ಗೋಕಾಕ:ಸಂತ್ರಸ್ತರಿಗೆ ತುರ್ತು ಪರಿಹಾರದ 10 ಸಾವಿರ ರೂಗಳ ಚೆಕ್ಗಳನ್ನು ನಾಳೆಯಿಂದಲೇ ವಿತರಿಸಬೇಕು : ಅಂಜುಮ್ ಪ್ರವೇಜ್

ಸಂತ್ರಸ್ತರಿಗೆ ತುರ್ತು ಪರಿಹಾರದ 10 ಸಾವಿರ ರೂಗಳ ಚೆಕ್ಗಳನ್ನು ನಾಳೆಯಿಂದಲೇ ವಿತರಿಸಬೇಕು : ಅಂಜುಮ್ ಪ್ರವೇಜ್
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 21 :
ನೆರೆ ಹಾವಳಿಯಿಂದಾಗಿ ಹಾನಿಗೊಳಗಾದ ಸಂತ್ರಸ್ತರಿಗೆ ತುರ್ತು ಪರಿಹಾರದ 10 ಸಾವಿರ ರೂಗಳ ಚೆಕ್ಗಳನ್ನು ನಾಳೆಯಿಂದಲೇ ವಿತರಿಸಬೇಕು ಬಿದ್ದ ಮನೆಗಳಲ್ಲಿ ಶೇಖರಗೊಂಡ ಮಣ್ಣನ್ನು ತ್ವರಿತವಾಗಿ ಸ್ವಚ್ಛಗೊಳಿಸುವಂತೆ ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪ್ರವೇಜ್ ಅವರು ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದರು.
ಬುಧವಾರದಂದು ಮಧ್ಯಾನ್ಹ ನಗರದ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿರುವ ಸಂತ್ರಸ್ತರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ನೆರೆ ಪೀಡಿತ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ವಾಹನ ಹಾಗೂ ಕಾರ್ಮಿಕರನ್ನು ನಿಯೋಜಿಸಿ ಕೂಡಲೇ ಸ್ವಚ್ಛಗೊಳಿಸಿ ರೋಗ-ರುಜಿನಗಳಿಗೆ ಅವಕಾಶ ನೀಡದಂತೆ ಜಾಗೃತಿ ವಹಿಸಬೇಕೆಂದು ತಿಳಿಸಿದರು.
ಸಂಪೂರ್ಣ ಹಾನಿಗೊಳಗಾದ ಮನೆಗಳನ್ನು ಗುರುತಿಸುವ ಕಾರ್ಯವಾಗಬೇಕು. ಕುಡಿಯುವ ನೀರಿನ ವ್ಯವಸ್ತೆಯನ್ನು ಮಾಡಬೇಕು. ಗಂಜೀ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ವಸತಿಗಾಗಿ ಬಾಡಿಗೆ ಮನೆಗೆ ಹೋಗಲು ಮೊದಲು ಆದ್ಯತೆ ನೀಡಬೇಕು. ನಂತರ ಉಳಿದವರಿಗೆ ಶೆಡ್ ನಿರ್ಮಾಣಗಳನ್ನು ಮಾಡಿ ವಸತಿಯನ್ನು ಕಲ್ಪಿಸಿಕೊಡಬೇಕು. ಬಾಡಿಗೆ ಹಾಗೂ ಶೆಡ್ ನಿರ್ಮಿಸಲು ಒಟ್ಟು 50 ಸಾವಿರ ರೂಗಳನ್ನು ನೀಡಲಾಗುವುದು.
ಈ ಸಂದರ್ಭದಲ್ಲಿ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ, ಪೌರಾಯುಕ್ತ ಶಿವಾನಂದ ಹಿರೇಮಠ, ವಿ.ಎಸ್.ತಡಸಲೂರ, ಎಮ್.ಎಚ್.ಗಜಾಕೋಶ, ಜೆ.ಎಸ್.ತಾಂಬೂಳೆ, ಕುಮಾರ ಕೋಳಿ ಸೇರಿದಂತೆ ಅನೇಕರು ಇದ್ದರು.