RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ : ಪೊಲೀಸ , ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತಯರ ಕಾರ್ಯ ಶ್ಲಾಘನೀಯ : ಹನಮಂತ ದುರ್ಗನ್ನವರ

ಗೋಕಾಕ : ಪೊಲೀಸ , ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತಯರ ಕಾರ್ಯ ಶ್ಲಾಘನೀಯ : ಹನಮಂತ ದುರ್ಗನ್ನವರ 

ಪೊಲೀಸ , ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತಯರ ಕಾರ್ಯ ಶ್ಲಾಘನೀಯ : ಹನಮಂತ ದುರ್ಗನ್ನವರ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 24 :

 

 


ಕರೋನಾ ಮಹಾಮಾರಿಯಿಂದ ದೇಶದ ರಕ್ಷಣೆ ಮಾಡುವಲ್ಲಿ ವೈದ್ಯಕೀಯ ಇಲಾಖೆ, ಪೋಲಿಸ್ ಇಲಾಖೆಯ ಹಾಗೂ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ಮಾಜಿ ಗ್ರಾಪಂ ಸದಸ್ಯ ಹಾಗೂ ಸಮಾಜ ಸೇವಕ ಹನಮಂತ ದುರ್ಗನ್ನವರ ಹೇಳಿದರು.

ಶುಕ್ರವಾರದಂದು ನಗರದ ಸರಕಾರಿ ಆಸ್ಪತ್ರೆ ಆವರಣದಲ್ಲಿ ಕಾರ್ಯ ನಿರತ ಪೊಲೀಸ , ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ಧ ಉಪಹಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೋನಾ ಮಹಾಮಾರಿಯಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಜನರು ತಮ್ಮ ಮನೆಗಳಿಂದ ಹೊರ ಬರದಂತೆ ಸ್ಥಳೀಯ ಪೋಲಿಸ್ ಇಲಾಖೆ, ಆರೋಗ್ಯ ಸಿಬ್ಬಂದಿ, ಪೌರಕಾರ್ಮಿಕರು ತಮ್ಮ ಕುಟುಂಬಗಳನ್ನು ತೊರೆದು ನಮ್ಮ ಆರೋಗ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಹೀಗಾಗಿ ನಾವೆಲ್ಲರೂ ನಮ್ಮ ಮನೆಗಳಲ್ಲಿಯೇ ಇದ್ದು ಸರಕಾರ ಆದೇಶ ಪಾಲನೆ ಮಾಡುವ ಮೂಲಕ ಕರೋನಾ ಸೋಂಕನ್ನು ತಡೆಗಟ್ಟೋಣ ಬರುವ ಮೇ 3 ರವರೆಗೆ ಅಭಿಮಾನಿ ಬಳಗದ ವತಿಯಿಂದ ಕಾರ್ಯನಿರತ ಎಲ್ಲ ಇಲಾಖೆಯ ಸಿಬ್ಬಂದಿಗಳಿಗೆ ಮಧ್ಯಾಹ್ನದ ಊಪಹಾರದ ವ್ಯವಸ್ಥೆ ಮಾಡಲಾಗುವದು ಎಂದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂಧಿಗಳಿಗೆ ಡಿಎಸ್‍ಪಿ ಡಿ ಟಿ ಪ್ರಭು ಅವರು ಉಪಹಾರ ವಿತರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಭೀಮಶಿ ಭರಮಣ್ಣವರ, ಕಾಂತು ಎತ್ತಿನಮನಿ, ಸುರೇಶ ಸನದಿ, ಬಾಬು ಶೆಟ್ಟಿ, ಅಡಿವೇಶ ಮಜ್ಜಗಿ, ಮುತ್ತುರಾಜ ಜಮಖಂಡಿ, ಪ್ರದೀಪ ನಾಗನೂರ, ರಾಜು ಹೀರೆಅಂಬಿಗೇರ, ಸಂಜು ಮುಳಗುಂದ, ರವಿ ಹನಿಮನಾಳ, ಸತೀಶ ಮನ್ನಿಕೇರಿ, ಯಮನಪ್ಪಾ, ಗೋಪಾಲ ಕಲ್ಲೋಳಿ, ಅರ್ಜುನ, ಸುರೇಶ ಇಳಿಗೇರ ಸೇರಿದಂತೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳು ಇದ್ದರು.

Related posts: