RNI NO. KARKAN/2006/27779|Monday, June 16, 2025
You are here: Home » breaking news » ಮೂಡಲಗಿ:23 ಸ್ಥಾನಗಳ ಪೈಕಿ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು 15 ವಾರ್ಡುಗಳಲ್ಲಿ ಬಿಜೆಪಿಗೆ ಗೆಲುವಿನ ನಗೆ

ಮೂಡಲಗಿ:23 ಸ್ಥಾನಗಳ ಪೈಕಿ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು 15 ವಾರ್ಡುಗಳಲ್ಲಿ ಬಿಜೆಪಿಗೆ ಗೆಲುವಿನ ನಗೆ 

23 ಸ್ಥಾನಗಳ ಪೈಕಿ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು 15 ವಾರ್ಡುಗಳಲ್ಲಿ ಬಿಜೆಪಿಗೆ ಗೆಲುವಿನ ನಗೆ

ಮೂಡಲಗಿ ಸೆ 3 : ತೀವ್ರ ಜಿದ್ದಾ ಜಿದ್ದಿಯಿಂದ ಕೂಡಿದ ಮೂಡಲಗಿ ಪುರಸಭೆ ಚುನಾವಣೆಯಲ್ಲಿ 23 ಸ್ಥಾನಗಳ ಪೈಕಿ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು 15 ವಾರ್ಡುಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಒಲಿದಿದೆ. ವಿರೋಧಿ ಪಾಳಯದ ಜೆಡಿಎಸ್‍ನ ಭೀಮಪ್ಪ ಗಡಾದ ಅವರು ಕೇವಲ 8 ಸ್ಥಾನಗಳನ್ನು ಪಡೆ ದಿದ್ದರಿಂದ ಅಧಿಕಾರದ ಕನಸು ನುಚ್ಚುನೂರಾಗಿದೆ.
ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ, ಈ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿತ ಬಿಜೆಪಿ ಅಭ್ಯರ್ಥಿಗಳು ಸಂಪೂರ್ಣ ಮೇಲುಗೈಸಾಧಿಸಿದ್ದು ಮತ್ತೊಮ್ಮೆ ಸ್ಪಷ್ಠ ಬಹುಮತ ಪಡೆದಂತಾಗಿದೆ. ಜಾರಕಿಹೊಳಿ ವರ್ಸಸ್ಸ ಗಡಾದ ಚುನಾವಣೆ ಎಂದೆ ಭಾವಿಸಿದ್ದ ಈ ಪುರಸಭೆ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮೂಡಲಗಿ ಹಾಗೂ ಗುರ್ಲಾಪೂರ ಪಟ್ಟಣದ ಮತದಾರರು ಸ್ಪಷ್ಟ ಬಹುಮತ ನೀಡಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅವರಿಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ. ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಬಾಲಚಂದ್ರ ಜಾರಕಿಹೊಳಿ(ಬಿಜೆಪಿ) ಹಾಗೂ ಭೀಮಪ್ಪ ಗಡಾದ(ಜೆಡಿಎಸ್) ಅವರುಗಳಲ್ಲಿ ಭೀಮಪ್ಪ ಗಡಾದ ಅವರು ಮೂಡಲಗಿ ಪಟ್ಟಣದಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ಇದನ್ನೇ ಮೂಲ ಬಂಡವಾಳವನ್ನಾಗಿ ಸ್ವೀಕರಿಸಿದ್ದ ಗಡಾದ ಅವರು 21 ವಾರ್ಡಗಳಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿ ಮಣಿಸಲು ಕಾರ್ಯ ತಂತ್ರ ರೂಪಿಸಿದ್ದರು. ಆದರೆ ಗಡಾದ ಅವರ ಕಾರ್ಯತಂತ್ರಗಳು ಫಲಿಸದೆ ಮತದಾರರು ಗಡಾದ ಬೆಂಬಲಿತ ಜೆಡಿಎಸ್ ಅಭ್ಯರ್ಥಿಗಳನ್ನು ತಿರಸ್ಕರಿಸಿ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಬಿಜೆಪಿ ಅಭ್ಯರ್ಥಿಗಳಿಗೆ ಜನಾಶೀರ್ವಾದ ನೀಡಿದ್ದಾರೆ.
ವಾರ್ಡನಂ.2, 14, 16, ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ತೀವ್ರ ಪೈಪೋಟಿ ಎರ್ಪಟ್ಟಾಗ ಈ ವಾರ್ಡಗಳಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಯಾರೋಬ್ಬರಿಗೂ ಪಕ್ಷದಿಂದ ಬಿಫಾರ್ಮ ನೀಡದೆ ಪಕ್ಷೇತರಾಗಿ ಸ್ಪರ್ಧೆ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಈ ವಾರ್ಡಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಿ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. 18ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಗೆದ್ದಿರುವ ಅಬ್ದುಲಗಫಾರ ಡಾಂಗೆ ಅವರು ಬಿಜೆಪಿಗೆ ಬೆಷರತ್ತ ಬೆಂಬಲ ಸೂಚಿಸಿದ್ದರಿಂದ ಒಟ್ಟು 15ಸ್ಥಾನಗಳು ಬಿಜೆಪಿ ಪಾಲಾಗಿವೆ. ಗುರ್ಲಾಪೂರದ ಎಲ್ಲ 3ವಾರ್ಡಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿರುವದು ಈ ಚುನಾವಣೆಯ ವಿಶೇಷವಾಗಿದೆ. 17ವಾರ್ಡುಗಳಲ್ಲಿ ಸ್ಪರ್ಧಿಸಿದ್ದ ರಾಷ್ಟೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವ ಮೂಲಕ ಶೂನ್ಯ ಸಾಧನೆ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ವಿಜಯೋತ್ಸವ ಮುಗಿಲು ಮುಟ್ಟಿತು. ಇಲ್ಲಿನ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಗುಲಾಲು ಎರಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಗೆಲುವಿನ ರೂವಾರಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಜಯಕಾರ ಹಾಕಿ ಸಂತಸ ವ್ಯಕ್ತಪಡಿಸಿದರು.
ಬಾಲಚಂದ್ರ ಜಾರಕಿಹೊಳಿ ಶಾಸಕ :

