ನೇಗಿನಹಾಳ:ಸಂಸದ ಅನಂತಕುಮಾರ ಹೆಗಡೆಗೆ ಸಂತ್ರಸ್ತರು ಹಿಗ್ಗಾ ಮುಗ್ಗಾ ತರಾಟೆ

ಸಂಸದ ಅನಂತಕುಮಾರ ಹೆಗಡೆಗೆ ಸಂತ್ರಸ್ತರು ಹಿಗ್ಗಾ ಮುಗ್ಗಾ ತರಾಟೆ
ನಮ್ಮ ಬೆಳಗಾವಿ ಸುದ್ದಿ , ನೇಗಿನಹಾಳ ಅ 12 :
ಜನರ ಪರವಾಗಿ ಪತ್ರಕರ್ತರೊಬ್ಬರು ಸಂತ್ರಸ್ತರ ಪರವಾಗಿ ಕೇಳಿದ ಪ್ರಶ್ನೆಗೆ ನೀನು ಮೊದಲು ಕ್ಯಾಮರಾ ಬಂದ ಮಾಡು ಎಂದು ಗರಂ ಆಗಿ ನಾನು ಏನೂ ಹೆಳಲ್ಲ ಎಂದ ಸಂಸದ,
ನೇಗಿನಹಾಳ ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ, ನಿರಾಶ್ರಿತರಿಗೆ ಮನೆಗಳಿಂದ ಹೊರಬಂದು ಕಾಳಜಿ ಕೇಂದ್ರಗಳಲ್ಲಿ ವಸತಿ ಕಲ್ಪಿಸಿದ್ದಾರೆ. ಜೊತೆಗೆ ಮಲಪ್ರಭಾ ನದಿಯ ಹಿನ್ನಿರಿನಿಂದ ನೇಗಿನಹಾಳ ಗ್ರಾಮದ ಕೆಲವು ಭಾಗ ಮಲೇರಿಯಾ ಪೀಡಿತ ಪ್ರದೇಶವಿದ್ದು ಮಳೆಗಾಲದಲ್ಲಿ ನೀರು ನಿಂತು ಮಲೇರಿಯಾ ಬರುವುದರಿಂದ ಇಲ್ಲಿನ ಜನರು ಸಂಪೂರ್ಣ ಮುಳಗಡೆ ಪ್ರದೇಶವೆಂದು ಘೋಷಿಸಿ ನಮ್ಮಗೆ ಶಾಶ್ವತ ಪುನರವಸತಿ ಕಲ್ಪಿಸಿ ಎಂದು ಕೇಳಿಕೊಳ್ಳಲು ಬೆನ್ನು ಹತ್ತಿದರೆ ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಯಾವುದೇ ಮಾತುಗಳನ್ನಾಡದೇ ಕೇವಲ ಪರಿಸ್ಥಿತಿ ನೋಡಿಕೊಂಡು ಹೋಗಲು ಬಂದಂತಿತು. ಇದರಿಂದ ಬೇಸರಗೊಂಡ ಜನತೆ ಕೇವಲ ಓಟು ಹಾಕಿಸಿಕೊಳ್ಳು ಮಾತ್ರ ಬರ್ತಾರೆ ನಮ್ಮ ಗೋಳು ಕೇಳುವುದಿಲ್ಲಾ ಎಂದು ತಮ್ಮ ಅಳಲು ತೊಡಿಕೊಳ್ಳಲಾರಂಬಿಸಿದರು.
ಹಳ್ಳಕ್ಕೆ ಬೃಹತ್ ಪ್ರಮಾನದ ಪ್ರವಾಹ ಬಂದು ಹಾಗೂ ಕೆರೆಕಟ್ಟೆಗಳು ಒಡೆದು ಸುಮಾರು 400ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಇಗ ನಿರಾಶ್ರಿತರಿಗೆ ಗ್ರಾಮದ ಗಂಜಿ (ಕಾಳಜಿ) ಕೇಂದ್ರದಲ್ಲಿ ಆಹಾರ ವಿತರಣೆ ಹಾಗೂ ವಸತಿ ವ್ಯವಸ್ಥೆ ನಡೆದಿದೆ. ನಾಡಿನಾದ್ಯಂತ ಹಲವಾರು ಸಂಘ-ಸಂಸ್ಥೆಗಳು ನಿರಾಶ್ರಿತರಿಗೆ ಅನ್ನ-ಬಟ್ಟೆ ಒದಗಿಸುತ್ತಿದ್ದಾರೆ.
