RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಹೆಚ್ಚಿನ ಸಮಯ ತಮ್ಮ ಓದು ಬರಹದ ಕಡೆಗೆ ಗಮನ ನೀಡಬೇಕು: ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ

ಗೋಕಾಕ:ವಿದ್ಯಾರ್ಥಿಗಳು ಹೆಚ್ಚಿನ ಸಮಯ ತಮ್ಮ ಓದು ಬರಹದ ಕಡೆಗೆ ಗಮನ ನೀಡಬೇಕು: ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ 

ವಿದ್ಯಾರ್ಥಿಗಳು ಹೆಚ್ಚಿನ ಸಮಯ ತಮ್ಮ ಓದು ಬರಹದ ಕಡೆಗೆ ಗಮನ ನೀಡಬೇಕು: ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ

ಗೋಕಾಕ ಡಿ 5 : ಜಾತಿ, ಮತ, ಪಂಥ, ಲಿಂಗ ಹಾಗೂ ವ್ಯಕ್ತಿಯ ವ್ಯಕ್ತಿತ್ವಕ್ಕೆ ದಕ್ಕೆ ತರುವ ಕಾರ್ಯವನ್ನು ಮಾಡುವುದು ಅಪರಾಧವಾಗಿದ್ದು ಅಂತಹ ಕಾರ್ಯಗಳಲ್ಲಿ ಪಾಲ್ಗೊಳ್ಳಬಾರದೆಂದು ಗೋಕಾಕ ಉಪವಿಭಾಗದ ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ. ಹೇಳಿದರು.
ಮಂಗಳವಾರದಂದು ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗೋಕಾಕ ನಗರ ಠಾಣೆ ಹಾಗೂ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸಾಮಾಜಿಕ ಜಾಲತಾಣಗಳಾದ ಪೇಸ್‍ಬುಕ್ ಹಾಗೂ ವಾಟ್ಸಪ್‍ಗಳ ಬಳಕೆಯಲ್ಲಿ ಸತತವಾಗಿ ನಿರತರಾಗಿರುವ ಯುವ ಜನಾಂಗ ಹಾಗೂ ವಿದ್ಯಾರ್ಥಿಗಳು ಅದರಿಂದ ಹಾಳಾಗುತ್ತಿದ್ದಾರೆ. ಅಲ್ಲದೇ ಸೈಬರ್ ಕ್ರೈಮ್‍ನಂತಹ ಅಪರಾಧಗಳಲ್ಲಿ ತಮಗೆ ತಿಳಿದೂ ಅಥವಾ ತಿಳಿಯದೇ ಪಾಲ್ಗೊಳ್ಳುತ್ತಿದ್ದಾರೆ. ಮಾದಕ ವ್ಯಸನಿಗಳಾಗಿತ್ತಿರುವುದು ಕೂಡಾ ಸಮಾಜಕ್ಕೆ ಕಳವಳಕಾರಿಯಾದ ಸಂಗತಿಯಾಗಿದೆ. ಅವುಗಳನ್ನೆಲ್ಲ ಬಿಟ್ಟು ವಿದ್ಯಾರ್ಥಿಗಳು ಹೆಚ್ಚಿನ ಸಮಯ ತಮ್ಮ ಓದು ಬರಹದ ಕಡೆಗೆ ಗಮನ ನೀಡಬೇಕೆಂದು ತಿಳಿಸಿದರು.
ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುವ ಯುವ ಪೀಳಿಗೆಗೆ ಮೂಲ ಕಾರಣವೇ ಮಾದಕ ವಸ್ತುಗಳ ದಾಸರಾಗುವುದು. ತಮ್ಮ ಚಟಕ್ಕೆ ಬೇಕಾದ ಹಣದ ಸಲುವಾಗಿ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಅವರು ಮೊದಲು ತಮ್ಮ ಮನೆಯಿಂದಲೇ ತಮ್ಮ ಅಪಾರಾಧ ಚಟುವಟಿಕೆಗಳನ್ನು ಆರಂಭಿಸಿ ಸಮಾಜ ಕಂಟಕರಾಗುತ್ತಿದ್ದಾರೆಂದು ತಿಳಿಸಿದ ಅವರು ನಮ್ಮ ದೇಶದಲ್ಲಿ ಆಚಾರ-ವಿಚಾರಗಳು ಸಮೃದ್ದಿಯಾಗಿದ್ದು ಅವುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ವಾಯ್.ಹಾದಿಮನಿ ವಹಿಸಿದ್ದರು. ವೇದಿಕೆ ಮೇಲೆ ನಗರ ಠಾಣೆಯ ಪಿಎಸ್‍ಐ ಗುರುನಾಥ ಚವ್ಹಾಣ, ಗ್ರಾಮೀಣ ಠಾಣೆಯ ಪಿಎಸ್‍ಐ ಪ್ರದೀಪ ತಳಗೇರಿ ಇದ್ದರು.

Related posts: