ಗೋಕಾಕ:ತಪಸ್ಸಿ ಗ್ರಾಮಕ್ಕೆ ವಾಯಾ ನಿಂಗಾಪೂರ (ದಂಡಿನ ಮಾರ್ಗವಾಗಿ) ಬಸ್ಸು ಸೌಲಭ್ಯ ಒದಗಿಸುವಂತೆ ವಿದ್ಯಾರ್ಥಿಗಳ ಆಗ್ರಹ
ತಪಸ್ಸಿ ಗ್ರಾಮಕ್ಕೆ ವಾಯಾ ನಿಂಗಾಪೂರ (ದಂಡಿನ ಮಾರ್ಗವಾಗಿ) ಬಸ್ಸು ಸೌಲಭ್ಯ ಒದಗಿಸುವಂತೆ ವಿದ್ಯಾರ್ಥಿಗಳ ಆಗ್ರಹ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 22 :
ತಾಲೂಕಿನ ತಪಸ್ಸಿ ಗ್ರಾಮಕ್ಕೆ ವಾಯಾ ನಿಂಗಾಪೂರ (ದಂಡಿನ ಮಾರ್ಗವಾಗಿ) ಬಸ್ಸು ಸೌಲಭ್ಯ ನೀಡುವಂತೆ ತಪಸ್ಸಿ ಕೆಮ್ಮನಕೂಲ. ಸಜ್ಜಿಹಾಳ ಹಾಗೂ ನಿಂಗಾಪೂರ ಗ್ರಾಮಗಳ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮಾಜಿ ನಗರಸಭೆ ಸದಸ್ಯ ಯುವ ಧುರೀಣ ಭೀಮಶಿ ಭರಮಣ್ಣವರ ನೇತ್ರತ್ವದಲ್ಲಿ ಸೋಮವಾರದಂದು ಕೆಎಸ್ಆರ್ ಟಿ ಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಈಗಿರುವ ತಪಸ್ಸಿ ಬಸ್ಸನಲ್ಲಿ ಹಲವಾರು ನಿಲ್ದಾಣಗಳಲ್ಲಿ ನಿಲ್ಲಿಸುತ್ತಿರುವದರಿಂದ ಶಾಲೆ ಹಾಗೂ ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಸಂಜೆ 4ಗಂಟೆಗೆ ತಪಸ್ಸಿ ಗ್ರಾಮಕ್ಕೆ ತೆರಳುವ ಬಸ್ಸಿನಲ್ಲಿ ತಪಸ್ಸಿ, ಕೆಮ್ಮನಕೂಲ ಹಾಗೂ ನಿಂಗಾಪೂರ ವಿದ್ಯಾರ್ಥಿಗಳಿಗೆ ದಟ್ಟನೆಯಲ್ಲಿ ಸಂಚರಿಸಬೇಕು. ಇಲ್ಲವಾದಲ್ಲಿ ಬೆಟಗೇರಿ ಅಥವಾ ಸುತ್ತಲಿನ ಬೇರೆ ಬಸ್ಸುಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದ್ದು ಸರಿಯಾದ ಬಸ್ಸು ವ್ಯವಸ್ಥೆ ಕಲ್ಪಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಕೆಎಸ್ಆರ್ಟಿಸಿ ವ್ಯವಸ್ಥಾಪಕ ಮಡಿವಾಳರ ಅವರು, ಈ ಕುರಿತು ಈಗಾಗಲೇ ನಮ್ಮ ಸಿಬ್ಬಂಧಿಯೊಂದಿಗೆ ಚರ್ಚೆ ಮಾಡಿದ್ದು ಅತಿ ಶೀಘ್ರದಲ್ಲಿ ತಪಸ್ಸಿ, ಕೆಮ್ಮನಕೂ ಹಾಗೂ ನಿಂಗಾಪೂರ ಗ್ರಾಮಗಳ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ಸಿನ ವ್ಯವಸ್ಥೆ ಕಲ್ಪಿಸುವದಾಗಿ ಭರವಸೆ ನೀಡಿದರು.
ಪವನ ಮಹಾಲಿಂಗಪೂರ, ಶಂಕರ ಭರಮನ್ನವರ, ಲಕ್ಷ್ಮಣ ನಾಯಕ, ಮಲ್ಲಪ್ಪ ದಂಡಿನ, ವಿದ್ಯಾರ್ಥಿಗಳಾದ ಮಂಜು ಪಾಟೀಲ, ಮದಗೊಂಡ ಬಡಿಗೇರ, ದುಂಡಪ್ಪ ಕಿಚಡಿ, ಸಿದ್ದಣ್ಣ ನಾಯಕ, ಬಸು ಕುರೇರ, ವಿಠ್ಠಲ ನಾಯಕ, ಭೀಮಪ್ಪ ಕುಲಗೋಡ, ರಮೇಶ ಕೊಪ್ಪದ, ದಶರಥ ಐದುಡ್ಡಿ, ಮಲ್ಲಪ್ಪ ನಾಯಕ, ಸಿದ್ದು ವಾಳದ, ಸದಾನಂದ ಬನ್ನಿಶೆಟ್ಟಿ, ರಾಯಪ್ಪ ಕಟ್ಟಿಕಾರ, ಪ್ರಕಾಶ ವಾಳದ, ಬಸವರಾಜ ನಿಗದಿ, ಹನಮಂತ ಹನಜಿ, ಪಾಂಡು ಸಾಯನ್ನವರ ಸೇರಿದಂತೆ 50ಕ್ಕೂ ಹೆಚ್ಚು ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.