ಗೋಕಾಕ:ಜಾರಕಿಹೊಳಿ ಕುಟುಂಬ ಇಬ್ಬಾಗವಾಗಲು ಅಂಬಿರಾವ್ ಪಾಟೀಲ್ ಕಾರಣ : ಸಚಿವ ಸತೀಶ ಜಾರಕಿಹೊಳಿ
ಜಾರಕಿಹೊಳಿ ಕುಟುಂಬ ಇಬ್ಬಾಗವಾಗಲು ಅಂಬಿರಾವ್ ಪಾಟೀಲ್ ಕಾರಣ : ಸಚಿವ ಸತೀಶ ಜಾರಕಿಹೊಳಿ
ನಮ್ಮ ಬೆಳಗಾವಿ ಸುದಿ , ಗೋಕಾಕ ಏ 23 :
ಜಾರಕಿಹೊಳಿ ಕುಟುಂಬ ಇಬ್ಬಾಗವಾಗಲು ರಮೇಶ ಜಾರಕಿಹೊಳಿ ಅಳಿಯ ಅಂಬಿರಾವ ಪಾಟೀಲ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು
ಮಂಗಳವಾರದಂದು ತಾಲೂಕಿನ ಗುಜನಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕೇವಲ ರಾಹುಲ್ ಗಾಂಧಿ ಅಷ್ಟೆ ಅಲ್ಲ , ಸಿದ್ದರಾಮಯ್ಯ, ಪರಮೇಶ್ವರ, ವೇನುಗೊಪಾಲ ಸೇರಿದಂತೆ ಕಾಂಗ್ರೆಸ್ ಎಲ್ಲ ನಾಯಕರು ರಮೇಶ್ ಜಾರಕಿಹೊಳಿ ಮುಂದೆ ಮಂಡಿಯೂರಿದ್ದಾರೆ. ಪತ್ರದಲ್ಲಿ, ಪೊನ್ ನಲ್ಲಿ, ಖುದ್ದು ಹುಡುಕಿ ಹುಡುಕಿ ಸಾಕಾಗಿ ಹೋಗಿದೆ. ರಮೇಶ ಜಾರಕಿಹೊಳಿ ಉಳಿಸಿಕೊಳ್ಳು ಪ್ರಯತ್ನ ಇನ್ನೇನು ಉಳಿದಿಲ್ಲ. ರಮೇಶ್ ಜಾರಕಿಹೊಳಿ ಮಗನನ್ನು ಆಡಿಸಲು ಬಂದವನು ಇಂದು ಜಿಲ್ಲೆಯನ್ನು ಆಳುತ್ತಿದ್ದಾನೆ. ಅಂಬಿರಾವ್ ಪಾಟೀಲ್ ಇಲ್ಲದೆ ಯಾವ ಕೆಲಸವೂ ಆಗುವದಿಲ್ಲ. ಅದಕ್ಕಾಗಿ ಜನ ಬೇಸತ್ತು ಹೋಗಿದ್ದಾರೆ. ಶಾಸಕ ರಮೇಶ ಜಾರಕಿಹೊಳಿ ಮಾಸ್ಟರ್ ಮೈಂಡ್ ಅಂಬಿರಾವ್ ಪಾಟೀಲ್.
ಇನಷ್ಟುದಿನ ಹೊದರೆ ನಾವು ಜಾರಕಿಹೊಳಿ ಸರ್ ನೇಮ್ ಬದಲಿಸಿಕೊಂಡು ಪಾಟೀಲ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಸಚಿವರು ಖಾರವಾಗಿ ಪ್ರತಿಕ್ರಿಯೆ ನೀಡಿದರಲ್ಲದೆ ರಮೇಶ್ ಜಾರಕಿಹೊಳಿ ಪಕ್ಷ ಬೀಟ್ಟರೆ ಅಂಬಿರಾವ್ ಪಾಟೀಲ್ ಕಾರಣ.
ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಪಕ್ಷ ಬಿಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಅವರು ಪಕ್ಷ ಬೀಡುವದಾದರೆ ಬೀಡಲಿ , ನಿರ್ಧಾರ ಯಾವುದೆ ಆಗಿದ್ದರೂ ಬೇಗನೆ ತಗೆದುಕೊಳ್ಳಲಿ ಎಂದು ಸಚಿವರು ಸಹೋದರ ರಮೇಶಗೆ ಟಾಂಗ್ ನೀಡಿದರು