RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಅಕ್ರಮವಾಗಿ ಹಾಕಲಾದ ಶೆಡ್ ಹಾಗೂ ಬೇಲಿಗಳ ತೆರವು ಗೋಳಿಸಿದ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ

ಘಟಪ್ರಭಾ:ಅಕ್ರಮವಾಗಿ ಹಾಕಲಾದ ಶೆಡ್ ಹಾಗೂ ಬೇಲಿಗಳ ತೆರವು ಗೋಳಿಸಿದ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ 

ಅಕ್ರಮವಾಗಿ ಹಾಕಲಾದ ಶೆಡ್ ಹಾಗೂ ಬೇಲಿಗಳ ತೆರವು ಗೋಳಿಸಿದ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ  

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜೂ 8 :   ಸಮೀಪದ ಪಾಮಲದಿನ್ನಿ ಗ್ರಾಮದಲ್ಲಿನ ಗಾಯರಾಣ ಜಮೀನದಲ್ಲಿ ಅಕ್ರಮವಾಗಿ ಹಾಕಲಾದ ಶೆಡ್ ಹಾಗೂ ಬೇಲಿಗಳನ್ನು ಸೋಮವಾರದಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪನವರ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಪಾಮಲದಿನ್ನಿ ಗ್ರಾಮದ ಸರ್ವೇ ನಂ.04 ರಲ್ಲಿ ಒಟ್ಟು 73 ಎಕರೆ ಸರ್ಕಾರಿ ಗಾಯರಾಣ ಜಮೀನು ಇದ್ದು ಅದರಲ್ಲಿ ಎರಡು ಎಕರೆ ಸರ್ಕಾರಿ ಪ್ರೌಡ ಶಾಲೆ ಹಾಗೂ ಒಂದಿಷ್ಟು ಜಾಗ ಗ್ರಾಮ ಪಂಚಾಯತಿ ಕಾರ್ಯಾಲಯ ಪಶು ಆಸ್ಪತ್ರೆ ಸೇರಿದಂತೆ ಸಮುದಾಯ ಭವನಕ್ಕೆ ನೀಡಲಾಗಿದೆ. ಇನ್ನೂಳಿದ ಸುಮಾರು 70 ಎಕರೆಕ್ಕೂ ಹೆಚ್ಚು ಜಾಗವನ್ನು ಗ್ರಾಮದ ಕೆಲ ಜನರು ಅತೀಕ್ರಮಣ ಮಾಡಿ ಅದರಲ್ಲಿ ಶಾಶ್ವತ ಮನೆಗಳು, ವ್ಯಾಪಾರ ಮಳಿಗೆಗಳು, ದನಗಳ ಶೆಡಗಳು ಹಾಗೂ ಕಸದ ತಿಪ್ಪೆಗಳನ್ನು ಹಾಕಿದಲ್ಲದೇ ಖಾಲಿ ಜಾಗದಲ್ಲಿ ತಂತಿ ಬೇಲಿ ಹಾಕಿ ಜಾಗವನ್ನು ಅತೀಕ್ರಮಣ ಮಾಡಿಕೊಂಡಿದ್ದಾರೆ. ಅಲ್ಲದೇ ಕೆಲವರು ಸರ್ಕಾರಿ ಜಮೀನು ಅನ್ನುವದು ಗೊತ್ತಿದ್ದರೂ ಸಹ ಇದರಲ್ಲಿ ಊಳಿಮೆ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಗ್ರಾಮಕ್ಕೆ ಆಗಮಿಸಿದ್ದ ಗೋಕಾಕ ತಹಶೀಲ್ದಾರರು