RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ;ಮಾನವೀಯ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ : ಡಾ. ಸಿ.ಕೆ.ನಾವಲಗಿ

ಗೋಕಾಕ;ಮಾನವೀಯ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ : ಡಾ. ಸಿ.ಕೆ.ನಾವಲಗಿ 

ಮಾನವೀಯ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ : ಡಾ. ಸಿ.ಕೆ.ನಾವಲಗಿ

 
ನಮ್ಮ ಬೆಳಗಾವಿ ಇ – ,ವಾರ್ತೆ , ಗೋಕಾಕ ಡಿ 21:

 

ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಶಿಕ್ಷಣದೊಂದಿಗೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ ಜಾನಪದ ತಜ್ಞ ಡಾ. ಸಿ.ಕೆ.ನಾವಲಗಿ ಹೇಳಿದರು.
ಶುಕ್ರವಾರದಂದು ಸಂಜೆ ನಗರದ ಆಕ್ಸ್‍ಫರ್ಡ್ ಶಾಲೆಯ 6ನೇ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಮಕ್ಕಳನ್ನು ಹಣ ಗಳಿಸುವ ಯಂತ್ರಗಳನ್ನಾಗಿಸದೇ ಸಂಸ್ಕಾರವನ್ನು ನೀಡಿ ಉತ್ತಮ ನಾಗರೀಕರನ್ನಾಗಿ ಮಾಡಬೇಕು. ಪಾಲಕರು ಹೆಚ್ಚಿನ ಸಮಯವನ್ನು ತಮ್ಮ ಮಕ್ಕಳ ಶಿಕ್ಷಣದತ್ತ ಗಮನ ಹರಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳ ಪ್ರತಿಭೆ ಹಾಗೂ ಸಾಮಥ್ರ್ಯಕ್ಕೆ ಅನುಗುಣವಾಗಿ ಕ್ಷೇತ್ರದ ಆಯ್ಕೆಯೊಂದಿಗೆ ನಮ್ಮ ದೇಶದ ಪರಂಪರೆಯನ್ನು ಗೌರವಿಸಿ ಅನ್ಯದೇಶದ ಒಳಿತನ್ನು ಸ್ವೀಕರಿಸಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಯುವ ಧುರೀಣ ಅಮರನಾಥ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸಿದರು.
ವೇದಿಕೆ ಮೇಲೆ ಲಯನ್ಸ್ ಸಂಸ್ಥೆಯ ಜಿ.ಎಸ್.ಸಿದ್ದಾಪೂರಮಠ, ಬೆಂಗಳೂರಿನ ಸಿಪಿಐ ಎಚ್.ಕೆ.ಭಜಂತ್ರಿ, ಬೈಲಹೊಂಗಲ ಸಿಡಿಪಿಓ ಎಮ್.ಎಚ್.ಭಜಂತ್ರಿ, ಮೈಸೂರಿನ ಡಾ. ಮೌಲ್ಯರಾಜ, ಬಿ.ಡಿ.ಶಿಂಗಳಾಪೂರ, ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಭಜಂತ್ರಿ, ಕಾರ್ಯದರ್ಶಿ ಎ.ಎಸ್.ಭಜಂತ್ರಿ, ಪ್ರಾಚಾರ್ಯೆ ಜೆ.ಎ.ಭಜಂತ್ರಿ, ಭೀಮಶಿ ಭರಮನ್ನವರ, ಶರ್ಫುದ್ದಿನ್ ನಾರೋ, ಬಾಬು ಮುಳಗುಂದ, ಕೆಂಪಣ್ಣ ಪಾತ್ರೋಟ, ಪ್ರಶಾಂತ ಸೂಪಿಮಠ, ವಿಠ್ಠಲ ಮುರ್ಕಿಭಾಂವಿ, ಪ್ರತಾಪ ಕುಲಕರ್ಣಿ, ಅಭಿಬುಲ್ಲಾ ಚಪ್ಪು, ಮುತ್ತೆಪ್ಪ ಪಾಟೀಲ ಇದ್ದರು.

Related posts: