RNI NO. KARKAN/2006/27779|Saturday, May 18, 2024
You are here: Home » breaking news » ಗೋಕಾಕ : 19ನೇ ಶರಣ ಸಂಸ್ಕೃತಿ ಉತ್ಸವ : ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ ಅವರಿಗೆ ಈ ಬಾರಿಯ ಕಾಯಕಶ್ರೀ ಪ್ರಶಸ್ತಿ : ಮುರುಘರಾಜೇಂದ್ರ ಶ್ರೀ ಮಾಹಿತಿ

ಗೋಕಾಕ : 19ನೇ ಶರಣ ಸಂಸ್ಕೃತಿ ಉತ್ಸವ : ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ ಅವರಿಗೆ ಈ ಬಾರಿಯ ಕಾಯಕಶ್ರೀ ಪ್ರಶಸ್ತಿ : ಮುರುಘರಾಜೇಂದ್ರ ಶ್ರೀ ಮಾಹಿತಿ 

19ನೇ ಶರಣ ಸಂಸ್ಕೃತಿ ಉತ್ಸವ : ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ ಅವರಿಗೆ ಈ ಬಾರಿಯ ಕಾಯಕಶ್ರೀ ಪ್ರಶಸ್ತಿ : ಮುರುಘರಾಜೇಂದ್ರ ಶ್ರೀ ಮಾಹಿತಿ


ಗೋಕಾಕ ಡಿ 28 : ಬರುವ ಮಾರ್ಚ್ 1,2,3,ಮತ್ತು 4 ರಂದು
19ನೇ ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಬಾರಿಯ ಕಾಯಕಶ್ರೀ ಪ್ರಶಸ್ತಿಯನ್ನು ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಬುಧವಾರದಂದು ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಹಮ್ಮಿಕೊಂಡ 19 ನೇ ವರ್ಷದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಮಾರ್ಚ್ 1 ರಂದು ಬಸವಧರ್ಮ ಸಮಾವೇಶ, ಮಾರ್ಚ್ 2 ರಂದು ಕಾಯಕಶ್ರೀ ಪ್ರಶಸ್ತಿ ಮತ್ತು ಪತ್ರಕರ್ತರ ಸಮಾವೇಶ, ಮಾರ್ಚ 3 ರಂದು ಮಹಿಳಾ ಸಮಾವೇಶ ಹಾಗೂ ಮಾರ್ಚ 4 ರಂದು ಯುವ ಸಮಾವೇಶ ಹಮ್ಮಿಕೊಳ್ಳಲಾಗಿದೆ, ಪ್ರತಿದಿನದ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವಿದ್ವಾಂಸರು, ಶ್ರೀಗಳು ಭಾಗವಹಿಸಿ ತಮ್ಮ ವಿಚಾರಗಳನ್ನು ಉಣಬಡಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಪ್ರತಿದಿನ ಸಾಯಂಕಾಲ 6 ಘಂಟೆಗೆ ಜರುಗಲಿದ್ದು, ಸದ್ಬಕ್ತರು ಪ್ರತಿದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕು ಎಂದು ಮನವಿ ಮಾಡಿದರು.

ಈ ಬಾರಿಯ ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷರಾಗಿ ಮೂಡಲಗಿಯ ಸಂತೋಷ ಸೋನವಾಲಕರ , ಕಾರ್ಯದರ್ಶಿ ಮಂಜುನಾಥ್ ಸಣ್ಣಕ್ಕಿ, ಖಜಾಂಚಿ ಬಸವರಾಜ ಮುರುಗೋಡ ಅವರನ್ನು ಆಯ್ಕೆ ಮಾಡಲಾಯಿತು.
ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಸಾಹಿತಿಗಳಾದ ಡಾ.ಸಿ.ಕೆ ನಾವಲಗಿ, ಚಂದ್ರಶೇಖರ್ ಅಕ್ಕಿ, ಮುಖಂಡರುಗಳಾದ ಅಶೋಕ ಪೂಜಾರಿ, ಡಾ. ವಿಶ್ವನಾಥ್ ಸುಣ್ಣಧೋಳಿಮಠ, ಬಸವರಾಜ ಕೋಟಗಿ, ಶಂಕರ ಗೋರೋಶಿ, ಡಾ.ಮಹಾಂತೇಶ ಕಡಾಡಿ, ಚಂದ್ರಶೇಖರ್ ಕೊಣ್ಣೂರ, ಎಂ.ಡಿ.ಚುನಮರಿ ಸೇರಿದಂತೆ ಅನೇಕರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬಟಕುರ್ಕಿಯ ಚೌಕಿಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸೇರಿದಂತೆ ಮಠದ ನೂರಾರು ಸದ್ಭಕ್ತರು ಉಪಸ್ಥಿತರಿದ್ದರು .

Related posts: