ಮೂಡಲಗಿ:ಮೂಡಲಗಿ ತಾಲೂಕಿಗೆ ಆಗ್ರಹಿಸಿ ಸೆ. 25 ರಂದು ಮುಖ್ಯಮಂತ್ರಿಗೆ ಬೇಟ್ಟಿ : ಶಾಸಕ ಬಾಲಚಂದ್ರ ಮಾಹಿತಿ

ಮೂಡಲಗಿ ತಾಲೂಕಿಗೆ ಆಗ್ರಹಿಸಿ ಸೆ. 25 ರಂದು ಮುಖ್ಯಮಂತ್ರಿಗೆ ಬೇಟ್ಟಿ : ಶಾಸಕ ಬಾಲಚಂದ್ರ ಮಾಹಿತಿ
ಮೂಡಲಗಿ ಸೆ 23 : ಮೂಡಲಗಿ ತಾಲೂಕು ರಚನೆ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸೆ.25 ರಂದು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೂಡಲೇ ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹಿಸಲಾಗುವುದು
ಮೂಡಲಗಿ ತಾಲೂಕು ರಚನೆ ಮಾಡಲು ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಬೇಕು. ಇದರಿಂದ ಕಳೆದ 4 ದಶಕಗಳ ಮೂಡಲಗಿ ನಾಗರೀಕರ ಹೋರಾಟಕ್ಕೆ ಮನ್ನನೆ ಬಂದಂತಾಗುತ್ತದೆ. ತಾಲೂಕಾ ಕೇಂದ್ರವಾಗಲಿಕ್ಕೆ ಎಲ್ಲ ಅರ್ಹತೆ ಪಡೆದಿರುವ ಮೂಡಲಗಿಯನ್ನು ಸರ್ಕಾರ ಇತ್ತೀಚೆಗೆ ಹೊಸ ತಾಲೂಕು ಘೋಷಣೆಯಲ್ಲಿ ಕೈಬಿಟ್ಟಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ದಿನೇ ದಿನೇ ಹೋರಾಟ ವ್ಯಾಪಕವಾಗಿ ನಡೆಯುತ್ತಿದೆ. ಹೊಸ ತಾಲೂಕುಗಳ ಪಟ್ಟಿಯಲ್ಲಿ ಮೂಡಲಗಿ ಪಟ್ಟಣವನ್ನು ಮರು ಸೇರ್ಪಡೆ ಮಾಡಿ ಹೋರಾಟಕ್ಕೆ ನ್ಯಾಯ ದೊರಕಿಸಿಕೊಡುವಂತೆ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಲಿದ್ದಾರೆ.
ಈಗ ನಡೆಯುತ್ತಿರುವ ಹೋರಾಟ ನ್ಯಾಯಯುತವಾಗಿದ್ದು, ಶಾಂತಿಯಿಂದ ಹೋರಾಟ ನಡೆಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೋರಾಟ ಸಮೀತಿಯವರು ಸಹಕರಿಸಬೇಕು. ಮೂಡಲಗಿ ತಾಲೂಕು ರಚನೆ ಆಗುವುದರಲ್ಲಿ ಯಾರಿಗೂ ಯಾವ ಅನುಮಾನವೂ ಬೇಡವೆಂದು ಅವರು ಪುನರುಚ್ಛರಿಸಿದ್ದಾರೆ.