ಗೋಕಾಕ:ನೇಣು ಬಿಗಿದುಕೊಂಡು ಆತ್ಮಹತ್ಯೆ : ಗೋಕಾಕದಲ್ಲಿ ಘಟನೆ
ನೇಣು ಬಿಗಿದುಕೊಂಡು ಆತ್ಮಹತ್ಯೆ : ಗೋಕಾಕದಲ್ಲಿ ಘಟನೆ
ಗೋಕಾಕ ಡಿ 1: ನಗರದ ಎನ್ಎಸ್ಎಫ್ ಶಾಲೆಯ ಹತ್ತಿರ ಗಿಡವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಗೋಕಾಕಿನಲ್ಲಿ ನಡೆದಿದೆ .
ಯಲ್ಲಪ ಹೇಳವಪ್ಪ ವಿಭೂತಿ (32) ಸಾ.ಲೋಕಾಪೂರ ಆತ್ಮಹತ್ಯೆಗೆ ಶರಣಾದ ದುರ್ದೈವಿ . ಕಳೆದ ಹಲವು ದಿನಗಳಿಂದ ಗೋಕಾಕಿನ ತಂಬಾಕಿ ಅವರ ಜಾಗೆಯಲ್ಲಿ ವಾಸವಾಗಿದ್ದ ಈತ ಮಾನಸಿಕ ಅಸ್ವಸ್ತನಾಗಿದು ಮತ್ತು ಮದ್ಯ ವ್ಯಸನಿ ಆಗಿದನು ಎಂದು ತಿಳಿದು ಬಂದಿದೆ.
ಇಂದು ಮುಂಜಾನೆ ವಾಯು ವಿಹಾರಕ್ಕೆ ತೆರಳಿದ ಜನರು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ನಗರ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.