ಸರ್ಕಾರಿ ಜಮೀನ ಅತೀಕ್ರಮಣ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದು ಅವರಿಗೆ ಜಾಗ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಯಾರೂ ಜಾಗವನ್ನು ಖಾಲಿ ಮಾಡದ ಕಾರಣ ಇಂದು ಪೊಲೀಸ ಇಲಾಖೆಯ ಸಹಾಯದೊಂದಿಗೆ ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರರು ಜೆಸಿಬಿ ಯಂತ್ರಗಳ ಮೂಲಕ ಅತೀಕ್ರಮಣ ತರವುಗೊಳಿಸಿದರು. ಕಾರ್ಯಚರಣೆಯಲ್ಲಿ ಮೂಡಲಗಿ ಸಿಪಿಐ ವೆಂಕಟೇಶ ಮುರನ್ನಾಳ, ಘಟಪ್ರಭಾ ಪಿ.ಎಸ್.ಐ ಹಾಲಪ್ಪಾ ಬಾಲದಂಡಿ, ಗ್ರಾ.ಪಂ ಪಿ.ಡಿ.ಓ ಎಸ್.ಎಲ್.ಬಬಲಿ, ಗ್ರಾಮ ಲೆಕ್ಕಾಧಿಕಾರಿ ಲಂಗೋಟಿ, ಗ್ರಾ.ಪಂ ಸದಸ್ಯರು ಸೇರಿದಂತೆ ಅನೇಕರು ಇದ್ದರು. ಅಧಿಕಾರಿಗಳ ನಿರ್ಲಕ್ಷ: ಗ್ರಾಮದ ಕೆಲ ಪ್ರಭಾವಿಗಳು ತಮ್ಮ ಪ್ರಭಾವ ಬಳಿಸಿ ಸರ್ಕಾರಿ ಜಾಗವನ್ನು ಮೇಲಿಂದ ಮೇಲೆ ಅತೀಕ್ರಮಣ ಮಾಡುತ್ತ ಬಂದಿದ್ದಾರೆ. ರಸ್ತೆಯ ಪಕ್ಕದಲ್ಲಿರುವ ಬಸ್ ತಂಗುದಾಣದ ಮುಂದೆ ಅಕ್ರಮ ಅಂಗಡಿ ನಿರ್ಮಿಸಿ ಬಸ್ ತಂಗುದಾಣವನ್ನು ಮುಚ್ಚಿ ಹಾಕಿದ್ದಾರೆ. ಸಂಬಂದಿಸಿದ ಅಧಿಕಾರಿಗಳು ಸರಿಯಾದ ಸಮಯಕ್ಕೆ ಯೋಗ್ಯ ಕ್ರಮ ಕೈಗೊಳ್ಳದಿರುವುದು ಅತೀಕ್ರಮಣಕ್ಕೆ ಮೂಲ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಂಪೂರ್ಣ ಜಾಗವನ್ನು ಅತೀಕ್ರಮಣದಿಂದ ಮುಕ್ತಗೊಳಿಸಿ ಸಾರ್ವಜನಿಕ ಉಪಯೋಗಕ್ಕಾಗಿ ಕಾಯ್ದಿರಬೇಕೆಂಬುದು ಜನರ ಆಗ್ರಹವಾಗಿದೆ. ಸರ್ಕಾರ ಜಾಗ ಅತೀಕ್ರಮಿಸಿ ಅದರಲ್ಲಿ ಶಾಶ್ವತ ಮನೆ ಅಂಗಡಿ ಜೊತೆಗೆ ಹೊಲ ಮಾಡಿರುವ ಬಗ್ಗೆ ದೂರುಗಳು ಬಂದಿವೆ. ಸದ್ಯ ಬೇಲಿ ಮತ್ತು ಶೆಡ್ಡ್‍ಗಳನ್ನು ತೆರವು ಗೊಳಿಸಲಾಗಿದೆ. ಶಾಶ್ವತ ಕಟ್ಟಡಗಳಿಗೆ ಸರ್ಕಾರದ ಆದೇಶ ಪಡೆದು ಕ್ರಮ ಕೈಗೊಂಡು ಹಂತ ಹಂತವಾಗಿ ಸಂಪೂರ್ಣ ಜಾಗವನ್ನು ಅತೀಕ್ರಮಣ ಮುಕ್ತಗೊಳಿಸಲಾಗುವುದು. ಪ್ರಕಾಶ ಹೊಳೆಪ್ಪನವರ, ತಹಶೀಲ್ದಾರರು ಗೋಕಾಕ  

Related posts: