RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜೋಡಟ್ಟಿ ಅವರಿಗೆ ಕರವೇಯಿಂದ ಸನ್ಮಾನ

ಘಟಪ್ರಭಾ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜೋಡಟ್ಟಿ ಅವರಿಗೆ ಕರವೇಯಿಂದ ಸನ್ಮಾನ 

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜೋಡಟ್ಟಿ ಅವರಿಗೆ ಕರವೇಯಿಂದ ಸನ್ಮಾನ

ಘಟಪ್ರಭಾ ಫೆ 1:  ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಸೀತವ್ವಾ ದುಂಡಪ್ಪಾ ಜೋಡಟ್ಟಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದಿಂದ ಸತ್ಕರಿಸಿ ಗೌರವಿಸಲಾಯಿತು

ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಗುರುವಾರದಂದು ಘಟಪ್ರಭಾದಲ್ಲಿರುವ ಅವರ ಸಂಸ್ಥೆಯ ಕಛೇರಿಗೆ ಭೇಟಿ ನೀಡಿ ಅವರನ್ನು ಸತ್ಕರಿಸಿ ಗೌರವಿಸಿ ಮಾತನಾಡಿದ ಅವರು ಕಳೆದ 2 ದಶಕಗಳಿಂದ ಜಿಲ್ಲೆಯಲ್ಲಿ ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹಗಳಿರುಳು ಶ್ರಮಿಸುತ್ತಿರುವ ಶ್ರೀಮತಿ ಸೀತವ್ವಾ ಜೋಡಟ್ಟಿ ಅವರ ಕಾರ್ಯ ಇಡಿ ದೇಶಕ್ಕೆ ಮಾದರಿ ಎಂದು ಶ್ಲಾಘನೀಸಿದ್ದರು

ಈ ಸಂದರ್ಭದಲ್ಲಿ ಕರವೇ ಪಧಾಧಿಕಾರಿಗಳಾದ ಸತೇಪ್ಪಾ ಗಾಡಿವಡ್ಡರ , ನಿಜಾಮ ನಧಾಪ, ಅಮೀರಖಾನ ಜಗದಾಳ , ಕೃಷ್ಣಾ ಖಾನಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: