ಗೋಕಾಕ:ಬ್ಯಾಕಲಾಗ ಹುದ್ದೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಅರಣ್ಯ ಸಚಿವರಿಗೆ ಮನವಿ
ಬ್ಯಾಕಲಾಗ ಹುದ್ದೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಅರಣ್ಯ ಸಚಿವರಿಗೆ ಮನವಿ
ಗೋಕಾಕ ಜ 22 :ಬೆಳಗಾವಿ ವೃತ್ತದಲ್ಲಿ ಅರಣ್ಯ ರಕ್ಷಕ ಹುದ್ದೆಯಿಂದ ಉಪ ವಲಯ ಅರಣ್ಯ ಅಧಿಕಾರಿಗಳ ಬ್ಯಾಕಲಾಗ ಹುದ್ದೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಎಸಿ. ಎಸ್.ಟಿ ನೌಕರರ ಕ್ಷೇಮಾಭಿವೃಧ್ಧಿ ಸಂಘ ಮಂಗಳವಾರ ಗೋಕಾಕಕಿನ ಸಚಿವರ ಗೃಹ ನಿವಾಸ ಹಿಲಗಾರ್ಡನದಲ್ಲಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು
ಬ್ಯಾಕಲಾಗ ಹುದ್ದೆಯಲ್ಲಿ ಆಗಿರುವ ಅನ್ಯಾಯಕ್ಕೆ ಸಂಬಂಧ ಪಟ್ಟಂತೆ 24/4/1978 ರಿಂದ ಇಲ್ಲಿಯವರೆಗೂ ಅರಣ್ಯ ರಕ್ಷಕ ಹುದ್ದೆಯಿಂದ ಉಪ ವಲಯ ಅರಣ್ಯ ಅಧಿಕಾರಿಗಳ ಹುದ್ದೆಗೆ ರೋಷ್ಠರ ಬಿಂಧುಗಳನ್ನು ಅವವಡಿಸಿ ಬೆಳಗಾವಿ ವೃತ್ತದಲ್ಲಿ ಗುರುತಿಸಲ್ಪಟ್ಟ ಬ್ಯಾಕಲಾಗ ಮುಂಬಡ್ತಿ ಹುದ್ದೆಗಳಲ್ಲಿ 20 ಪರಿಷ್ಠಿತ ಜಾತಿ ಮತ್ತು 7 ಪರಿಷ್ಠಿತ ಫಂಗಡಗಳ ಬ್ಯಾಕಲಾಗ ಹುದ್ದೆಗಳ ಪೈಕಿ 9 ಪರಿಷ್ಠಿತ ಜಾತಿ ಮತ್ತು 1 ಪರಿಷ್ಠಿತ ಫಂಗಡಗಳ ಅರಣ್ಯ ರಕ್ಷಕರಿಗೆ ಉಪ ವಲಯ ಅರಣ್ಯ ಅಧಿಕಾರಿಗಳ ಹುದ್ದೆಗೆ ಮುಂಬಡ್ತಿ ನೀಡಿದ್ದು , ಆದರೆ ಬಿಕೆ ಪವಿತ್ರ ಪ್ರಕರಣದ ನೇಪ ಓಡಿ ಫಧ್ನೋನತ್ತಿ ನೀಡಿರುವ ಬ್ಯಾಕಲಾಗ ಹುದ್ದೆಗಳನ್ನು ಹಿಂದೆ ತೆಗೆದುಕೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ
ಈ ಹುದ್ದೆಗಳನ್ನು ಮುಂಬಡ್ತಿ ಮೂಲಕ ತುಂಬಲು ಬಿಕೆ ಪವಿತ್ರ ಪ್ರಕರಣವು ಯಾವುದೇ ಅಡೆತಡೆಗಳನ್ನು ಉಂಟು ಮಾಡುವದಿಲ್ಲ ಅದು ಅಲ್ಲದೆ ಬೆಳಗಾವಿ ವೃತ್ತದಲ್ಲಿ ಪರಿಷ್ಠಿತ ಜಾತಿಗೆ ಪಧ್ನೋನತ್ತಿಯಲ್ಲಿ 15 % ಮತ್ತು ಪರಿಷ್ಠಟ ಪಂಗಂಡಕ್ಕೆ 3% ವೂ ತುಂಬಿದ್ದು ಇರುವದಿಲ್ಲ ಹೀಗಾಗಿ ಅನ್ಯಾಯನ್ನು ಸರಿಪಡಿಸುವಂತೆ ಸಚಿವರಲ್ಲಿ ಮನವಿ ಮಾಡಿಕೋಳ್ಳಲಾಯಿತ್ತು
ಈ ಸಂದರ್ಭದಲ್ಲಿ ಕ್ಷೇಮಾಭಿವೃಧ್ಧಿ ಸಂಘದ ಅಧ್ಯಕ್ಷ ಎಂ.ಕೆ ಪಾತ್ರೋಟ , ಉಪಾಧ್ಯಕ್ಷ ಆರ್.ವಿ.ಮೂರಾರಿ , ಕಾರ್ಯದರ್ಶಿ ಸಿ.ಬಿ ರಾಮಯ್ಯ , ಸಂಘಟನಾ ಕಾರ್ಯದರ್ಶಿ ಎಸ್.ಎನ್ .ನಾಯಿಕ ಸೇರಿದಂತೆ ಇನ್ನುಳಿದ ಅಧಿಕಾರಿಗಳು ಇದ್ದರು
ಎಸಿ.ಎಸ.ಟಿ ಕ್ಷೇಮಾಭಿವೃದ್ಧಿ ನೌಕರ ಸಂಘದ ಮನವಿಯನ್ನು ಆಲಿಸಿದ ಸಚಿವರು ಅನ್ಯಾಯವನ್ನು ಸರಿಪಡಿಸುವ ಭರವಸೆ ನೀಡಿದರು