RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಕರಾಳ ದಿನಾಚರಣೆಗೆ ಕಡಿವಾಣ ಹಾಕಿ : ಗೋಕಾಕದಲ್ಲಿ ಕರವೇ ಒತ್ತಾಯ

ಗೋಕಾಕ:ಕರಾಳ ದಿನಾಚರಣೆಗೆ ಕಡಿವಾಣ ಹಾಕಿ : ಗೋಕಾಕದಲ್ಲಿ ಕರವೇ ಒತ್ತಾಯ 

ಕರಾಳ ದಿನಾಚರಣೆಗೆ ಕಡಿವಾಣ ಹಾಕಿ : ಗೋಕಾಕದಲ್ಲಿ ಕರವೇ ಒತ್ತಾಯ

ಗೋಕಾಕ ಅ 9 : ನಾಡವಿರೋಧಿ ಎಂ.ಇ.ಎಸ್. ಸಂಘಟನೆ ನಡೆಸುವ ಕರಾಳ ದಿನಾಚರಣೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ಘಟಕದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ ನಗರದ ತಹಶೀಲ್ದಾರ ಕಚೇರಿ ಎದುರು ಸೇರಿದ ಕಾರ್ಯಕರ್ತರು ಎಂ.ಇ.ಎಸ್. ಸಂಘಟನೆ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿ ತಹಶೀಲ್ದಾರ ಜಿ.ಎಸ್. ಮಾಳಗಿ ಮುಖಾಂತರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಿಗೆ ಪ್ರತ್ಯೇಕ ಮನವಿ ಅರ್ಪಿಸಿದರು.
ಕಳೆದ ಹಲವಾರು ದಶಕಗಳಿಂದ ನಾಡವಿರೋಧಿ ಎಂ.ಇ.ಎಸ್. ಸಂಘಟನೆ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸಿ ಕನ್ನಡವನ್ನು ಮತ್ತು ಕರ್ನಾಟಕವನ್ನು ಅವಮಾನಿಸುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ಬಾರಿ ಹೋರಾಟಗಳನ್ನು ಮಾಡಿ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಅರ್ಪಿಸಿದರೂ ಎಂ.ಇ.ಎಸ್. ಗೆ ಕಡಿವಾಣ ಹಾಕಲು ಜಿಲ್ಲಾಡಳಿತ ವಿಪಲವಾಗಿರುವುದು ಖಂಡನೀಯ. ಈ ಪ್ರಕರಣವನ್ನು ಅತ್ಯಂಕ ಸೂಕ್ಷ್ಮವಾಗಿ ಪರಿಗಣಿಸಿ ಈ ಬಾರಿ ನಾಡವಿರೋಧಿ ಎಂ.ಇ.ಎಸ್. ಸಂಘಟನೆಯ ಕರಾಳ ದಿನಾಚರಣೆಗೆ ಕಡಿವಾಣ ಹಾಕಿ ರಾಜ್ಯದ ಮತ್ತು ಕನ್ನಡದ ಮಾನವನ್ನು ಕಾಪಾಡಬೇಕೆಂದು ಕ.ರ.ವೇ. ಸಕಲ ಕನ್ನಡಿಗರ ಪರವಾಗಿ ಮನವಿಯಲ್ಲಿ ವಿನಂತಿಸಲಾಗಿದೆ. ಇದಕ್ಕೆ ತಪ್ಪಿದಲ್ಲಿ ಎಂ.ಇ.ಎಸ್. ಆಚರಿಸುವ ಕರಾಳ ದಿನಾಚರಣೆಗೆ ಮುತ್ತಿಗೆ ಹಾಕಿ ಉಗ್ರವಾಗಿ ಪ್ರತಿಭಟಿಸಲಾಗುವುದೆಂದು ಈ ಮನವಿ ಮೂಲಕ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ದೀಪಕ ಹಂಜಿ, ರೆಹಮಾನ ಮೋಕಾಶಿ, ಮಹಾದೇವ ಮಕ್ಕಳಗೇರಿ, ಮುಗುಟ ಫೈಲವಾನ, ಶೆಟ್ಟೆಪ್ಪ ಗಾಡಿವಡ್ಡರ, ಕೆಂಪಣ್ಣ ಕಡಕೋಳ, ಅಶೋಕ ಬಂಡಿವಡ್ಡರ, ರವಿ ನಾಂವಿ, ರಮೇಶ ಕಮತಿ, ಹನೀಫ ಸನದಿ, ಮಲ್ಲಪ್ಪ ತಲೆಪ್ಪಗೋಳ, ರಾಮಣ್ಣ ಸಣ್ಣ ಲಗಮನ್ನವರ, ಲಕ್ಕಪ್ಪ ನಂದಿ, ಮುತ್ತೆಪ್ಪ ಘೋಡಗೇರಿ, ಲಾಜಿಮ್ ಮೋಕಾಶಿ, ರಾಜು ಗಾಡಿವಡ್ಡರ, ಲಕ್ಷ್ಮಣ ಪಾತ್ರೋಟ, ದುರಗಪ್ಪ ಬಂಡಿವಡ್ಡರ, ತಮ್ಮಣ್ಣ ಬಂಡಿವಡ್ಡರ, ಕೃಷ್ಣಾ ಬಂಡಿವಡ್ಡರ, ಆನಂದ ಬಿ.ಕೆ., ದುಂಡಪ್ಪ ಮೆಳವಂಕಿ, ಯಶವಂತ ಗ್ಯಾನಪ್ಪನವರ, ಕಿರಣ ಕೊಳವಿ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Related posts: