ಗೋಕಾಕ:ದಿ.15 ರಂದು ಜಾಗನೂರ ಗ್ರಾಮದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವ ಕಾರ್ಯಕ್ರಮ
ದಿ.15 ರಂದು ಜಾಗನೂರ ಗ್ರಾಮದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವ ಕಾರ್ಯಕ್ರಮ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ 14 :
ಶ್ರೀ ಭಗೀರಥ ಯುವಕ ಸಂಘ ಜಾಗನೂರ ಇವರಿಂದ ತಾಲೂಕಿನ ಸಮೀಪದ ಜಾಗನೂರ ಗ್ರಾಮದಲ್ಲಿ ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವ ಕಾರ್ಯಕ್ರಮವನ್ನು ದಿ.15 ಬುಧವಾರದಂದು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸದುರ್ಗ ಭಗೀರಥ ಪೀಠದ ಪೀಠಾಧಿಪತಿ ಡಾ. ಪುರುಷೋತ್ತಮಾನಂದಪುರಿ ಸ್ವಾಮಿಜಿ, ಸಾನಿಧ್ಯ ಜಾಗನೂರ ಜಡಿಸಿದ್ಧೇಶ್ವರ ಮಠದ ವೆಂಕಯ್ಯಾ ಸ್ವಾಮಿಜಿ, ಅಧ್ಯಕ್ಷತೆಯನ್ನು ರಾಜ್ಯ ಉಪ್ಪಾರ ಯುವ ಘಟಕದ ರಾಜ್ಯಾಧ್ಯಕ್ಷ ಭರಮಣ್ಣ ಉಪ್ಪಾರ, ಉದ್ಘಾಟನೆಯನ್ನು ರಾಯಭಾಗ ಶಾಸಕ ದುರ್ಯೋಧನ ಐಹೊಳೆ ನೆರವೆರಿಸಲಿದ್ದಾರೆ.
ಮುಖ್ಯತಿಥಿಗಳಾಗಿ ಜಿಪಂ ಸದಸ್ಯ ಪವನ ಕತ್ತಿ, ಮಾಜಿ ಜಿಪಂ ಅಧ್ಯಕ್ಷತೆ ತೇಜಸ್ವಿನಿ ನಾಯಿಕವಾಡಿ, ಮಲ್ಲಿಕಾರ್ಜುನ ಚೌಕಾಶಿ, ತಾಪಂ ಸದಸ್ಯೆ ಮುತ್ತವ್ವ ಕರಿಕಟ್ಟಿ, ಗ್ರಾಪಂ ಅಧ್ಯಕ್ಷೆ ಸುಧಾರಾಣಿ ಮರಾಠೆ, ರಾಮಣ್ಣ ತೋಳಿನವರ, ಪಾಂಡುರಂಗ ಹನಮನ್ನವರ, ರಾಮಪ್ಪ ಪುಕಾಟೆ, ಭೀಮಪ್ಪ ಹನಜಾನಟ್ಟಿ, ಬಾಳಪ್ಪ ನಾಯಿಕ ಆಗಮಿಸಲಿದ್ದಾರೆ.
ಮಧ್ಯಾಹ್ನ 3ಗಂಟೆಗೆ ಡಾ. ಪುರುಷೋತ್ತಮಾನಂದಪುರಿ ಸ್ವಾಮಿಜಿ ಅವರನ್ನು ಗ್ರಾಮಸ್ಥರಿಂದ ಆರತಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳುವದು. 4ಗಂಟೆಗೆ ಕಾರ್ಯಕ್ರಮ ಜರುಗಿ ಎಸ್ಎಸ್ಎಲ್ಸಿ ಹಾಗೂ ಪಿಯೂಸಿ ಪರೀಕ್ಷೆಯಲ್ಲಿ 80% ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಜರುಗಲಿದೆ.