ಖಾನಾಪುರ:ಹೊತ್ತಿ ಉರಿದ ಸಾರಿಗೆ ಬಸ್ : ಖಾನಾಪುರದಲ್ಲಿ ಘಟನೆ

ಹೊತ್ತಿ ಉರಿದ ಸಾರಿಗೆ ಬಸ್ : ಖಾನಾಪುರದಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ ಖಾನಾಪುರ ಸೆ 24 :
ಖಾನಾಪುರ ತಾಲ್ಲೂಕಿನ ಕಾಲಮನಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಸೋಮವಾರ ಮಧ್ಯರಾತ್ರಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಎರಡೂ ವಾಹನಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಪಣಜಿಯಿಂದ ಹುಬ್ಬಳ್ಳಿ-ಗದಗ ಮಾರ್ಗವಾಗಿ ಮುಂಡರಗಿಗೆ ಹೊರಟಿದ್ದ ಮುಂಡರಗಿ ಘಟಕಕ್ಕೆ ಸೇರಿದ ರಾಜ್ಯ ಸಾರಿಗೆ ಬಸ್ ಇದಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನ ತೆರಳಿ ಸತತ 5 ಗಂಟೆ ಕಾರ್ಯಾಚರಣೆ ನಡೆಸುವ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಅಪಘಾತದ ಪರಿಣಾಮ ಬೆಳಗಾವಿ- ಗೋವಾ ನಡುವೆ ಎಂಟು ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು.