ಘಟಪ್ರಭಾ:ರಂಗಮಂದಿರ ಕಾಮಗಾರಿಗೆ ಅಡಿಗಲ್ಲು ನೆರೇವೆರಿಸಿದ ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ

ರಂಗಮಂದಿರ ಕಾಮಗಾರಿಗೆ ಅಡಿಗಲ್ಲು ನೆರೇವೆರಿಸಿದ ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಡಿ 20 :
ಇಲ್ಲಿಗೆ ಸಮೀಪದ ಧುಪದಾಳ ಗ್ರಾಮಕ್ಕೆ ಕಾರ್ಮಿಕ ಧುರೀಣ ಅಂಬಿರಾವ ಪಾಟೀಲವರು ಆಗಮಿಸಿ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ ಹಾಗೂ ಶ್ರೀ ಮಾರುತಿ ದೇವರ ಕಾರ್ತೀಕ ಉತ್ಸವದಲ್ಲಿ ಉಭಯ ದೇವರ ದರ್ಶನ ಪಡೆದರು.
ತಾಲೂಕಾ ಪಂಚಾಯತಿ ಅನುದಾನದಲ್ಲಿ ಶ್ರೀಲಕ್ಷ್ಮೀದೇವಿ ಮಂದಿರದ ಆವರಣದಲ್ಲಿ ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ರಂಗಮಂದಿರ ಕಾಮಗಾರಿಗೆ ಶುಕ್ರವಾರದಂದು ಅಡಿಗಲ್ಲು ಸಮಾರಂಭ ನೇರವೇರಿಸಿದರು.
ಈ ಸಂಧರ್ಭದಲ್ಲಿ ಧುಪದಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಸ್.ಆಯ್.ಬೆನವಾಡೆ, ತಾ.ಪಂ ಸದಸ್ಯರಾದ ಲಗಮನ್ನಾ ನಾಗನ್ನವರ, ಪಂಚಾಯತಿ ಸದಸ್ಯರಾದ ರಾಜಶೇಖರ ರಜಪೂತ, ನಾಗರಾಜ ನಾಯಿಕ, ಬಾಹಬಲಿ ಕಡಹಟ್ಟಿ, ಶೀತಲ ದೇಮನ್ನವರ, ಗ್ರಾಮದ ಮುಖಂಡರಾದ ಮಹೇಶ ಪಾಟೀಲ, ಅಶೋಕ ಪರಪ್ಪನವರ, ಮದಾರಸಾಬ ಜಗದಾಳೆ, ಶಿವನಗೌಡಾ ಪಾಟೀಲ, ಆದಪ್ಪ ಮಗದುಮ್, ಧನಪಾಲ ನಂದೇಶ್ವರ, ಜಿನ್ನಪ್ಪ ಕಮತೆ, ಪರಶುರಾಮ ಗಾಡಿವಡ್ಡರ, ಲಗಮನ್ನಾ ಮಲ್ಲಾಪೂರೆ, ಕರೆಪ್ಪ ಧರ್ಮಟ್ಟಿ, ಬಾಳಪ್ಪ ಕರಿಗಾರ, ಪ್ರಕಾಶ ಮೇತ್ರಿ, ರಮೇಶ ಪಟಗುಂದಿ, ರಸೂಲ ಬಳಿಗಾರ, ಸಂಗಪ್ಪ ಆಸುಂಡಿ ಸೇರಿದಂತೆ ಇತರರು ಇದ್ದರು.