ಗೋಕಾಕ:ಶ್ರೀ ಲಕ್ಷ್ಮೀ ಮಂದಿರವನ್ನು ಸ್ವಚ್ಛಗೊಳಿಸಿ ಧಾರ್ಮಿಕ ಸಮಾನತೆಗೆ ನಾಂದಿ ಹಾಡಿದ ಕೊಣ್ಣೂರಿನ ಮುಸ್ಲಿಂ ಯುವಕರು

ಶ್ರೀ ಲಕ್ಷ್ಮೀ ಮಂದಿರವನ್ನು ಸ್ವಚ್ಛಗೊಳಿಸಿ ಧಾರ್ಮಿಕ ಸಮಾನತೆಗೆ ನಾಂದಿ ಹಾಡಿದ ಕೊಣ್ಣೂರಿನ ಮುಸ್ಲಿಂ ಯುವಕರು
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 25 :
ತಾಲೂಕಿನ ಚಿಗಡೊಳ್ಳಿ ಗ್ರಾಮದಲ್ಲಿ ನೆರೆ ಹಾವಳಿಯಿಂದ ಸಂಪೂರ್ಣವಾಗಿ ಮುಳುಗಡೆಯಾಗಿದ್ದ ಶ್ರೀ ಲಕ್ಷ್ಮೀ ಮಂದಿರವನ್ನು ಮುಸ್ಲಿಂ ಸಮಾಜ ಸಂಘಟನೆಯ ಕಾರ್ಯಕರ್ತರು ಸ್ವಚ್ಛಗೊಳಿಸುವ ಮೂಲಕ ಧಾರ್ಮಿಕ ಸಮಾನತೆಗೆ ನಾಂದಿ ಹಾಡಿದ್ದಾರೆ.
ರವಿವಾರದಂದು ತಾಲೂಕಿನ ಕೊಣ್ಣೂರ ಗ್ರಾಮದ ಏಕತಾ ಪರಿವಾರಿನ ಅಲ್-ಖೈರ ವೆಲ್ಪೇರ್ ಸೋಸಾಯಿಟಿ ಹಾಗೂ ರೆಹಮಾನ ಪೌಂಡಶೇನ್ ಮುಸ್ಲಿಂ ಜಮಾತನವರು ಕಳೆದ ಹಲವು ದಿನಗಳ ಹಿಂದೆ ಘಟಪ್ರಭಾ ನದಿಯ ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಡೆಯಾಗಿ ಕೆಸರು-ರಾಡಿಗಳಿಂದ ತುಂಬಿದ್ದ ಮಂದಿರವನ್ನು ಮುಸ್ಲಿಂ ಬಾಂಧವರು ಸ್ವಚ್ಛಗೊಳಿಸಿ ಭಕ್ತರಿಗೆ ಪೂಜೆ ಸಲ್ಲಿಸಲು ಅನುಕೂಲ ಮಾಡಿಕೊಟ್ಟಿರುವುದು ಏಕತಾ ಸಂದೇಶವನ್ನು ಸಾರಿದ್ದಾರೆ.
ಈ ಸಂದರ್ಭದಲ್ಲಿ ಮೌಲಾನಾ ಅಬ್ದುಲ್ಲಾ ಹೂರ್, ಅಬೀದ್ ಜಗದಾಳ, ಅರಬಾಜ್ ಹೊರಕೇರಿ, ಮಲ್ಲಿಕಸಾಬ ಮುನ್ನೋಳಿ, ಸರ್ದಾರ ದೇಸಾಯಿ, ಇಮ್ರಾನ ಮುಲ್ಲಾ, ಆಲಂ ನಾಯಿಕ, ಬಶೀರ ಯಲ್ಲೂರ, ಅಯ್ಯುಬ ದೇಸಾಯಿ ಸೇರಿದಂತೆ ಅನೇಕರು ಇದ್ದರು.