ಅರಬಾಂವಿ ಕ್ಷೇತ್ರದ ಸಾರ್ವಜನಿಕರ ಕಾರ್ಯ ನಿಮಿತ್ಯ ಬೆಂಗಳೂರಿನಲ್ಲಿ ಉಳಿದುಕೊಂಡಿರುವೆ. ಹೀಗಾಗಿ ಮೂಡಲಗಿ ಪುರಸಭೆ ಚುನಾವಣೆಯಲ್ಲಿ ಭಾಗಿಯಾಗಲಿಕ್ಕೆ ಸಾಧ್ಯವಾಗಲಿಲ್ಲ. ಕೇವಲ ದೂರವಾಣಿ ಮೂಲಕ ಮೂಡಲಗಿ ಮತ್ತು ಗುರ್ಲಾಪೂರ ಪಟ್ಟಣದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಸಂಪರ್ಕಿಸಿ ಮೂಡಲಗಿ ಪಟ್ಟಣದ ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಕೋರಿಕೊಂಡಿದ್ದೆ. ನನ್ನ ವಿನಂತಿಯನ್ನು ಮನ್ನಿಸಿ ಬಿಜೆಪಿ ಅಭ್ಯರ್ಥಿಗಳನ್ನು ಹರಿಸಿರುವ ಮೂಡಲಗಿ-ಗುರ್ಲಾಪೂರ ಮತದಾರರಿಗೆ ಎಂದೆಂದೂ ಋಣಿಯಾಗಿರುವೆ. ನಮಗೆ ಸ್ಪಷ್ಟ ಬಹುಮತ ನೀಡಿರುವ ಮೂಡಲಗಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಒತ್ತುನೀಡುವೆ. ಪುರಸಭೆಯ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಶ್ರಮಿಸುವೆ. ಮತದಾರರಿಗೆ ಕೋಟಿ ವಂದನೆಗಳು.

Related posts: