RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ ಸತೀಶ ಜಾರಕಿಹೊಳಿ ಅಭಿಮಾನಿ

ಗೋಕಾಕ:ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ ಸತೀಶ ಜಾರಕಿಹೊಳಿ ಅಭಿಮಾನಿ 

ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ ಸತೀಶ ಜಾರಕಿಹೊಳಿ  ಅಭಿಮಾನಿ

ಗೋಕಾಕ ಮೇ 14 : ಯಮಕನಮರಡಿ  ಕಾಂಗ್ರೆಸ್ ಶಾಸಕ  ಸತೀಶ ಜಾರಕಿಹೊಳಿ  ಅವರು ಚುನಾವಣೆಯಲ್ಲಿ 50 ಸಾವಿರಕ್ಕೂ ಅಧಿಕ ಅಂತರದಿಂದ ಗೆಲುವು ಸಾಧಿಸಿದಲ್ಲಿ ಹುದಲಿ ಜಿಪಂ ಕ್ಷೇತ್ರದ ರಾಮಾಪೂರ ಗ್ರಾಮದ ನಿವಾಸಿ  ಶಾಸಕರ ಅಭಿಮಾನಿ ಮಾರುತಿ ಕೊಟಗಿ ರಾಮಾಪೂರ ಗ್ರಾಮದಿಂದ ಗೋಕಾಕ ನರಗದ ಗ್ರಾಮದೇವತೆ ಶ್ರೀ ಲಕ್ಷ್ಮಿ ದೇವಸ್ಥಾನದ ವರೆಗೆ ಸರಿ ಸುಮಾರು 40 ಕಿಲೋಮೀಟರ್ ವರೆಗೆ  ದೀಡ್ ನಮಸ್ಕಾರ ಹಾಕಿ, ಹರಕೆ ತೀರಿಸಿದ್ದಾರೆ.
ಜೆಡಿಎಸ್  ಅಭ್ಯರ್ಥಿ  ಮತ್ತು ಬಿಜೆಪಿ ಅಭ್ಯರ್ಥಿ  ತೀವ್ರ ಸ್ಪರ್ಧೆ ನೀಡಿದ್ದರು  ಈ ಹಿನ್ನಲೆಯಲ್ಲಿ ಮಾರುತಿ ಕೋಟಗಿ ಅವರು ಸತೀಶ ಜಾರಕಿಹೊಳಿ  ಅವರ ಗೆಲುವಿಗಾಗಿ ಗೋಕಾಕ ಲಕ್ಷ್ಮೀ ದೇವರಿಗೆ ಹರಕೆ ಹೊತ್ತು, ಶ್ರದ್ಧೆಯಿಂದ ಸಂಕಲ್ಪತೊಟ್ಟಿದ್ದರು.
ಚುನಾವಣೆಯ ಫಲಿತಾಂಶ ಬಂದ ಕೂಡಲೇ ಹರಕೆ ತೀರಿಸಲು ಅವರು ನಿರ್ಧರಿಸಿ ರವಿವಾರದಂದು ತಮ್ಮ ಗ್ರಾಮದ ಸಾಹುಕಾರ ಅವರ ಅಭಿಮಾನಿಗಳೊಂದಿಗೆ ‌ಸುಮಾರು 40 ಕಿಮಿ ದೂರ ಡೀಡ್ ಸಮಸ್ಕಾರ ಹಾಕುವ ಮೂಲಕ ತಾವು ಹೊತ್ತ  ಹರಕೆ ತೀರಿಸಿದ್ದಾರೆ.
ಡೀಡ್ ಸಮಸ್ಕಾರ ಹಾಕುತಾ ಗೋಕಾಕ ನಗರಕ್ಕೆ ಬಂದ  ಮಾರುತಿ ಕೋಟಗಿ ಅವರನ್ನು ಅರವಿಂದ ಕಾರಚಿ, ವಿವೇಕ ಜತ್ತಿ , ಆರೀಪ ಪೀರಜಾದೆ ಅವರು ಸಾಹುಕಾರರ ಪರವಾಗಿ ಅವರನ್ನು ಸತ್ಕರಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ರಾಮಪೂರ ಗ್ರಾಮದ ಮುಖಂಡರುಗಳಾದ ಫಕರುದ್ದೀನ ಮತ್ತೆಖಾನ, ಸೋಮ ಪಾವಡಿ, ಭೀಮಶಿ ದಂಡಾಯಿ, ಆಸೀಫ್ ಮತ್ತೆಖಾನ, ಬಾಬು ಬಾಳೇಕುಂದ್ರಿ  ರಾಜು ಮೋದಗಿ ಸಂತೋಷ ತುಕ್ಕಾರ, ಅಕ್ಬರ , ನಿಂಗಪ್ಪಾ ರಾಚನ್ನವರ, ರಾಮಗೋಡ ಹಿತ್ತಲಮನಿ , ಸರದಾರ ಮತ್ತೆಖಾನ ,ಕಲಪ್ಪ ದಂಡಾಯಿ, ಗೌಸಖಾನ ಬಾಳೇಕುಂದ್ರಿ , ಬಾಳಪ್ಟ ದಂಡಾಯಿ, ಸುನೀಲ್ ದಂಡಾಯಿ,ಮಂಜು ದಂಡಾಯಿ, ಅನ್ವರ ಮತ್ತೆಖಾನ ಉಪಸ್ಥಿತರಿದ್ದರು

Related posts: