RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ: ಕ್ಷೇತ್ರದಲ್ಲಿ ಅರಾಜಕತೆಯನ್ನು ಸೃಷ್ಠಿಸಿರುವ ಸ್ಥಳೀಯ ಶಾಸಕರಿಗೆ ಜನ ಪಾಠ ಕಲಿಸಲಿದ್ದಾರೆ : ಅಶೋಕ ಪೂಜಾರಿ

ಗೋಕಾಕ: ಕ್ಷೇತ್ರದಲ್ಲಿ ಅರಾಜಕತೆಯನ್ನು ಸೃಷ್ಠಿಸಿರುವ ಸ್ಥಳೀಯ ಶಾಸಕರಿಗೆ ಜನ ಪಾಠ ಕಲಿಸಲಿದ್ದಾರೆ : ಅಶೋಕ ಪೂಜಾರಿ 

ಘಟಪ್ರಭಾ ಪಟ್ಟಣದ ಎಸ್. ಡಿ. ಟಿ. ಕಾಲೇಜ್ ಮೈದಾನದಲ್ಲಿ ನಡೆಯಲಿರುವ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪನವರ ಚುನಾವಣಾ ಪ್ರಚಾರ ಕಾರ್ಯಕ್ರಮದ ವೇದಿಕೆ ತಯಾರಿಯನ್ನು ವೀಕ್ಷಿಸಿ ಬಿ.ಜೆ.ಪಿ. ಅಭ್ಯರ್ಥಿ ಅಶೋಕ ಪೂಜಾರಿ ಮಾತನಾಡಿದರು.

ಗೋಕಾಕ ಕ್ಷೇತ್ರದಲ್ಲಿ ಅರಾಜಕತೆಯನ್ನು ಸೃಷ್ಠಿಸಿರುವ ಸ್ಥಳೀಯ ಶಾಸಕರಿಗೆ ಜನ ಪಾಠ ಕಲಿಸಲಿದ್ದಾರೆ : ಅಶೋಕ ಪೂಜಾರಿ

ಗೋಕಾಕ ಮೇ 3: ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಅಧಿಕಾರಿವರ್ಗವನ್ನು ತನ್ನ ಅಂಕಿತದಲ್ಲಿಟ್ಟುಕೊಂಡು ಹಣಬಲ, ತೋಳ್ಬಲ ಮತ್ತು ಕಮೀಷನ್ ದಂಧೆಯ ಮೂಲಕ ಕ್ಷೇತ್ರದಲ್ಲಿ ಅರಾಜಕತೆಯನ್ನು ಸೃಷ್ಠಿಸಿರುವ ಸ್ಥಳೀಯ ಶಾಸಕರಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿ.ಜೆ.ಪಿ. ಅಭ್ಯರ್ಥಿ ಅಶೋಕ ಪೂಜಾರಿ ಹೇಳಿದರು.
ಅವರು ಗುರುವಾರ ಘಟಪ್ರಭಾ ಪಟ್ಟಣದ ಎಸ್. ಡಿ. ಟಿ. ಕಾಲೇಜ್ ಮೈದಾನದಲ್ಲಿ ಮೇ. 4 ರಂದು ನಡೆಯಲಿರುವ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪನವರ ಸಾರ್ವಜನಿಕ ಬೃಹತ್ ಚುನಾವಣಾ ಪ್ರಚಾರ ಕಾರ್ಯಕ್ರಮದ ವೇದಿಕೆ ತಯಾರಿಯನ್ನು ವೀಕ್ಷಿಸಿ ಸುದ್ದಿಗಾರರೊಡನೆ ಮಾತನಾಡಿದರು.
ಈ ಚುನಾವಣೆ ಕಾಂಗ್ರೇಸ್ ವಿರುದ್ಧ ಬಿ.ಜೆ.ಪಿ. ಅನ್ನುವುದಕ್ಕಿಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯಯುತ ರಾಜಕಾರಣ ನಂಬಿಕೊಂಡಿರುವವರ ವಿರುದ್ಧ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವವರ ಕದನ ಎಂದೇ ಸಾರ್ವಜನಿಕ ಚರ್ಚಾ ವಿಷಯವಾಗಿದೆ ಎಂದರು.
ಶುಕ್ರವಾರ ಸಂಜೆ 4 ಗಂಟೆಗೆ ಚುನಾವಣಾ ಪ್ರಚಾರಾರ್ಥವಾಗಿ ಆಗಮಿಸಲಿರುವ ಯಡಿಯೂರಪ್ಪನವರ ಕಾರ್ಯಕ್ರಮಕ್ಕೆ ಘಟಪ್ರಭಾ ಮತ್ತು ಸುತ್ತಲಿನ ಗ್ರಾಮಗಳಿಂದ 10 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷಿಯಿದೆ ಎಂದು ತಿಳಿಸಿದರು. ಅದರಂತೆ ಮೇ. 9 ರಂದು ಗೋಕಾಕ ನಗರದಲ್ಲಿ ಜನಸಮುದಾಯದ ಬಯಕೆಯಂತೆ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಕೊನೆಯ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಬಿ.ಜೆ.ಪಿ. ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೇಮಾ ಭಂಡಾರಿ ಮಾತನಾಡಿ, ದಬ್ಬಾಳಿಕೆ ರಾಜಕಾರಣಕ್ಕೆ ಬೇಸತ್ತಿರುವ ಜನ ಈ ಬಾರಿ ಬದಲಾವಣೆ ಬಯಸಿದ್ದು ಸಜ್ಜನ ರಾಜಕಾರಣಿ ಅಶೋಕ ಪೂಜಾರಿ ಅವರಿಗೆ ಕ್ಷೇತ್ರಾದ್ಯಂತ ಎಲ್ಲ ವರ್ಗಗಳ ಸಮುದಾಯದಿಂದ ಭಾರಿ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತಿದೆ. ನೂರಕ್ಕೆ ನೂರರಷ್ಟು ದಾಖಲೆ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಶಾಮಾನಂದ ಪೂಜೇರಿ, ಅನಿಲ ಉಪಾಧೈ, ದಸ್ತಗೀರ ಪೈಲವಾನ, ಚನ್ನಬಸಪ್ಪ ರುದ್ರಾಪೂರ, ರಾಮಪ್ಪಾ ದೇಮಣ್ಣವರ, ಮಹಾಂತೇಶ ಹಳ್ಳಿ, ಅಸದಖಾನ ಜಗದಾಳ, ಆದಪ್ಪ ಮಗದುಮ್ಮ, ಹಾಲಪ್ಪ ಕರಿಗಾರ, ಪ್ರಕಾಶ ಬಾಗೋಜಿ, ಸಾತಪ್ಪ ಗುಡಕೇತರ, ಹನಮಂತ ಸನದಿ ಸೇರಿದಂತೆ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

Related posts: