯರ್ಥವಾಗದಂತೆ, ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಿ, ಶೇ. 80% ರಷ್ಟು ಜನಸಂಖ್ಯೆಯನ್ನು ಹೊಂದಿರುವ ಅಹಿಂದ ವರ್ಗಗಳಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನ್ಯಾಯ ಸಿಗುವಂತೆ ಮಾಡಬೇಕು ಕರ್ನಾಟಕ ಸರ್ಕಾರ
ವಿಳಂಬ ಮಾಡದೇ, ಸಾಮಾಜಿಕ, ಶೈಕ್ಷಣಿಕ ಮತ್ತು ಜಾತಿ ಗಣತಿ ವರದಿಯನ್ನು ಅಂಗೀಕರಿಸಿ, ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ವಿನಾಯಕ ಕಟ್ಟಿಕರ, ಲಕ್ಷ್ಮಣ ಮಸಗುಪ್ಪಿ. ಮಲಿಕ್ ಹುಣಶ್ಶಾಳ್.ವಿಠ್ಠಲ್ ಮುರ್ಕಿಭಾವಿ ಬಸವರಾಜ ಸರವರ.ಮಾಳಪ್ಪಾ ಮಾರಾಪುರ.ಸಿದ್ದು ಮರಡಿ.ಗೋಪಾಲ ದಳವಾಯಿ ಹಾಗೂ ಇತರು ಇದ್ದರು