ಗೋಕಾಕ:ನೆರೆ ಸಂತ್ರಸ್ತರನ್ನು ಭೇಟಿಯಾಗದೆ ಪ್ರೇಕ್ಷಣೀಯ ಸ್ಥಳಗಳನ್ನು ವಿಕ್ಷೀಸಿ ಹೋದ ಕಸಾಪ ರಾಜ್ಯಾಧ್ಯಕ್ಷ ಅಧ್ಯಕ್ಷ ಮನು ಬಳಗಾರ

ನೆರೆ ಸಂತ್ರಸ್ತರನ್ನು ಭೇಟಿಯಾಗದೆ ಪ್ರೇಕ್ಷಣೀಯ ಸ್ಥಳಗಳನ್ನು ವಿಕ್ಷೀಸಿ ಹೋದ ಕಸಾಪ ರಾಜ್ಯಾಧ್ಯಕ್ಷ ಅಧ್ಯಕ್ಷ ಮನು ಬಳಗಾರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 23 :
ಕಸಾಪ ಕನ್ನಡ ಭವನವನ್ನು ವಿಕ್ಷೀಸಲು ಘೋಡಗೇರಿ ಗ್ರಾಮಕ್ಕೆ ಬಂದಿದ್ದ ಕಸಾಪ ರಾಜ್ಯಾಧ್ಯಕ್ಷ ಅಧ್ಯಕ್ಷ ಮನು ಬಳಗಾರ ನಿರಾಶ್ರಿತರನ್ನು ಭೇಟಿಯಾಗದೆ ಗೋಕಾಕ ಮತ್ತು ಗೋಡಚನಮಲ್ಕಿ ಜಲಪಾತಗಳನ್ನು ವಿಕ್ಷೀಸಿ ಹಾಗೆಯೇ ಹೋದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ
ಹಿಂದೆಂದೂ ಕಂಡು ಕಾಣದ ಮಹಾ ಪ್ರವಾಹದಿಂದ ಮನೆ ಕಳೆದುಕೊಂಡು ಸಾವಿರಾರು ಜನರು ನಿರಾಶ್ರಿತರಾಗಿ ಸರಕಾರ ತೆರೆದಿರುವ ಪರಿಹಾರ ಕೇಂದ್ರಗಳಲ್ಲಿ ವಾಸಿಸಿ, ಸಹಾಯ ಹಸ್ತ ಚಾಚುತ್ತಿರುವ ಸಂದರ್ಭದಲ್ಲಿ ಜಿಲ್ಲೆಗೆ ಮತ್ತು ಬಾರಿ ಪ್ರಮಾಣದಲ್ಲಿ ಹಾನಿಗೆ ಒಳಗಾದ ಗೋಕಾಕ ತಾಲೂಕಿಗೆ ಭೇಟಿ ನೀಡಿದ ಕಸಾಪ ರಾಜ್ಯಾಧ್ಯಕ್ಷ ಮನು ಬಳಗಾರ ಅವರು ಸೌಜನ್ಯಕ್ಕೂ ನೆರೆ ಪೀಡಿತ ಜನರಿಗೆ ಭೇಟಿಯಾಗದೆ ಪ್ರವಾಸಿ ತಾಣಗಳನ್ನು ನೋಡಿ ತೆರಳಿದ್ದಾರೆ
ಗುರುವಾರದಂದು ಜಿಲ್ಲೆಗೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಬಂದಿದ್ದ ಮನು ಬಳಗಾರ ಕಾರ್ಯಕ್ರಮ ಮುಗಿಸಿ ಹುಕ್ಕೇರಿಯ ಘೋಡಗೇರಿಯಲ್ಲಿ ಕಸಾಪದಿಂದ ಕಟ್ಟುತ್ತಿರುವ ಭವನವನ್ನು ವಿಕ್ಷೀಸಿ , ಗೋಕಾಕ ತಾಲೂಕಿನ ಗೋಡಚನಮಲ್ಕಿ ಮತ್ತು ಗೋಕಾಕ ಫಾಲ್ಸ ಪ್ರವಾಸಿ ತಾಣಗಳನ್ನು ಸುತ್ತಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿ ಸದ್ದು ಮಾಡುತ್ತಿವೆ.
ಕನ್ನಡ, ಕನ್ನಡ ಎಂದು ಊದುದ್ದ ಭಾಷಣಗಳನ್ನು ಬಿಗಿಯುವ ಮುಖಂಡರಿಗೆ ಪ್ರವಾಹದಿಂದ ಮನೆ,ವ್ಯಾಪಾರ ಕಳೆದುಕೊಂಡು ನಿರಾಶ್ರಿತರಾದ ಕನ್ನಡಿಗರ
ನೋವು ಅರ್ಥವಾಗದಿರುವದು ಖೇದಕರವಾಗಿದೆ.
ಗೋಕಾಕ ನಗರದ ಮತ್ತು ಸುತ್ತಮುತ್ತಲಿನ ಪ್ರದೇಶ ಕನ್ನಡಗರು ಯಾವ ಪರಿಸ್ಥಿಯನ್ನು ಅನುಭವಿಸುತ್ತಿದ್ದಾರೆಂಬ ಕಲ್ಪನೆ ಇದ್ದ ಗೋಕಾಕಿನ ಹಿರಿಯ ಮತ್ತು ಕಿರಿಯ ಸಾಹಿತಿಗಳಾದ ಚಂದ್ರಶೇಖರ ಅಕ್ಕಿ ,ಜಿಲ್ಲಾ ಕಸಾಪ ಅಧ್ಯಕ್ಷೆ ಶ್ರೀಮತಿ ಮಂಗಳಾ ಮೆಟ್ಟಗುಡ್ಡ್, ಶ್ರೀಮತಿ ರಜನಿ ಜಿರಗ್ಯಾಳ, ಗೋಕಾಕ ಕಸಾಪ ಅಧ್ಯಕ್ಷ ಮಹಾಂತೇಶ ತಾವಂಶಿ, ಮಹಾನಿಂಗ ಮಂಗಿ, ಜಯಾನಂದ ಮಾದರ ಅವರು ಇಲ್ಲಿನ ಪರಿಸ್ಥಿಯ ಬಗ್ಗೆ ಅವರಿಗೆ ಹೇಳದೆ ಅವರೊಂದಿಗೆ ರಮಣೀಯ ಸ್ಥಳಗಳನ್ನು ಸುತ್ತಾಡಿ ಸುದ್ದಿಯಾಗಿದ್ದಾರೆ