ಅಲ್ಲಿನ ಸಾರ್ವಜನಿಕ ಸಮಸ್ಯೆ ಪರಿಹಾರವಾಗಬೇಕಾದರೆ ಮನೆಗಳಿಗೆ ನೀರು ಹೋಗಿರುವ ಹಾಗೂ ಪ್ರವಾಹದಿಂದ ನೀರು ಬರುವ ಭಯದಲ್ಲಿರುವ ಜನರನ್ನು ಸ್ಥಳಾಂತರಗೊಳಿಸಿದರೆ ಶಾಶ್ವತ ಪರಿಹಾರವೆಂದು ಸ್ಥಳೀಯ ಪತ್ರಕರ್ತರು ಸಾರ್ವಜನಿಕರ ಪರವಾಗಿ ಪ್ರಶ್ನಿಸಿದರು ಆ ಸಂದರ್ಭದಲ್ಲಿ ಕಿತ್ತೂರ ಮತಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಸಂಸದ ಅನಂತಕುಮಾರ ಹೆಗಡೆ ರವರು ದಯವಿಟ್ಟು ನೀವು ವಿಡಿಯೋ ಮಾಡುವುದು ನಿಲ್ಲಿಸಿ ಎಂದು ಪೋನ್ ಕಸಿದುಕೊಳ್ಳಲು ಆರಂಭಿಸಿದರು, ಇಲ್ಲವಾದರೆ ನಾವು ಮಾತನಾಡುವುದಿಲ್ಲವೆಂದು ಅಲ್ಲಿಂದ ಹೊರಟೆ ಬಿಟ್ಟರು.
ಶಾಸಕ ಮತ್ತು ಸಂಸದರು ಕೇವಲ ಪ್ರದೇಶ ನೋಡಿಕೊಂಡು ಹೋದರೆ ವಿನಃ ಜನಸಾಮಾನ್ಯರಿಗೆ ಸಾಂತ್ವನ ಅಥವಾ ಸರಕಾರದ ಸವಲತ್ತು ನೀಡುವ ಕುರಿತು ಮಾತನಾಡಲಿಲ್ಲ.
ನಂತರ ಬೈಲಹೊಂಗಲ ತಹಶಿಲ್ದಾರ ದೊಡ್ಡಪ್ಪ ಹೂಗಾರ ಗ್ರಾಮದಲ್ಲಿ ಸುಮಾರು 400ಕ್ಕೂ ಅಧಿಕ ಮನೆಗಳು ಸಂಪೂರ್ಣ ನಾಶಹೊಂದಿವೆ. ಜೊತೆಗೆ ಕೆರೆಯಿಂದ ಸುಮಾರು ಮನೆಗಳಿಗೆ ತೊಂದರೆಯಾಗಿದೆ, ಹಳ್ಳದ ದಡದಲ್ಲಿರುವ ಪ್ರದೇಶವನ್ನು ಮರಳಿ ಸರ್ವೆ ಕಾರ್ಯ ಮಾಡಲು ತಿಳಿಸಿ ಜನರಿಗೆ ಅನಕೂಲ ಮಾಡಿಕೊಡಲಾಗುವುದು ಎಂದು ಪರಿಸ್ಥಿತಿ ವಿವರಿಸಿದರು.
ಶಾಸಕ ಮತ್ತು ಸಂಸದರು ಪರಿಹಾರ ರೂಪದಲ್ಲಿ ಬ್ರೇಡ್ ವಿತರಿಸಲು ತಂದಿದ್ದರು ಅಲ್ಲಿನ ಪರಿಸ್ಥಿತಿಯಿಂದ ತಪ್ಪಿಸಿಕೊಂಡರೆ ಸಾಕೆಂದು ಬೇಡಾ ನಂತರ ವಿತರಿಸಿ ಎಂದು ತಮ್ಮ ಕಾರ್ಯಕರ್ತರಿಗೆ ತಿಳಿಸಿ ಮತ್ತೆ ಕಾರು ಏರಿದ ಘಟನೆ ನಡೆಯಿತು.